ಆ್ಯಪ್ನಗರ

‘ಭ್ರಷ್ಟಾಚಾರ ವಿರುದ್ಧ ಹೋರಾಟ ಅಗತ್ಯ’

ಸಾಮಾನ್ಯರು ಸಾಧನೆ ಮಾಡಬೇಕು. ಸ್ಥಳೀಯ ಸಮಸ್ಯೆಗಳ ಕಡೆ ಹೆಚ್ಚು ಕ್ರಿಯಾಶೀಲರಾಗಿ ಪರಿಹರಿಸುವ ಬಗ್ಗೆ ಸದಾ ಚಿಂತನೆ ನಡೆಸುವಂತಾಗಬೇಕೆಂದು ಜನ ಸಂಗ್ರಾಮ ಪರಿಷತ್‌ ಸಂಚಾಲಕ ಎಸ್‌.ಆರ್‌.ಹಿರೇಮಠ್‌ ಹೇಳಿದರು

Vijaya Karnataka 8 Mar 2019, 5:00 am
ರಿಪ್ಪನ್‌ಪೇಟೆ: ಸಾಮಾನ್ಯರು ಸಾಧನೆ ಮಾಡಬೇಕು. ಸ್ಥಳೀಯ ಸಮಸ್ಯೆಗಳ ಕಡೆ ಹೆಚ್ಚು ಕ್ರಿಯಾಶೀಲರಾಗಿ ಪರಿಹರಿಸುವ ಬಗ್ಗೆ ಸದಾ ಚಿಂತನೆ ನಡೆಸುವಂತಾಗಬೇಕೆಂದು ಜನ ಸಂಗ್ರಾಮ ಪರಿಷತ್‌ ಸಂಚಾಲಕ ಎಸ್‌.ಆರ್‌.ಹಿರೇಮಠ್‌ ಹೇಳಿದರು
Vijaya Karnataka Web SMR-7RPT1


ಪಟ್ಟಣದ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಜನ್ಮಭೂಮಿ ಗೆಳೆಯರ ಬಳಗ ಗುರುವಾರ ಆಯೋಜಿಸಿದ್ದ ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಜನಸಾಮಾನ್ಯರ ಪಾತ್ರ ಕುರಿತ ಜನಜಾಗೃತಿ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಭ್ರಷ್ಟಾಚಾರ ಎಲ್ಲ ಕ್ಷೇತ್ರಗಳಲ್ಲೂ ಕ್ಯಾನ್ಸರ್‌ನಂತೆ ಭೀಕರವಾಗಿ ವ್ಯಾಪಿಸಿದೆ. ಸಭ್ಯತೆ, ಸಂಸ್ಕೃತಿ, ಉಜ್ವಲ ಭವಿಷ್ಯ ಎಂಬುದು ಇಲ್ಲದಂತಾಗಿದೆ. ಅಧಿಕಾರದ ಲಾಲಸೆಯಿಂದಾಗಿ ಭಾರಿ ಭ್ರಷ್ಟಾಚಾರ ನಡೆಯುತ್ತದೆ. ಭ್ರಷ್ಟಾಚಾರದ ವಿರುದ್ಧ ಯುವಸಮೂಹ ಜಾಗೃತರಾಗಿ ಹೋರಾಟ ನಡೆಸಬೇಕು. ಅಧಿಕಾರ ಮನುಷ್ಯನ ಹಾದಿ ತಪ್ಪಿಸುತ್ತದೆ. ಕೆಲ ರಾಜಕಾರಣಿಗಳು ಸಾರ್ವಜನಿಕರ ಸೇವೆ ಬದಲು ಹಣಗಳಿಕೆಯನ್ನೆ ಬಂಡವಾಳವಾಗಿಸಿಕೊಂಡಿರುವ ಇಂದಿನ ದಿನಗಳಲ್ಲಿ ಜನಹಿತ ಬಲಿಕೊಡುತ್ತಿದ್ದಾರೆ ಎಂದರು.

ನಾಡಿನ ಸಂಸ್ಕೃತಿ, ಸಂಸ್ಕಾರ ಉಳಿಸಿಕೊಳ್ಳುವ ಮೂಲಕ ತಾಯಿ, ತಂದೆಯವರು ನಮ್ಮನ್ನು ಉತ್ತಮ ಪ್ರಜೆಯಾಗಿ ಬೆಳೆಸಿದ್ದಾರೆ. ಅವರ ಋುಣ ತೀರಿಸಬೇಕು. ಜ್ಞಾನದ ಹಸಿವು ತುಂಬಿಸಿ ವಿದ್ಯಾದಾನ ಕೊಡುವ ಗುಣ ಬೆಳೆಸಿಕೊಳ್ಳಬೇಕು. ಸಮಾಜದ ಋುಣ ತೀರಿಸಬೇಕು. ವಿದ್ಯಾರ್ಥಿದೆಸೆಯಲ್ಲಿ ಜಾತಿ ಭೇದ ಇಲ್ಲದೆ ಗೆಳತನ ಮಾಡುವ ಮೂಲಕ ಜೀವನದ ಮಹತ್ವ ಅರಿಯುವಂತಾದಾಗ ಜೀವನ ಸಾರ್ಥಕವಾಗುವುದು ಎಂದರು. ಸ್ವಾತಂತ್ರ್ಯ, ಸಮಾನತೆ, ನ್ಯಾಯ, ಸಹೋದರತ್ವ ಈ ನಾಲ್ಕು ಆಶಯ ನಮ್ಮ ಸಾಧನೆಗೆ ಮೆಟ್ಟಿಲಾಗಬೇಕೆಂದರು. ಅ.ಹಾ.ಪಾಟೀಲ್‌ ಅಧ್ಯಕ್ಷತೆ ವಹಿಸಿದ್ದರು.

ಗ್ರಾ.ಪಂ.ಅಧ್ಯಕ್ಷೆ ಶಾರದಮ್ಮ ಹಿರಿಯಣ್ಣ ಮತ್ತು ಉಪಾಧ್ಯಕ್ಷ ಕೃಷ್ಣೋಜಿರಾವ್‌ ಗಿಡಕ್ಕೆ ನೀರು ಹಾಕಿ ಕಾರ‍್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭ ಅರಸಾಳು ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾದ ಹನುಮಂತಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪಲ್ಲವಿ ಪ್ರಾರ್ಥಿಸಿ, ನಯನ ಸ್ವಾಗತಿಸಿದರು. ಹನಿಫ್‌ ಪ್ರಾಸ್ತಾವಿಕ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ