ಮಂಗ ಸಾವು, ಆತಂಕ
ಮಲೆನಾಡಿನ ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿದ್ದ ಮಂಗನ ಕಾಯಿಲೆ ಒಂದಿಷ್ಟು ಹತೋಟಿಗೆ ಬಂದಿದ್ದರೂ, ತಾಲೂಕಿನಲ್ಲಿ ಮಂಗಗಳು ಮೃತಪಡುತ್ತಿರುವುದು ಮುಂದಿವರಿದಿದೆ.
Vijaya Karnataka 13 Apr 2019, 5:00 am
ಹೊಸನಗರ : ಮಲೆನಾಡಿನ ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿದ್ದ ಮಂಗನ ಕಾಯಿಲೆ ಒಂದಿಷ್ಟು ಹತೋಟಿಗೆ ಬಂದಿದ್ದರೂ, ತಾಲೂಕಿನಲ್ಲಿ ಮಂಗಗಳು ಮೃತಪಡುತ್ತಿರುವುದು ಮುಂದಿವರಿದಿದೆ.
ಪಟ್ಟಣ ಸಮೀಪದ ಮೇಲಿನ ಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರಗೋಡಿನಲ್ಲಿ ಶುಕ್ರವಾರ ಮಂಗವೊಂದು ಮೃತಪಟ್ಟಿದೆ. ವಸತಿ ಪ್ರದೇಶದ ಸಮೀಪದಲ್ಲಿಯೇ ಪೊದೆ ನಡುವೆ ಮಂಗ ಮೃತಪಟ್ಟಿದ್ದು, ಪಶುವೈದ್ಯ, ಅರಣ್ಯ, ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮರಣೋತ್ತರ ಪರೀಕ್ಷೆ ನಡೆಸಿ, ಮೃತ ಮಂಗದ ರಕ್ತದ ಮಾದರಿಯನ್ನು ಪಡೆಯಲಾಗಿದೆ. ಈ ವರೆಗೆ ತಾಲೂಕಿನಲ್ಲಿ ಕೆಎಫ್ಡಿ ಸೋಂಕು ತಗುಲಿದವರ ಸಂಖ್ಯೆ ಬೆರಳೆಣಿಕೆಯಷ್ಟಿದ್ದರೂ, ಆತಂಕದ ಛಾಯೆ ಎಲ್ಲಡೆಯೂ ಇದೆ. ಕಳೆದ ಮೂರ್ನಾಲ್ಕು ದಿನಗಳಲ್ಲಿ ಸಂಪೆಕಟ್ಟೆ, ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಗಳು ಮೃತಪಟ್ಟಿದ್ದವು. ಮಂಗಗಳು ನಿರಂತರವಾಗಿ ಮೃತಪಡುತ್ತಿರುವುದು ಗ್ರಾಮಸ್ಥರ ಭೀತಿಯನ್ನು ಇಮ್ಮಡಿಗೊಳಿಸಿದೆ.
ಪಟ್ಟಣ ಸಮೀಪದ ಮೇಲಿನ ಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರಗೋಡಿನಲ್ಲಿ ಶುಕ್ರವಾರ ಮಂಗವೊಂದು ಮೃತಪಟ್ಟಿದೆ. ವಸತಿ ಪ್ರದೇಶದ ಸಮೀಪದಲ್ಲಿಯೇ ಪೊದೆ ನಡುವೆ ಮಂಗ ಮೃತಪಟ್ಟಿದ್ದು, ಪಶುವೈದ್ಯ, ಅರಣ್ಯ, ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮರಣೋತ್ತರ ಪರೀಕ್ಷೆ ನಡೆಸಿ, ಮೃತ ಮಂಗದ ರಕ್ತದ ಮಾದರಿಯನ್ನು ಪಡೆಯಲಾಗಿದೆ. ಈ ವರೆಗೆ ತಾಲೂಕಿನಲ್ಲಿ ಕೆಎಫ್ಡಿ ಸೋಂಕು ತಗುಲಿದವರ ಸಂಖ್ಯೆ ಬೆರಳೆಣಿಕೆಯಷ್ಟಿದ್ದರೂ, ಆತಂಕದ ಛಾಯೆ ಎಲ್ಲಡೆಯೂ ಇದೆ. ಕಳೆದ ಮೂರ್ನಾಲ್ಕು ದಿನಗಳಲ್ಲಿ ಸಂಪೆಕಟ್ಟೆ, ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಗಳು ಮೃತಪಟ್ಟಿದ್ದವು. ಮಂಗಗಳು ನಿರಂತರವಾಗಿ ಮೃತಪಡುತ್ತಿರುವುದು ಗ್ರಾಮಸ್ಥರ ಭೀತಿಯನ್ನು ಇಮ್ಮಡಿಗೊಳಿಸಿದೆ.