ಆ್ಯಪ್ನಗರ

ಸಚಿವ ಈಶ್ವರಪ್ಪಗೆ ಕೊಲೆ ಬೆದರಿಕೆ

ಜಿಲ್ಲಾಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರಿಗೆ ಚೆನ್ನೈಯಿಂದ ಕರೆ ಮಾಡಿದ ಅನಾಮಿಕನೊಬ್ಬ ಪೌರತ್ವ ತಿದ್ದುಪಡಿ ಕಾಯಿದೆ ಪರ ಮಾತನಾಡದಂತೆ ಬೆದರಿಕೆ ಹಾಕಿದ್ದಾನೆ.

Vijaya Karnataka 4 Jan 2020, 5:00 am
ಶಿವಮೊಗ್ಗ: ಜಿಲ್ಲಾಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರಿಗೆ ಚೆನ್ನೈಯಿಂದ ಕರೆ ಮಾಡಿದ ಅನಾಮಿಕನೊಬ್ಬ ಪೌರತ್ವ ತಿದ್ದುಪಡಿ ಕಾಯಿದೆ ಪರ ಮಾತನಾಡದಂತೆ ಬೆದರಿಕೆ ಹಾಕಿದ್ದಾನೆ.
Vijaya Karnataka Web murder threat to minister eshwarappa
ಸಚಿವ ಈಶ್ವರಪ್ಪಗೆ ಕೊಲೆ ಬೆದರಿಕೆ


ಚೆನ್ನೈನ ಸ್ಥಿರ ದೂರವಾಣಿಯಿಂದ ಕರೆ ಮಾಡಿದಾತ, ಪೌರತ್ವ ತಿದ್ದುಪಡಿ ಕಾಯಿದೆ ಬಗ್ಗೆ ಮಾತನಾಡಿದಲ್ಲಿಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ. ಈಶ್ವರಪ್ಪ ಅವರು ಮರು ಉತ್ತರ ನೀಡದೆ ಸಂಪರ್ಕ ಕಡಿತಗೊಳಿಸಿದ್ದಾರೆ. ವಿಮಾ ಕಂಪನಿ ಪ್ರತಿನಿಧಿ ಎಂದು ಹೇಳಿ ಹಿಂದಿಯಲ್ಲಿಮಾತು ಆರಂಭಿಸಿ ಆನಂತರ ಪೌರತ್ವ ತಿದ್ದುಪಡಿ ಕಾಯಿದೆ ಕುರಿತು ಮಾತನಾಡಿದ್ದಾನೆ.

ಸಾಮಾನ್ಯವಾಗಿ ಮೊಬೈಲ್‌ ಕರೆಗಳನ್ನು ಅವರ ಆಪ್ತ ಸಹಾಯಕರು ಸ್ವೀಕರಿಸುತ್ತಾರೆ. ವಿಮಾ ಕಂಪನಿ ಪ್ರತಿನಿಧಿ ಎಂಬ ಕಾರಣಕ್ಕೆ ಸಚಿವರಿಗೆ ಮಾತನಾಡಲು ಮೊಬೈಲ್‌ ಕೊಡಲಾಗಿತ್ತು. ಆನಂತರವೂ ಅದೇ ಸಂಖ್ಯೆಯಿಂದ ಕರೆ ಬಂದಾಗ ಕಡಿತಗೊಳಿಸಲಾಗಿದೆ. ಕಳೆದ ಎರಡು ದಿನದಲ್ಲಿಮೂರ್ನಾಲ್ಕು ಬಾರಿ ಕರೆ ಮಾಡಿದ್ದಾನೆ. ಆದರೆ, ಸಚಿವರು ಇದರ ಬಗ್ಗೆ ಪೊಲೀಸರಿಗೆ ದೂರು ನೀಡಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ