ಆ್ಯಪ್ನಗರ

ರಕ್ತ ಉತ್ಪತ್ತಿಯಾಗದ ಬಾಲಕಿಗೆ ಬೇಕಿದೆ ಸಹಾಯ ಹಸ್ತ

ದೇಹದಲ್ಲಿರಕ್ತದ ಪ್ರಮಾಣ ನಿಗದಿಗಿಂತ ಕಡಿಮೆಯಾದರೂ ಪ್ರಾಣಕ್ಕೆ ಅಪಾಯ ಅಂತಾರೆ ವೈದ್ಯರು. ಆದರೆ, ಏಳು ವರ್ಷದ ಈ ಬಾಲಕಿ ದೇಹದಲ್ಲಿರಕ್ತವೇ ಉತ್ಪತ್ತಿಯಾಗುತ್ತಿಲ್ಲ!

Vijaya Karnataka 13 Oct 2019, 5:00 am
ಶಿವಮೊಗ್ಗ: ದೇಹದಲ್ಲಿರಕ್ತದ ಪ್ರಮಾಣ ನಿಗದಿಗಿಂತ ಕಡಿಮೆಯಾದರೂ ಪ್ರಾಣಕ್ಕೆ ಅಪಾಯ ಅಂತಾರೆ ವೈದ್ಯರು. ಆದರೆ, ಏಳು ವರ್ಷದ ಈ ಬಾಲಕಿ ದೇಹದಲ್ಲಿರಕ್ತವೇ ಉತ್ಪತ್ತಿಯಾಗುತ್ತಿಲ್ಲ!
Vijaya Karnataka Web need help to a girl whos body not produce blood
ರಕ್ತ ಉತ್ಪತ್ತಿಯಾಗದ ಬಾಲಕಿಗೆ ಬೇಕಿದೆ ಸಹಾಯ ಹಸ್ತ

ಹೌದು... 9 ತಿಂಗಳು ಮಗುವಿದ್ದಾಗಲೇ ಈಕೆಯ ದೇಹದಲ್ಲಿರಕ್ತ ಉತ್ಪಾದನೆ ನಿಂತು ಹೋಗಿದೆ. ಇದ್ದಕ್ಕಿಂದ್ದಂತೆ ಊಟ, ತಿಂಡಿ ಬಿಟ್ಟು ನೋವಿನಿಂದ ಬಳಲುತ್ತಿದ್ದ ಮಗಳ ವರ್ತನೆ ಕಂಡು ಪೋಷಕರು ಆಸ್ಪತ್ರೆಯ ಮೆಟ್ಟಿಲೇರಿದಾಗ ಇವಳಿಗೆ ದೇಹದಲ್ಲಿರಕ್ತ ಉತ್ಪತ್ತಿಯೇ ಆಗದ ವಿಚಿತ್ರ ಕಾಯಿಲೆ ಇದೆ ಎಂಬುದು ತಿಳಿದಿದೆ. ಶಿಕಾರಿಪುರ ತಾಲೂಕಿನ ಕಿಟ್ಟದಹಳ್ಳಿ ನಿವಾಸಿ ಮಂಜಪ್ಪ ಹಾಗೂ ಲಕ್ಷ್ಮಿದೇವಿ ದಂಪತಿ ಪುತ್ರಿ ಹೇಮಾವತಿ, ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿ. ರಕ್ತ ಹೀನತೆಯಿಂದ ಬಳಲಿದ ಮಗಳ ಸಂಕಟ ನೋಡಲಾಗದೇ ಆಕೆಗೆ ಚಿಕಿತ್ಸೆ ಕೊಡಿಸಲು ಸರಕಾರಿ, ಖಾಸಗಿ ಆಸ್ಪತ್ರೆಗೆ ಅಲೆದರೂ ಗುಣಮುಖಳಾಗಿಲ್ಲ. ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಹೆಚ್ಚಿನ ಹೆಕಿತ್ಸೆ ಮಾಡಿದರೆ ಗುಣಮುಖಳಾಗಬಹುದು, ಅದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಛವಾಗುತ್ತದೆ ಎಂದಿದ್ದಾರೆ. ಆದರೆ, ಅಷ್ಟೊಂದು ಹಣ ಎಲ್ಲಿಂದ ತರುವುದು ಎಂದು ಪೋಷಕರು ಕಂಗಾಲಾಗಿದ್ದಾರೆ. 20 ದಿನಕ್ಕೊಮ್ಮೆ ರಕ್ತ ಹಾಕಿಸಬೇಕು!: ಹೇಮಾವತಿಯ ದೇಹದಲ್ಲಿರಕ್ತ ಉತ್ಪಾದನೆ ಆಗದಿರುವುದರಿಂದ ಪ್ರತಿ 20ದಿನಕ್ಕೊಮ್ಮೆ ರಕ್ತ ಕೊಡಿಸುವಂತೆ ವೈದ್ಯರು ಸೂಚಿಸಿದ್ದಾರೆ. ಬಡ ಕುಟುಂಬದ ಮಂಜಪ್ಪ ದಂಪತಿ ಪ್ರತಿ ತಿಂಗಳು ಮಗಳಿಗೆ ರಕ್ತ ಕೊಡಿಸಲು 4 ಸಾವಿರಕ್ಕೂ ಹೆಚ್ಚು ಖರ್ಚು ಮಾಡಬೇಕಿದೆ. ಸುಮಾರು 6 ವರ್ಷದಿಂದ ಇವಳಿಗೆ ರಕ್ತ ಕೊಡಿಸುತ್ತಿದ್ದೇವೆ. ಇಲ್ಲಿಯವರೆಗೆ ಸುಮಾರು 3 ಲಕ್ಷ ರೂ.ಗೂ ಹೆಚ್ಚು ಖರ್ಚು ಮಾಡಲಾಗಿದೆ ಎಂದು ಬಾಲಕಿ ತಂದೆ ಮಂಜಪ್ಪ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿಅಳಲು ತೋಡಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ