ಆ್ಯಪ್ನಗರ

ಸಂಗೀತ ಮನೋವಿಕಾಸಕ್ಕೆ ಪ್ರೇರಕ

ಸಂಗೀತ ಮತ್ತು ಹಾಡುಗಾರಿಕೆ ಮನೋರಂಜನೆಗೆ ಮಾತ್ರ ಸೀಮಿತವಾಗಬಾರದು. ಸಂಗೀತ ಮನೋವಿಕಾಸಕ್ಕೆ ಪೂರಕವಾಗಿರುವುದು ದೃಢಪಟ್ಟಿದೆ ಎಂದು ಸಾಮಾಜಿಕ ಕಾರ‍್ಯಕರ್ತ ಹನಿಯ ರವಿ ಹೇಳಿದರು.

Vijaya Karnataka 7 Feb 2019, 5:00 am
ಹೊಸನಗರ: ಸಂಗೀತ ಮತ್ತು ಹಾಡುಗಾರಿಕೆ ಮನೋರಂಜನೆಗೆ ಮಾತ್ರ ಸೀಮಿತವಾಗಬಾರದು. ಸಂಗೀತ ಮನೋವಿಕಾಸಕ್ಕೆ ಪೂರಕವಾಗಿರುವುದು ದೃಢಪಟ್ಟಿದೆ ಎಂದು ಸಾಮಾಜಿಕ ಕಾರ‍್ಯಕರ್ತ ಹನಿಯ ರವಿ ಹೇಳಿದರು.
Vijaya Karnataka Web SMR-5hosp3


ಗ್ರಾಮಭಾರತಿ ಟ್ರಸ್ಟ್‌, ರಾಷ್ಟ್ರೋತ್ಥಾನ ಬಳಗ, ಕಾರಣಗಿರಿ ಆಶ್ರಯದಲ್ಲಿ ಹೊಸನಗರ ಗಾಯತ್ರಿ ಮಂದಿರದಲ್ಲಿ ಭಾನುವಾರ ತ್ಯಾಗರಾಜರ ಆರಾಧನೆ ಪ್ರಯುಕ್ತ ಏರ್ಪಡಿಸಿದ್ದ ಸಂಗೀತೋತ್ಸವದ ಸಮಾರಂಭದಲ್ಲಿ ಅವರು ಮಾತನಾಡಿದರು.

ತ್ಯಾಗರಾಜರಂಥ ಸಂಗೀತ ಕಲಾವಿದರು ಭಕ್ತಿಪರವಶರಾಗಿ ಹಾಡುತ್ತಿದ್ದರು. ಸಂಗೀತದಲ್ಲಿನ ಶಕ್ತಿ ಪ್ರತಿಯೊಬ್ಬರನ್ನು ತನ್ಮಯಗೊಳಿಸುವ ಶಕ್ತಿ ಹೊಂದಿದೆ ಎಂದರು.

ಹೊನ್ನಾಳಿಯ ಸಂಗೀತ ಕಲಾವಿದೆ ವಿನೀತಾ ಪ್ರಕಾಶ್‌ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಎನ್‌.ಡಿ.ನಾಗೇಂದ್ರರಾವ್‌ ಅಧ್ಯಕ್ಷ ತೆ ವಹಿಸಿದ್ದರು.

ಮಾಜಿ ಸೈನಿಕ ಕೆ.ಪಿ.ಕೃಷ್ಣಮೂರ್ತಿ, ಗಾನಸುಧಾ ಸಂಗೀತ ಶಾಲಾ ಶಿಕ್ಷ ಕಿ ಗಾಯತ್ರಿ ನಾಗರಾಜ್‌, ಅನುರಾಧಾ, ಅನುಪಮಾ ಸುರೇಶ್‌, ಲತಾ ಹೆಗಡೆ ಮತ್ತಿತರರು ಇದ್ದರು. ಗಾಯತ್ರಿ ಅರುಣ್‌ ನಿರೂಪಿಸಿದರು. ಹೊಸನಗರದ ಗಾನಸುಧಾ ಸಂಗೀತ ಶಾಲೆ, ಸನ್ಮತಿ ಸಂಗೀತ ಶಾಲೆ, ರಾಗಲಹರಿ ಸಂಗೀತ ಶಾಲೆ, ಭಾವಗಾನ ಸಂಗೀತಶಾಲೆ, ನಗರದ ಅಮೃತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ ನಡೆಯಿತು. ವಿನೀತಾ ಪ್ರಕಾಶ್‌ ಅವರ ಸಂಗೀತ ಕಛೇರಿಯಲ್ಲಿ ವೀಣಾ ಗಣೇಶ್‌ಮೂರ್ತಿ ವಾಯಲಿನ್‌ನಲ್ಲಿ ಹಾಗೂ ರಮಾಕಾಂತ ಸಿಗದಾಳು ಮೃದಂಗದಲ್ಲಿ ಸಹಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ