ಆ್ಯಪ್ನಗರ

ಗಮನ ಬೇರೆಡೆ ಸೆಳೆದು ಹಣ ಲೂಟಿ

ಗಮನ ಬೇರೆಡೆ ಸೆಳೆದು ವ್ಯಕ್ತಿಯೊಬ್ಬರ 3 ಲಕ್ಷ ರೂ.ಹಣ ದೋಚಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

Vijaya Karnataka 15 Mar 2019, 5:00 am
ಶಿವಮೊಗ್ಗ: ಗಮನ ಬೇರೆಡೆ ಸೆಳೆದು ವ್ಯಕ್ತಿಯೊಬ್ಬರ 3 ಲಕ್ಷ ರೂ.ಹಣ ದೋಚಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
Vijaya Karnataka Web money was looted
ಗಮನ ಬೇರೆಡೆ ಸೆಳೆದು ಹಣ ಲೂಟಿ


ಪೆನ್ಶನ್‌ ಮೊಹಲ್ಲಾ ನಿವಾಸಿ ಹಾಲಿನ ವ್ಯಾಪಾರಿ ಕುಮಾರ್‌ ಹಣ ಕಳೆದುಕೊಂಡಾತ. ನಗರದ ಬಿ.ಎಚ್‌.ರಸ್ತೆಯಲ್ಲಿರುವ ಬ್ಯಾಂಕ್‌ವೊಂದರಿಂದ ಹಣ ಪಡೆದು ಬೈಕ್‌ನಲ್ಲಿ ಬರುವಾಗ ಹಿಂಬದಿಯಿಂದ ಬಂದ ಇಬ್ಬರು ದುಷ್ಕರ್ಮಿಗಳು ಭುಜತಟ್ಟಿ ನಿಮ್ಮ ಹಣ ಬಿದ್ದಿರುವುದಾಗಿ ಹೇಳಿದ್ದಾರೆ. ತಕ್ಷ ಣ ಅವರು ರಸ್ತೆ ಪಕ್ಕಕ್ಕೆ ಬೈಕ್‌ ನಿಲ್ಲಿಸಿ ಕೆಳಗೆ ಬಿದ್ದಿದ್ದ 10 ರೂ. ನೋಟುಗಳನ್ನು ಆಯ್ದುಕೊಳ್ಳಲು ಶುರುಮಾಡಿದ್ದಾರೆ. ದುಷ್ಕರ್ಮಿಗಳು ರಸ್ತೆ ಪಕ್ಕ ನಿಂತಿದ್ದ ಅಟೋ ಸುತ್ತಲೂ ನೋಟುಗಳನ್ನು ಹಾಕಿದ್ದರಿಂದ ಅವರ ಹಣವನ್ನು ಆಯ್ದುಕೊಂದು ಒಂದು ಸುತ್ತು ಬರುವಷ್ಟರಲ್ಲಿ ಬೈಕ್‌ನಲ್ಲಿದ್ದ ಹಣವಿದ್ದ ಬ್ಯಾಗನ್ನು ಲಪಟಾಯಿಸಿದ್ದಾರೆ. ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಿ.ಎಚ್‌.ರಸ್ತೆಯ ಸಿಸಿ ಕ್ಯಾಮೆರಾಗಳ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಗಳ ಪತ್ತೆಗೆ ಕೋಟೆ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ