ಆ್ಯಪ್ನಗರ

ಪಠ್ಯೇತರಕ್ಕೆ ಒತ್ತು ನೀಡುವ ಶಿಕ್ಷಣ ನೀತಿ ಅಗತ್ಯ

ನಮ್ಮ ಪಠ್ಯಕ್ರಮಗಳು ರಾಜಕೀಯ ಪ್ರೇರಿತವಾಗುತ್ತಿದ್ದು, ಆಧುನಿಕತೆಯ ದಿನಮಾನಗಳಿಗೆ ಪೂರಕವಾಗಿ ಪಠ್ಯಕ್ರಮ ರಚನೆಯಾಗಬೇಕು. ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲು ಸರಕಾರಗಳು ಅಗತ್ಯ ನೀತಿ ರೂಪಿಸಬೇಕೆಂದು ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಕೆ.ಆರ್‌.ಅನಘ ಹೇಳಿದರು.

Vijaya Karnataka 14 Jan 2019, 5:00 am
ಶಿವಮೊಗ್ಗ : ನಮ್ಮ ಪಠ್ಯಕ್ರಮಗಳು ರಾಜಕೀಯ ಪ್ರೇರಿತವಾಗುತ್ತಿದ್ದು, ಆಧುನಿಕತೆಯ ದಿನಮಾನಗಳಿಗೆ ಪೂರಕವಾಗಿ ಪಠ್ಯಕ್ರಮ ರಚನೆಯಾಗಬೇಕು. ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲು ಸರಕಾರಗಳು ಅಗತ್ಯ ನೀತಿ ರೂಪಿಸಬೇಕೆಂದು ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಕೆ.ಆರ್‌.ಅನಘ ಹೇಳಿದರು.
Vijaya Karnataka Web SMG-1301-2-15-13SMG2


ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜನಪದ ಪರಿಷತ್ತು, ಸಾರ್ವಜನಿಕ ಶಿಕ್ಷ ಣ ಇಲಾಖೆ ಹಾಗೂ ರಾಮಕೃಷ್ಣ ವಿದ್ಯಾನೀಕೇತನ ಆಶ್ರಯದಲ್ಲಿ ಇಲ್ಲಿನ ಅನುಪನಕಟ್ಟೆಯಲ್ಲಿರುವ ರಾಮಕೃಷ್ಣ ಗುರುಕುಲ ಆಶ್ರಮದಲ್ಲಿ ಭಾನುವಾರ ಏರ್ಪಡಿಸಿದ್ದ ಶಿವಮೊಗ್ಗ ಜಿಲ್ಲಾಮಟ್ಟದ 12ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.

ಇಂದಿನ ಮಕ್ಕಳಿಗೆ ಶಿಸ್ತು ಕೇಂದ್ರಿತ ಶಿಕ್ಷ ಣದ ಅವಶ್ಯವಿದೆ. ಭವ್ಯ ಭಾರತದ ಪ್ರಜೆಗಳಾಗುತ್ತಿರುವ ನಾವು ಆದರ್ಶವನ್ನಿಟ್ಟುಕೊಂಡು ಬದುಕುವಂತಾಗಬೇಕು. ಶಿಕ್ಷ ಣ ನಮಗೆ ಎಲ್ಲವನ್ನೂ ನೀಡುವಂತಾಗಬೇಕು. ಸಂಸ್ಕೃತಿ, ಸಂಸ್ಕಾರ ಇಲ್ಲದ ಶಿಕ್ಷ ಣ ನಮಗೆ ಬೇಡ, ಮಕ್ಕಳಲ್ಲಿ ಸ್ವತಂತ್ರವಾಗಿ ಕಲಿಸುವಂತಹ ಪರಿಸರ ಸೃಷ್ಟಿಯಾಗಬೇಕೆಂದು ಆಶಯ ವ್ಯಕ್ತಪಡಿಸಿದರು.

ಮಕ್ಕಳ ಕಲಿಕೆಯಲ್ಲಿ ಸಾಕಷ್ಟು ಸವಾಲುಗಳಿವೆ. ನಿರ್ದಿಷ್ಟÜ ಗುರಿಯಿರುವ ಶಿಕ್ಷ ಣ ನಮಗೆ ದೊರಕುತ್ತಿಲ್ಲ. ಪ್ರಾಯೋಗಿಕ ಶಿಕ್ಷ ಣ ದೂರದ ಮಾತಾಗಿದೆ. ಬಂಧನಮುಕ್ತ ಶಿಕ್ಷ ಣ ಕೊಡುವ ವ್ಯವಸ್ಥೆ ಇಂದಿನ ದಿನಗಳಲ್ಲಿ ಆಗಬೇಕಿದೆ. ಸಮೂಹ ದೃಶ್ಯ ಮಾಧ್ಯಮಗಳ ಹಾವಳಿಯಿಂದಾಗಿ ನಮ್ಮ ಇಂದಿನ ಮಕ್ಕಳಲ್ಲಿ ಓದಿನ ಹವ್ಯಾಸಗಳು ದೂರವಾಗುತ್ತಿವೆ. ಪ್ರತಿಯೊಬ್ಬರಲ್ಲೂ ಓದುವ ಚಳವಳಿ ಆರಂಭವಾಗಬೇಕಿದೆ. ಸಾಹಿತ್ಯ ಬದುಕನ್ನು ಕೊಡುತ್ತದೆ, ಗೌರವ ನೀಡುತ್ತದೆ, ಆದರ್ಶಗಳನ್ನು ರೂಪಿಸುತ್ತದೆ ಎಂಬ ಬಗ್ಗೆ ತಿಳಿಹೇಳಬೇಕೆಂದು ಸಲಹೆ ನೀಡಿದರು.

* ಸಾಧಕರಾಗ ಬಯಸುವವರು ಹೆಚ್ಚು ಓದಲೇಬೇಕು: ಜೀವನದಲ್ಲಿ ಸಾಧನೆ ಮಾಡಲು ಉತ್ಸುಕರಾಗಿರುವವರು ಹೆಚ್ಚು ಓದುವ ಗುಣ ಬೆಳೆಸಿಕೊಳ್ಳಬೇಕೆಂದು ಭಾವನಾ ಆನವಟ್ಟಿ ಸಲಹೆ ನೀಡಿದರು.

ಮಕ್ಕಳಿರುವಾಗಲೇ ಸಾಹಿತ್ಯದೆಡೆಗೆ ಆಸಕ್ತಿ ಮೂಡಿದರೆ ಅವರು ಉತ್ತಮ ಸಂಸ್ಕಾರ ಹೊಂದಲು ಸಾಧ್ಯ. ಸಾಧಿಸಲು ಇಚ್ಛೆ ಹೊಂದಿರುವವರು ನಿರಂತರ ಪರಿಶ್ರಮ ಪಡಬೇಕು. ಸ್ವಾಮಿ ವಿವೇಕಾನಂದರಂತಹ ವ್ಯಕ್ತಿಗಳು ಜೀವನದಲ್ಲಿ ಆದರ್ಶಪ್ರಾಯರಾಗಬೇಕೆಂದರು.

ಮಕ್ಕಳಿಗೆ ಹೆತ್ತವರು, ಶಿಕ್ಷಕರು ಸಂಸ್ಕಾರ ಹಾಗೂ ಸಂಸ್ಕೃತಿ ಕಲಿಸಬೇಕು. ಪ್ರತಿಯೊಂದು ಮಗುವಿನಲ್ಲಿ ವೈಶಿಷ್ಟ್ಯರುತ್ತದೆ. ಆ ವಿಶಿಷ್ಟತೆ ಗುರುತಿಸುವ ಕೆಲಸವಾಗಬೇಕು. ಆಗ ಅವರು ಸಾರ್ಥಕ ಜೀವನ ಕಂಡುಕೊಳ್ಳಲು ಅನುಕೂಲವಾಗುತ್ತದೆ ಎಂದರು. ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಪೃಥ್ವಿ ಎಸ್‌.ಸಾಗರ್‌ ಮಾತನಾಡಿ, ಸಮಯ ನಮಗೆ ಒಳ್ಳೆಯ ಪಾಠ ಕಲಿಸುತ್ತದೆ. ಅಂತಹ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡಲ್ಲಿ ಪ್ರತಿಯೊಬ್ಬರು ಮೇಲೆರಲು ಸಾಧ್ಯ ಎಂದು ಹೇಳಿದರು.

ಸಾಹಿತ್ಯ ಓದಿನಿಂದ ಸಂಸ್ಕಾರಯುತ ಜೀವನ ಸಾಗಿಸಲು ಸಾಧ್ಯ. ಜಾತಿಮುಕ್ತ ಸಮಾಜವನ್ನು ನಿರ್ಮಾಣ ಮಾಡುವಕಾರ್ಯ ಆಗಬೇಕಿದೆ. ದೇಶದಲ್ಲಿ ಸಮಾನ ಶಿಕ್ಷ ಣ ವ್ಯವಸ್ಥೆ ಜಾರಿಗೆ ತರಬೇಕು. ಹಳ್ಳಿಯಿಂದ ದಿಲ್ಲಿವರೆಗಿನ ಏಕರೂಪದ ಶಿಕ್ಷಣ ದೊರಕಬೇಕು. ಸಮಾನ ಶಿಕ್ಷ ಣದಿಂದ ಮಾತ್ರ ಭಾರತದಲ್ಲಿ ಸಮಾನತೆ ಕಾಣಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಮಾತನಾಡಿದರು. ಕೆ.ಆರ್‌. ಧನ್ವಿ ಅವರ 'ಕಪ್ಪುಮಣ್ಣಿನ ಕವನ' ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು.

ವೇದಿಕೆಯಲ್ಲಿ ರಾಮಕೃಷ್ಣ ವಿದ್ಯಾಸಂಸ್ಥೆ ಅಧ್ಯಕ್ಷ ಡಾ.ಡಿ.ಆರ್‌.ನಾಗೇಶ್‌, ಕಾರ್ಯದರ್ಶಿ ಶೋಭಾ ವೆಂಕಟರಮಣ, ಕೋಗಲೂರುತಿಪ್ಪೇಸ್ವಾಮಿ, ಕೆ.ಎಸ್‌.ಹುಚ್ಚರಾಯಪ್ಪ, ಪರಮೇಶ್ವರ ಕರೂರು, ವಿ.ಟಿ.ಸ್ವಾಮಿ, ಮಂಜುನಾಥ ಕಾಮತ್‌, ಎನ್‌.ಸತೀಶ್‌, ಬಿ.ಪಾಪಯ್ಯ, ಸಿರಿಚೆನ್ನಿ, ಗೌತಮಿ, ಸಿಂಧೂ, ಸಾಕ್ಷಿ ಎಸ್‌.ಸಕ್ರಿ, ಆಶಯ ಕಬಸೆ, ಪ್ರಿಯಾ ಎಸ್‌.ಸಿಂಗ್‌ ಇದ್ದರು. ಕೆ.ಸ್ಫೂರ್ತಿ, ಸಿಂಚನಾ ನಿರೂಪಿಸಿದರು. ಸೀಮಾ ಮತ್ತು ಸಂಗಡಿಗರು ಪ್ರಾರ್ಥಿಸಿ, ಡಿ.ವಿ. ಸಮೃದ್ಧ ಸ್ವಾಗತಿಸಿದರು. ಎಸ್‌.ಕೆ.ಸುಮುಖ ವಂದಿಸಿದರು.

============

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ