ಆ್ಯಪ್ನಗರ

ಅಭಿವೃದ್ಧಿ ವೇಗಕ್ಕೆ ದಿಕ್ಕು ತಪ್ಪುತ್ತಿರುವ ಮಾನ್ಸೂನ್‌

ಅಭಿವೃದ್ಧಿಯ ವೇಗಕ್ಕೆ ಸದ್ದಿಲ್ಲದೆ ಪರಿಸರ ಕಳೆದುಹೋಗುತ್ತಿದೆ. ವಾತಾವರಣದ ವ್ಯತ್ಯಾಸದಿಂದ ಮಾನ್ಸುನ್‌ ಮಾರುತಗಳು ದಿಕ್ಕು ತಪ್ಪುತ್ತಿವೆ ಎಂದು ಪ್ರಧಾನ ನ್ಯಾಯಾಧೀಶ ಸೈಯದ್‌ ಇಬ್ರಾಹಿಂ ಹೇಳಿದರು.

Vijaya Karnataka 9 Jul 2019, 5:00 am
ಶಿವಮೊಗ್ಗ : ಅಭಿವೃದ್ಧಿಯ ವೇಗಕ್ಕೆ ಸದ್ದಿಲ್ಲದೆ ಪರಿಸರ ಕಳೆದುಹೋಗುತ್ತಿದೆ. ವಾತಾವರಣದ ವ್ಯತ್ಯಾಸದಿಂದ ಮಾನ್ಸುನ್‌ ಮಾರುತಗಳು ದಿಕ್ಕು ತಪ್ಪುತ್ತಿವೆ ಎಂದು ಪ್ರಧಾನ ನ್ಯಾಯಾಧೀಶ ಸೈಯದ್‌ ಇಬ್ರಾಹಿಂ ಹೇಳಿದರು.
Vijaya Karnataka Web SMG-0807-2-15-8SMG4


ಪರಿಸರ ಮಿತ್ರ ಶಾಲಾ ಕಾರ್ಯಕ್ರಮ ಪ್ರಯುಕ್ತ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿಕ್ಷ ಕರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಎಲ್ಲ ವ್ಯತಿರಿಕ್ತ ಬದಲಾವಣೆಗಳ ಮಧ್ಯೆ ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತಾಗುತ್ತಿದೆ. ಹೀಗಾಗಿ, ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಮಹ್ವತದ ಕಾರ್ಯವನ್ನು ಶಿಕ್ಷ ಕರು ಮಾಡಬೇಕಿದೆ ಎಂದು ಹೇಳಿದರು.

ಮಕ್ಕಳಿಗೆ ನೀಡುವ ಶಿಕ್ಷಣ ಪರಿಸರದ ಬಗ್ಗೆ ಪ್ರಜ್ಞೆ ಮೂಡಿಸುವಂತಿರಬೇಕು. ಶಿಕ್ಷ ಣವಂತರು, ಜ್ಞಾನವಂತರು ಪರಿಸರವನ್ನು ನಿರ್ಲಕ್ಷಿಸುತ್ತಿದ್ದು, ಸರಿಯಾದ ಬೆಳವಣಿಗೆ ಅಲ್ಲ ಎಂದರು.

ನ್ಯಾಯಾಧೀಶ ರಿಲಿಕ್ಸ್‌ ಅಲ್ಫ್ಯಾನ್ಸೋ ಅಂತೋನಿ ಮಾತನಾಡಿ, ನಿತ್ಯ ಜೀವನದಲ್ಲಿ ತಿಳಿದೋ ತಿಳಿಯದೆಯೋ ಅನೇಕ ರೀತಿಯಲ್ಲಿ ಪರಿಸರ ನಾಶದ ಕೆಲಸ ಮಾಡುತ್ತಿದ್ದೇವೆ ಎಂದರು.

ಕ್ಷೇತ್ರ ಶಿಕ್ಷ ಣಾಧಿಕಾರಿ ಬಿಂಬ ಮಾತನಾಡಿ, ಎಲ್ಲ ಶಾಲೆಗಳು ತಮ್ಮ ಜತೆಯಲ್ಲಿ ಸಮುದಾಯವನ್ನು ತೊಡಗಿಸಿಕೊಂಡು ಶಾಲೆಯ ಆವರಣವನ್ನು ಸುಂದರವಾಗಿ ಇಟ್ಟುಕೊಳ್ಳಬಹುದು ಎಂದು ಸಲಹೆ ನೀಡಿದರು.

ಸಹಾಯಕ ಸರಕಾರಿ ಅಭಿಯೋಜಕಿ ಜ್ಯೋತಿ ಅಧ್ಯಕ್ಷ ತೆ ವಹಿಸಿದ್ದರು. ಅಧ್ಯಕ್ಷ ರು ಕಿಡ್ಸ್‌ ಸಂಸ್ಥೆ ಅಧ್ಯಕ್ಷ ಚಂದ್ರಶೇಖರ್‌, ಪರಿಸರ ಅಧ್ಯಯನ ಕೇಂದ್ರದ ಎಸ್‌.ಚಂದ್ರಶೇಖರ್‌, ಕಾರ್ಯಕ್ರಮ ಸಂಯೋಜಕ ದಿನೇಶ್‌ ಹೊಸನಗರ ಉಪಸ್ಥಿತರಿದ್ದರು. ಸಾಗರದ ಬಿಆರ್‌ಸಿ ಯೋಗೀಶ್‌ ಸ್ವಾಗತಿಸಿದರು. ಬೆಳಲಮಕ್ಕಿ ಶಾಲೆ ಮಕ್ಕಳು ಪ್ರಾರ್ಥಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ