ಆ್ಯಪ್ನಗರ

ರಾಷ್ಟ್ರೀಯ ಕುವೆಂಪು ಪುರಸ್ಕಾರ

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕೊಡಮಾಡುವ ರಾಷ್ಟ್ರೀಯ ಕುವೆಂಪು ಪುರಸ್ಕಾರಕ್ಕೆ 2018ನೇ ಸಾಲಿಗೆ ಇಬ್ಬರು ಖ್ಯಾತ ಉರ್ದು ಸಾಹಿತಿಗಳಾದ ಹೈದರಾಬಾದ್‌ನ ಜೀಲಾನಿ ಬಾನೊ ಮತ್ತು ನೊಯ್ಡಾದ ರತನ್‌ಸಿಂಗ್‌ ಅವರು ಆಯ್ಕೆಯಾಗಿದ್ದಾರೆ.

Vijaya Karnataka 13 Dec 2018, 5:00 am
ಶಿವಮೊಗ್ಗ : ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕೊಡಮಾಡುವ ರಾಷ್ಟ್ರೀಯ ಕುವೆಂಪು ಪುರಸ್ಕಾರಕ್ಕೆ 2018ನೇ ಸಾಲಿಗೆ ಇಬ್ಬರು ಖ್ಯಾತ ಉರ್ದು ಸಾಹಿತಿಗಳಾದ ಹೈದರಾಬಾದ್‌ನ ಜೀಲಾನಿ ಬಾನೊ ಮತ್ತು ನೊಯ್ಡಾದ ರತನ್‌ಸಿಂಗ್‌ ಅವರು ಆಯ್ಕೆಯಾಗಿದ್ದಾರೆ.
Vijaya Karnataka Web BNG-SMG-1212-2-15-12 KUVEMPU JEELANI BANO


ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ನಾಡೋಜ ಪ್ರೊ. ಹಂಪ ನಾಗರಾಜಯ್ಯ ಅವರ ಅಧ್ಯಕ್ಷತೆಯಲ್ಲಿ ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಕುವೆಂಪು ಪುರಸ್ಕಾರ ಆಯ್ಕೆ ಸಮಿತಿಯು ಇಬ್ಬರು ಸಾಹಿತಿಗಳನ್ನು ಆಯ್ಕೆ ಮಾಡಿದೆ.

ಈ ಇಬ್ಬರೂ ಸಾಹಿತಿಗಳಿಗೆ ಕುವೆಂಪು ಅವರ ಜನ್ಮದಿನೋತ್ಸವವಾದ ಡಿ.29ರಂದು ತೀರ್ಥಹಳ್ಳಿ ತಾಲೂಕು ಕುಪ್ಪಳಿಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡುವರು. ಪುರಸ್ಕಾರವು ಐದು ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

83 ವರ್ಷದ ಜೀಲಾನಿ ಬಾನೊ ಹಾಗೂ 91 ವರ್ಷದ ರತನ್‌ಸಿಂಗ್‌ ಅವರು ಆಧುನಿಕ ಉರ್ದು ಸಾಹಿತ್ಯದ ಶ್ರೀಮಂತಿಕೆ ಹಾಗೂ ಸತ್ವವನ್ನು ತಮ್ಮ ಕಥೆ, ಕಾದಂಬರಿ, ಅನುವಾದಗಳನ್ನು ಒಳಗೊಂಡ ವಿಶಿಷ್ಟ ಕೃತಿಗಳ ಮೂಲಕ ಹೆಚ್ಚಿಸಿದವರು. ಉರ್ದು ಸಾಹಿತ್ಯ ಕ್ಷೇತ್ರದಲ್ಲಿ ಇವರಿಬ್ಬರ ಸೇವೆ ಅತ್ಯಂತ ಮಹತ್ವದ್ದಾಗಿದೆ.

ಆಯ್ಕೆ ಪ್ರಕ್ರಿಯೆಯಲ್ಲಿ ಒರಿಯಾ, ಕೊಂಕಣಿ, ತೆಲುಗು, ಉರ್ದು, ಬಂಗಾಳಿ, ನೇಪಾಳಿ, ಮರಾಠಿ ಭಾಷೆಗಳ ಹಿರಿಯ ಲೇಖಕರು, ಭಾರತೀಯ ಸಾಹಿತ್ಯಕ್ಕೆ ನೀಡಿರುವ ಕೊಡುಗೆಯ ಆಯಾಮ ಮತ್ತು ಅನನ್ಯತೆಯ ಸ್ವರೂಪವನ್ನು ಚರ್ಚಿಸಲಾಯಿತು. ಹಿಂದಿ ಲೇಖಕ ಡಾ. ಗಂಗಾಪ್ರಸಾದ್‌ ಬಿಮಲ್‌, ಜೆಎನ್‌ಎನ್‌ ವಿಶ್ವವಿದ್ಯಾಲಯದಲ್ಲಿ ಭಾರತೀಯ ಭಾಷಾ ಸಾಹಿತ್ಯ ಪ್ರಾಧ್ಯಾಪಕರಾಗಿರುವ ಡಾ. ಗೋವಿಂದ ಪ್ರಸಾದ್‌, ಡಾ.ಅನ್ವರ್‌ ಪಾಷ ಹಾಗೂ ಡಾ.ಪುರುಷೋತ್ತಮ ಬಿಳಿಮಲೆ ಅವರು ಪುರಸ್ಕಾರ ಆಯ್ಕೆ ಸಮಿತಿ ಸದಸ್ಯರಾಗಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ