ಆ್ಯಪ್ನಗರ

ಅವಶ್ಯಕತೆ ಪೂರೈಸುವ ಆವಿಷ್ಕಾರ ಅಗತ್ಯ

ವಿದ್ಯುನ್ಮಾನ ಸಾಧನಗಳ ಬಳಕೆಯೊಂದಿಗೆ ನವಮಾಧ್ಯಮಗಳ ಆವಿಷ್ಕಾರ ನಿರಂತರವಾಗಿ ನಡೆಯುತ್ತಿದೆ. ಇದರೊಂದಿಗೆ, ಜೀವನದ ಅವಶ್ಯಕತೆಗಳನ್ನು ಪೂರೈಸುವ ವಸ್ತುಗಳ ಉತ್ಪಾದನೆ ಆಗಬೇಕೆಂದು ಧಾರವಾಡದ ಐಐಐಟಿ ಕುಲಸಚಿವ ಡಾ.ಎಸ್‌.ಬಸವರಾಜಪ್ಪ ಸಲಹೆ ನೀಡಿದರು.

Vijaya Karnataka 21 May 2019, 5:00 am
ಶಿವಮೊಗ್ಗ : ವಿದ್ಯುನ್ಮಾನ ಸಾಧನಗಳ ಬಳಕೆಯೊಂದಿಗೆ ನವಮಾಧ್ಯಮಗಳ ಆವಿಷ್ಕಾರ ನಿರಂತರವಾಗಿ ನಡೆಯುತ್ತಿದೆ. ಇದರೊಂದಿಗೆ, ಜೀವನದ ಅವಶ್ಯಕತೆಗಳನ್ನು ಪೂರೈಸುವ ವಸ್ತುಗಳ ಉತ್ಪಾದನೆ ಆಗಬೇಕೆಂದು ಧಾರವಾಡದ ಐಐಐಟಿ ಕುಲಸಚಿವ ಡಾ.ಎಸ್‌.ಬಸವರಾಜಪ್ಪ ಸಲಹೆ ನೀಡಿದರು.
Vijaya Karnataka Web SMG-2005-2-15-20SMG2


ಪಿಇಎಸ್‌ಐಟಿಯ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ವತಿಯಿಂದ ಕಾಲೇಜಿನಲ್ಲಿ 'ಮೆಟೆರಿಯಲ್‌ ಪ್ರೊಸೆಸಿಂಗ್‌ ಮತ್ತು ಕ್ಯಾರೆಕ್ಟರೈಸೇಶನ್‌' ವಿಷಯ ಕುರಿತು ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ದೈನಂದಿನ ಅವಶ್ಯಕತೆಗಳನ್ನು ಪೂರೈಸುವ ವಸ್ತುಗಳ ಉತ್ಪಾದನೆಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರ್‌ಗಳ ಪ್ರಸ್ತುತತೆ ಅತ್ಯಮೂಲ್ಯವಾಗಿದೆ. ನವಭಾರತ ನಿರ್ಮಾಣದಲ್ಲಿ ತನ್ನದೇ ಪಾತ್ರ ವಹಿಸುತ್ತಿರುವ ಮೇಕ್‌ ಇನ್‌ ಇಂಡಿಯಾ ಹಾಗೂ ಡಿಜಿಟಲ್‌ ಇಂಡಿಯಾ ಅನ್ವೇಷಣಾ ವಲಯಕ್ಕೆ ತಮ್ಮದೇ ಆದ ಅವಿಸ್ಮರಣೀಯ ಕೊಡುಗೆಗಳನ್ನು ನೀಡುವಲ್ಲಿ ಕಾರ್ಯತತ್ಪರರಾಗಬೇಕು ಎಂದು ತಿಳಿಸಿದರು.

ಪಿಐಎಸ್‌ಐಟಿಎಂನ ಪ್ರಾಚಾರ್ಯ ಡಾ.ಎಂ.ವಿ.ಚೈತನ್ಯ ಕುಮಾರ್‌, ವಿಚಾರ ಸಂಕಿರಣದ ಸಂಚಾಲಕ ಡಾ.ಎಲ್‌.ಗಿರೀಶ್‌ ಇತರರಿದ್ದರು. 70ಕ್ಕೂ ಅಧಿಕ ಸಮ್ಮೇಳನಾರ್ಥಿಗಳು ಉಪನ್ಯಾಸ ಮಂಡಿಸಿದರು.

ಅಜಯ್‌ ಸಿಪಿ ನಿರೂಪಿಸಿದರು. ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಡಾ.ವೈ.ಎಚ್‌.ಬಸವರಾಜಪ್ಪ ಸ್ವಾಗತಿಸಿದರು. ಚಂದನ ಮತ್ತು ಚೈತ್ರ ಪ್ರಾರ್ಥಿಸಿದರು. ಅಶೋಕ್‌ ಆರ್‌.ಬಣಗಾರ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ