ಶಿವಮೊಗ್ಗ: ರಾಜ್ಯಕ್ಕೊಂದು ಪ್ರತ್ಯೇಕ ಶಿಕ್ಷಣ ನೀತಿಯ ಅವಶ್ಯಕತೆ ಇದೆ ಎಂದು ಮುಳಬಾಗಿಲಿನ ಗ್ರಾಮ ವಿಕಾಸ ಸಂಸ್ಥೆ ನಿರ್ದೇಶಕ ಎಂ.ವಿ.ಎನ್.ರಾವ್ ಪ್ರತಿಪಾದಿಸಿದರು.
ಶಿವಮೊಗ್ಗ ಜಿಲ್ಲಾಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟವು ನಿವೃತ್ತ ನೌಕರರ ಸಂಘದ ಭವನದಲ್ಲಿ'ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ' ಕುರಿತು ಗುರುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿಮಾತನಾಡಿದರು.
ರಾಜ್ಯಕ್ಕೆ ಪ್ರತ್ಯೇಕ ಅಬಕಾರಿ ನೀತಿ ಇರುವಾಗ ಶಿಕ್ಷಣವೇಕೆ ಕೇಂದ್ರವನ್ನೇ ಅವಲಂಬಿಸಬೇಕು ಎಂದು ಪ್ರಶ್ನಿಸಿದ ಅವರು, ರಾಜ್ಯಕ್ಕೆ ಅಗತ್ಯವಿರುವ ಗುಣಮಟ್ಟದ ಶಿಕ್ಷಣ ನೀಡಬೇಕಾದರೆ ಪ್ರತ್ಯೇಕ ನೀತಿ ರೂಪುಗೊಳ್ಳಬೇಕು ಎಂದು ತಿಳಿಸಿದರು.
ಶಿಕ್ಷಣದ ಉದ್ದೇಶ ಕೇವಲ ಅಂಕ ಗಳಿಕೆಯೊಂದೇ ಅಲ್ಲ. ಅದರೊಂದಿಗೆ, ಮೌಲ್ಯಗಳನ್ನು ಧಾರೆ ಎರೆಯುವುದೂ ಆಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿವಿದ್ಯಾರ್ಥಿಗಳ ಮೇಲೆ ಪಾಲಕರು ಅತಿಯಾದ ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ, ಮಕ್ಕಳು ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಮುಂದಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಗುಣಮಟ್ಟದ ಶಿಕ್ಷಣ ಹೊಂದಿದ ವ್ಯಕ್ತಿ ಸಮಾಜದ ಕಲ್ಯಾಣದ ಬಗ್ಗೆ ಯೋಚಿಸುತ್ತಾನೆ. ಒಂದುವೇಳೆ, ಸಮಾಜಕ್ಕೆ ಪೂರಕವಾಗಿ ಯೋಚಿಸುತ್ತಿಲ್ಲವೆಂದರೆ ಅವರು ಗುಣಮಟ್ಟದ ಶಿಕ್ಷಣ ಹೊಂದಿಲ್ಲವೆಂದೇ ಅರ್ಥ. ಇತ್ತೀಚೆಗೆ ಅಬಕಾರಿ ಇಲಾಖೆ ಸಚಿವರು ನೀಡಿರುವ ಹೇಳಿಕೆ ಗಮನಿಸಿದರೆ ಅವರು ಪಡೆದಿರುವ ಶಿಕ್ಷಣದ ಗುಣಮಟ್ಟ ಬಗ್ಗೆ ಅನುಮಾನ ಮೂಡುತ್ತದೆ ಎಂದರು.
* ಗುಣಮಟ್ಟ ಶಿಕ್ಷಣದಿಂದ ಸುಸ್ಥಿರ ಅಭಿವೃದ್ಧಿ: ಸಮಾಜ ಸುಸ್ಥಿರ ಅಭಿವೃದ್ಧಿ ಆಗಬೇಕಾದರೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಈ ನಿಟ್ಟಿನಲ್ಲಿಎನ್ಜಿಒಗಳ ಪಾತ್ರ ಪ್ರಮುಖವಾಗಿದೆ. ಎಸ್ಡಿಎಂಸಿಗಳನ್ನು ಬಲವರ್ಧನೆಗೊಳಿಸಿದ್ದಲ್ಲಿಶಾಲೆಗಳಲ್ಲಿಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದು ಹೇಳಿದರು.
ವ್ಯಕ್ತಿ ಬದಲಾದರೆ, ಸಮಾಜ ತಾನಾಗಿಯೇ ಬದಲಾಗುತ್ತದೆ. ಆದ್ದರಿಂದ, ಭವಿಷ್ಯದ ಪ್ರಜೆಗಳೆಂದು ಹೇಳಲಾಗುವ ಮಕ್ಕಳಿಗೆ ಕುಟುಂಬ, ಸಮಾಜದ ಬಗ್ಗೆ ಜಾಗೃತಿ ಮೂಡಿಸಬೇಕು. ಎನ್ಜಿಒಗಳು ಪರಿಹಾರಾತ್ಮಕ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ ಉದ್ಘಾಟಿಸಿದರು. ಒಕ್ಕೂಟದ ಕಾರ್ಯದರ್ಶಿ ಆರ್.ಟಿ. ನಟರಾಜ್, ಸಂಘಟನಾ ಕಾರ್ಯದರ್ಶಿ ಇಂದೂಧರ್ ಇತರರಿದ್ದರು. ತಾರಾ ರಾವ್ ವಂದಿಸಿದರು.
===
ಶಾಲೆಗಳೆಡೆ ಸಮೂಹ ಕಾಳಜಿ ಅಗತ್ಯ
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ.ಬಸವರಾಜ್, ಶಾಲೆಗಳು ಅಭಿವೃದ್ಧಿಯಾಗಬೇಕಾದರೆ ಹಾಗೂ ಗುಣಮಟ್ಟದ ಶಿಕ್ಷಣ ಪ್ರಾಪ್ತವಾಗಬೇಕಾದರೆ ಸಮೂಹದ ಪಾತ್ರ ಮುಖ್ಯವಾಗಿದೆ. ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರದಲ್ಲಿಸಮೂಹದ ಕಾಳಜಿಯಿಂದಾಗಿಯೇ ಶಾಲಾ ವಾತಾವರಣ ಗುಣಮಟ್ಟಕ್ಕೆ ಪೂರಕವಾಗಿದೆ. ಆದರೆ, ಉಳಿದೆಡೆ ಇದು ಕಾಣಸಿಗುತ್ತಿಲ್ಲಎಂದರು.
ಶಾಲೆಯೆಡೆಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಎನ್ಜಿಒಗಳು ಇದಕ್ಕೆ ಪೂರಕವಾಗಿ ಕೆಲಸ ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿಉದ್ಯೋಗವಿಲ್ಲದೇ ವಲಸೆ ಹೋಗುವ ಸ್ಥಿತಿ ಏರ್ಪಟ್ಟಿದೆ. ನಿರುದ್ಯೋಗದ ಪ್ರಮಾಣ ಏರಿಕೆ ಆಗುತ್ತಿದೆ. ಆದ್ದರಿಂದ, ಮಕ್ಕಳಿಗೆ ಜೀವನ ಕೌಶಲ ಕೊಡಬೇಕಾದ ಅಗತ್ಯವಿದೆ. ಖಿನ್ನತೆಗೆ ಒಳಗಾದವರಿಗೆ ಸಕಾಲದಲ್ಲಿಕೌನ್ಸೆಲಿಂಗ್ ಮಾಡಬೇಕು. ಪರಿಸರಕ್ಕೆ ವ್ಯತಿರಿಕ್ತವಾದ ಅಭಿವೃದ್ಧಿಯ ಅವಶ್ಯಕತೆ ಇಲ್ಲ. ವಿಶ್ವವಿದ್ಯಾಲಯಗಳಲ್ಲಿಕೈಗೊಳ್ಳಲಾಗುವ ಸಂಶೋಧನೆಗಳು ಗ್ರಾಮೀಣ ಪ್ರದೇಶಕ್ಕೂ ತಲುಪಬೇಕು ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟವು ನಿವೃತ್ತ ನೌಕರರ ಸಂಘದ ಭವನದಲ್ಲಿ'ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ' ಕುರಿತು ಗುರುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿಮಾತನಾಡಿದರು.
ರಾಜ್ಯಕ್ಕೆ ಪ್ರತ್ಯೇಕ ಅಬಕಾರಿ ನೀತಿ ಇರುವಾಗ ಶಿಕ್ಷಣವೇಕೆ ಕೇಂದ್ರವನ್ನೇ ಅವಲಂಬಿಸಬೇಕು ಎಂದು ಪ್ರಶ್ನಿಸಿದ ಅವರು, ರಾಜ್ಯಕ್ಕೆ ಅಗತ್ಯವಿರುವ ಗುಣಮಟ್ಟದ ಶಿಕ್ಷಣ ನೀಡಬೇಕಾದರೆ ಪ್ರತ್ಯೇಕ ನೀತಿ ರೂಪುಗೊಳ್ಳಬೇಕು ಎಂದು ತಿಳಿಸಿದರು.
ಶಿಕ್ಷಣದ ಉದ್ದೇಶ ಕೇವಲ ಅಂಕ ಗಳಿಕೆಯೊಂದೇ ಅಲ್ಲ. ಅದರೊಂದಿಗೆ, ಮೌಲ್ಯಗಳನ್ನು ಧಾರೆ ಎರೆಯುವುದೂ ಆಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿವಿದ್ಯಾರ್ಥಿಗಳ ಮೇಲೆ ಪಾಲಕರು ಅತಿಯಾದ ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ, ಮಕ್ಕಳು ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಮುಂದಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಗುಣಮಟ್ಟದ ಶಿಕ್ಷಣ ಹೊಂದಿದ ವ್ಯಕ್ತಿ ಸಮಾಜದ ಕಲ್ಯಾಣದ ಬಗ್ಗೆ ಯೋಚಿಸುತ್ತಾನೆ. ಒಂದುವೇಳೆ, ಸಮಾಜಕ್ಕೆ ಪೂರಕವಾಗಿ ಯೋಚಿಸುತ್ತಿಲ್ಲವೆಂದರೆ ಅವರು ಗುಣಮಟ್ಟದ ಶಿಕ್ಷಣ ಹೊಂದಿಲ್ಲವೆಂದೇ ಅರ್ಥ. ಇತ್ತೀಚೆಗೆ ಅಬಕಾರಿ ಇಲಾಖೆ ಸಚಿವರು ನೀಡಿರುವ ಹೇಳಿಕೆ ಗಮನಿಸಿದರೆ ಅವರು ಪಡೆದಿರುವ ಶಿಕ್ಷಣದ ಗುಣಮಟ್ಟ ಬಗ್ಗೆ ಅನುಮಾನ ಮೂಡುತ್ತದೆ ಎಂದರು.
* ಗುಣಮಟ್ಟ ಶಿಕ್ಷಣದಿಂದ ಸುಸ್ಥಿರ ಅಭಿವೃದ್ಧಿ: ಸಮಾಜ ಸುಸ್ಥಿರ ಅಭಿವೃದ್ಧಿ ಆಗಬೇಕಾದರೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಈ ನಿಟ್ಟಿನಲ್ಲಿಎನ್ಜಿಒಗಳ ಪಾತ್ರ ಪ್ರಮುಖವಾಗಿದೆ. ಎಸ್ಡಿಎಂಸಿಗಳನ್ನು ಬಲವರ್ಧನೆಗೊಳಿಸಿದ್ದಲ್ಲಿಶಾಲೆಗಳಲ್ಲಿಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದು ಹೇಳಿದರು.
ವ್ಯಕ್ತಿ ಬದಲಾದರೆ, ಸಮಾಜ ತಾನಾಗಿಯೇ ಬದಲಾಗುತ್ತದೆ. ಆದ್ದರಿಂದ, ಭವಿಷ್ಯದ ಪ್ರಜೆಗಳೆಂದು ಹೇಳಲಾಗುವ ಮಕ್ಕಳಿಗೆ ಕುಟುಂಬ, ಸಮಾಜದ ಬಗ್ಗೆ ಜಾಗೃತಿ ಮೂಡಿಸಬೇಕು. ಎನ್ಜಿಒಗಳು ಪರಿಹಾರಾತ್ಮಕ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ ಉದ್ಘಾಟಿಸಿದರು. ಒಕ್ಕೂಟದ ಕಾರ್ಯದರ್ಶಿ ಆರ್.ಟಿ. ನಟರಾಜ್, ಸಂಘಟನಾ ಕಾರ್ಯದರ್ಶಿ ಇಂದೂಧರ್ ಇತರರಿದ್ದರು. ತಾರಾ ರಾವ್ ವಂದಿಸಿದರು.
===
ಶಾಲೆಗಳೆಡೆ ಸಮೂಹ ಕಾಳಜಿ ಅಗತ್ಯ
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ.ಬಸವರಾಜ್, ಶಾಲೆಗಳು ಅಭಿವೃದ್ಧಿಯಾಗಬೇಕಾದರೆ ಹಾಗೂ ಗುಣಮಟ್ಟದ ಶಿಕ್ಷಣ ಪ್ರಾಪ್ತವಾಗಬೇಕಾದರೆ ಸಮೂಹದ ಪಾತ್ರ ಮುಖ್ಯವಾಗಿದೆ. ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರದಲ್ಲಿಸಮೂಹದ ಕಾಳಜಿಯಿಂದಾಗಿಯೇ ಶಾಲಾ ವಾತಾವರಣ ಗುಣಮಟ್ಟಕ್ಕೆ ಪೂರಕವಾಗಿದೆ. ಆದರೆ, ಉಳಿದೆಡೆ ಇದು ಕಾಣಸಿಗುತ್ತಿಲ್ಲಎಂದರು.
ಶಾಲೆಯೆಡೆಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಎನ್ಜಿಒಗಳು ಇದಕ್ಕೆ ಪೂರಕವಾಗಿ ಕೆಲಸ ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿಉದ್ಯೋಗವಿಲ್ಲದೇ ವಲಸೆ ಹೋಗುವ ಸ್ಥಿತಿ ಏರ್ಪಟ್ಟಿದೆ. ನಿರುದ್ಯೋಗದ ಪ್ರಮಾಣ ಏರಿಕೆ ಆಗುತ್ತಿದೆ. ಆದ್ದರಿಂದ, ಮಕ್ಕಳಿಗೆ ಜೀವನ ಕೌಶಲ ಕೊಡಬೇಕಾದ ಅಗತ್ಯವಿದೆ. ಖಿನ್ನತೆಗೆ ಒಳಗಾದವರಿಗೆ ಸಕಾಲದಲ್ಲಿಕೌನ್ಸೆಲಿಂಗ್ ಮಾಡಬೇಕು. ಪರಿಸರಕ್ಕೆ ವ್ಯತಿರಿಕ್ತವಾದ ಅಭಿವೃದ್ಧಿಯ ಅವಶ್ಯಕತೆ ಇಲ್ಲ. ವಿಶ್ವವಿದ್ಯಾಲಯಗಳಲ್ಲಿಕೈಗೊಳ್ಳಲಾಗುವ ಸಂಶೋಧನೆಗಳು ಗ್ರಾಮೀಣ ಪ್ರದೇಶಕ್ಕೂ ತಲುಪಬೇಕು ಎಂದು ಹೇಳಿದರು.