ಆ್ಯಪ್ನಗರ

ಬಿಎಸ್‌ವೈ ಪರಿಶ್ರಮದಿಂದ ನೀರಾವರಿ ಯೋಜನೆಗೆ ಹಣ: ಬಿವೈಆರ್‌

ಬಿ.ಎಸ್‌.ಯಡಿಯೂರಪ್ಪ ಅವರ ನಿರಂತರ ಪರಿಶ್ರಮದ ಹಿನ್ನೆಲೆಯಲ್ಲಿ ರಾಜ್ಯ ಬಜೆಟ್‌ನಲ್ಲಿ ತಾಲೂಕು, ಜಿಲ್ಲೆಯ ನೀರಾವರಿ ಯೋಜನೆಗೆ ಹಣ ನೀಡಿದ್ದು, ಅದಕ್ಕಾಗಿ ಮುಖ್ಯಮಂತ್ರಿ, ನೀರಾವರಿ ಸಚಿವರಿಗೆ ಅಭಿನಂದನೆ ಸಲ್ಲಿಸುವುದಾಗಿ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

Vijaya Karnataka 10 Feb 2019, 5:00 am
ಶಿಕಾರಿಪುರ: ಬಿ.ಎಸ್‌.ಯಡಿಯೂರಪ್ಪ ಅವರ ನಿರಂತರ ಪರಿಶ್ರಮದ ಹಿನ್ನೆಲೆಯಲ್ಲಿ ರಾಜ್ಯ ಬಜೆಟ್‌ನಲ್ಲಿ ತಾಲೂಕು, ಜಿಲ್ಲೆಯ ನೀರಾವರಿ ಯೋಜನೆಗೆ ಹಣ ನೀಡಿದ್ದು, ಅದಕ್ಕಾಗಿ ಮುಖ್ಯಮಂತ್ರಿ, ನೀರಾವರಿ ಸಚಿವರಿಗೆ ಅಭಿನಂದನೆ ಸಲ್ಲಿಸುವುದಾಗಿ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
Vijaya Karnataka Web BYR-5


ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಾವೊಬ್ಬ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ದ ನಾಯಕ ಎನ್ನುವುದನ್ನು ಮರೆತು ತಾಲೂಕಿನ ರೈತರ ಹಿತದೃಷ್ಟಿಯಿಂದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಮನೆಗೆ ತೆರಳಿ ಯೋಜನೆ ಕುರಿತು ಚರ್ಚಿಸಿದ್ದಲ್ಲದೆ ಮಂಜೂರಿಗೆ ಮನವಿ ಮಾಡಿದ್ದರು. ಫೆ.3ರಂದು ನಡೆದ ಬೋರ್ಡ್‌ ಮೀಟಿಂಗ್‌, 6ರ ಸಂಜೆಯೂ ಮುಖ್ಯಮಂತ್ರಿ ಭೇಟಿ ಮಾಡಿ ಯೋಜನೆಗೆ ಹಣ ನೀಡುವ ಕುರಿತು ಚರ್ಚಿಸಿದ್ದರು ಎಂದರು.

ತಾಲೂಕಿನ ನೀರಾವರಿ ಯೋಜನೆ ಕುರಿತು ಹಿಂದಿನ ಸರಕಾರ ರಾಜಕೀಯ ದೃಷ್ಟಿಕೋನ ಇಟ್ಟುಕೊಂಡಿತ್ತು. ಅದಕ್ಕಾಗಿಯೇ ತಾವು ಸ್ವತಃ ನೀರಾವರಿ ಸಚಿವ ಎಂ.ಬಿ.ಪಾಟೀಲ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೆ ಪ್ರಯೋಜನವಾಗಿರಲಿಲ್ಲ. ಆದರೆ, ಈಗ ತಾಲೂಕಿನ ಕಾಂಗ್ರೆಸ್‌ ಮುಖಂಡರು ತಮ್ಮಿಂದಲೇ ಯೋಜನೆ ಜಾರಿಗೊಂಡಿದೆ ಎನ್ನುವುದಕ್ಕೆ ಯಾವುದೆ ನೈತಿಕ ಹಕ್ಕಿಲ್ಲ ಎಂದರು.

ಲೋಕಸಭೆ ಉಪ ಚುನಾವಣೆ ನಂತರ ಜೆಡಿಎಸ್‌ ಸ್ಥಳೀಯ ಮುಖಂಡರು ಜನರಿಗೆ ಮುಖ ತೋರಿಸಿರಲಿಲ್ಲ. ಬಜೆಟ್‌ನಲ್ಲಿ ಹಣ ಮಂಜೂರಿಗೆ ಬಿಎಸ್‌ವೈ ಪರಿಶ್ರಮ ಕಂಡು ತಾವೂ ಮುಖ್ಯಮಂತ್ರಿ ಭೇಟಿ ಮಾಡುವ ಚಿತ್ರವನ್ನು ಪತ್ರಿಕೆಗೆ ನೀಡಿ ಪ್ರಚಾರ ಪಡೆದಿದ್ದಾರೆ. ಕೇಂದ್ರ ಅಧಿಕಾರಿಗಳ ತಂಡ ಕರೆತಂದು ವರ್ಷವಿಡಿ ಯಾವ ನದಿಯಿಂದ ನೀರು ತರಬಹುದು ಎನ್ನುವ ಕಲ್ಪನೆಯನ್ನು ಬಿಜೆಪಿ ನೀಡಿದ ನಂತರ, ಅದನ್ನೆ ಬಂಡವಾಳ ಮಾಡಿಕೊಂಡು ಪ್ರಚಾರ ಪಡೆದಿದ್ದಾರೆ ಎಂದರು.

ಆರೋಪ ನಿರಾಧಾರ:

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಧ್ವನಿಸುರುಳಿಯಲ್ಲಿ ಮಾತನಾಡಿರುವುದು ಬಿ.ಎಸ್‌.ಯಡಿಯೂರಪ್ಪ ಅಲ್ಲ. ಚಿತ್ರರಂಗದ ಸಂಪರ್ಕ ಹೊಂದಿರುವ ಅವರು ರಾಜಕೀಯ ಕಾರಣಕ್ಕಾಗಿ ಇಂತಹ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಕಳೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಅನಿತಾಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿಯುವಾಗ ಕುಮಾರಸ್ವಾಮಿ ಏನು ಮಾಡಿದ್ದರು ಎಂದು ಪ್ರಶ್ನಿಸಿದರು.

ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಕೆ.ಎಸ್‌.ಗುರುಮೂರ್ತಿ, ತಾಲೂಕು ಬಿಜೆಪಿ ಅಧ್ಯಕ್ಷ ಕೊಳಗಿ ರೇವಣಪ್ಪ, ಕೆ.ಶೇಖರಪ್ಪ, ಟಿ.ಎಸ್‌.ಮೋಹನ್‌, ಜಿ.ಪಂ. ಸದಸ್ಯರಾದ ಮಮತಾ ಸಾಲಿ, ಅರುಂಧತಿ ರಾಜೇಶ್‌, ಅಕ್ಷ ತಾ ಶ್ರೀನಿವಾಸ್‌, ತಾ.ಪಂ. ಅಧ್ಯಕ್ಷ ಸುಬ್ರಹ್ಮಣ್ಯ ಕೌಲಿ, ರೇಣುಕಮ್ಮ, ಅಂಬಾರಗೊಪ್ಪ ಶೇಖರಪ್ಪ, ಚಂದ್ರೇಗೌಡ, ಚನ್ನವೀರಪ್ಪ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ