ತೀರ್ಥಹಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಯೋಗ ದಿನದ ಕಾರ್ಯಕ್ರಮಕ್ಕೆ ರಾಜ್ಯಕ್ಕೆ ಆಗಮಿಸಿದ ವೇಳೆ ಬೆಂಗಳೂರಿನಲ್ಲಿ ಅವರು ಓಡಾಡುವ ಮಾರ್ಗದ ರಸ್ತೆಗಳನ್ನ ಟಾರು ಹಾಕಿ ನವೀಕರಣಗೊಳಿಸಲಾಗಿತ್ತು. ಪ್ರಾಧಾನಿ ಮೋದಿ ದಿಲ್ಲಿಗೆ ಮರಳಿದ ಮಾರನೆಯೇ ದಿನವೇ ಆ ರಸ್ತೆ ಕಿತ್ತು ಬಂದಿತ್ತು. ಇದೇ ರೀತಿಯ ಘಟನೆ ಇದೀಗ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಸ್ವ ಕ್ಷೇತ್ರ ತೀರ್ಥಹಳ್ಳಿಯಲ್ಲಿ ಕೂಡ ಇದೇ ರೀತಿ ಆಗಿದ್ದು, ಹೊಸದಾಗಿ ಹಾಕಲಾಗಿದ್ದ ಡಾಂಬಾರು ಎರಡೇ ದಿನದಲ್ಲಿ ಕಿತ್ತು ಹೋಗಿದೆ.
ಸುಮಾರು ಒಂದು ಕಿಲೋಮೀಟರ್ ಉದ್ದದ ರಸ್ತೆ ಡಾಂಬಾರೀಕರಣಕ್ಕೆ ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಯಲ್ಲಿ 50 ಲಕ್ಷ ನೀಡಲಾಗಿತ್ತು. ಈ ಟೆಂಡರ್ ಹಿಡಿದ ಗುತ್ತಿಗೆದಾರ ಧರ್ಮೇಶ್ ಕೆಲವು ತಿಂಗಳ ಹಿಂದೆ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಸಂಚಾರ ಮುಕ್ತ ಮಾಡಿದ್ದರು. ಆಶ್ಚರ್ಯ ಎಂದರೆ ಕಾಮಗಾರಿ ಮುಗಿದು ಮೂರೇ ತಿಂಗಳಿಗೆ ಡಾಂಬಾರು ಕಿತ್ತುಬರುತ್ತಿದೆ. ಹೊನ್ನೆತಾಳು ಜನರು ಕಳಪೆ ಕಾಮಗಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಹೊನ್ನೆತಾಳು ಗ್ರಾಮಸ್ಥ ಪ್ರಸನ್ನ, ಕಳಪೆ ಕಾಮಗಾರಿಯಾದ ರಸ್ತೆ ಮೂರ್ನಾಲ್ಕು ಊರುಗಳನ್ನ ಸಂಪರ್ಕಿಸುತ್ತದೆ. ಎಷ್ಟೋ ಜನ ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಶಾಲಾ ಮಕ್ಕಳು ಓಡಾಡ್ತಾರೆ. ಎಷ್ಟೋ ವರ್ಷಗಳ ಕಾಲ ಈ ರಸ್ತೆ ಹಾಳುಬಿದ್ದಿತ್ತು. ಗೃಹ ಸಚಿವ ಆರಗ ಜ್ಞಾನೇಂದ್ರರ ಮುತುವರ್ಜಿಯಿಂದ ಈ ರಸ್ತೆ ಆಯ್ತು. ಆದರೆ ಮೂರೇ ತಿಂಗಳಲ್ಲಿ ರಸ್ತೆ ಕಿತ್ತು ಬಂದಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾರೂ ಕ್ರಮ ಕೈಗೊಂಡಿಲ್ಲ. ಇದು ಹೀಗೆ ಮುಂದುವರಿದರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದರು.
ಕಳಪೆ ಕಾಮಗಾರಿಯಾದ ರಸ್ತೆ ಮೂರ್ನಾಲ್ಕು ಊರುಗಳನ್ನ ಸಂಪರ್ಕಿಸುತ್ತದೆ. ಎಷ್ಟೋ ಜನ ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಶಾಲಾ ಮಕ್ಕಳು ಓಡಾಡ್ತಾರೆ. ಎಷ್ಟೋ ವರ್ಷಗಳ ಕಾಲ ಈ ರಸ್ತೆ ಹಾಳುಬಿದ್ದಿತ್ತು. ಗೃಹ ಸಚಿವ ಆರಗ ಜ್ಞಾನೇಂದ್ರರ ಮುತುವರ್ಜಿಯಿಂದ ಈ ರಸ್ತೆ ಆಯ್ತು. ಆದರೆ ಮೂರೇ ತಿಂಗಳಲ್ಲಿ ರಸ್ತೆ ಕಿತ್ತು ಬಂದಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾರೂ ಕ್ರಮ ಕೈಗೊಂಡಿಲ್ಲ. ಇದು ಹೀಗೆ ಮುಂದುವರಿದರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ.
ಇಂತಹ ಅವಾಂತರಗಳು ಬೆಂಗಳೂರಿನಲ್ಲಿ ನಡೆದಾಗ ಮಾತ್ರ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಅಗುತ್ತವೆ. ಆದರೆ ಹಳ್ಳಿಗಾಡಿನಲ್ಲಿ ಗುತ್ತಿಗೆದಾರರ ಅಸಮರ್ಪಕ ಕಾಮಗಾರಿಯನ್ನ ಕೇಳೋರೇ ಇಲ್ಲ ಎನ್ನುವಂತಾಗಿದೆ. ಜಿಲ್ಲಾಡಳಿತ, ರಾಜ್ಯ ಸರ್ಕಾರ ಅಥವಾ ಹೈವೇ ಪ್ರಾಧಿಕಾರದ ರಸ್ತೆಗಳು ಎರಡು ಮೂರು ತಿಂಗಳಿಗೆ ಕಿತ್ತು ಹೋಗುತ್ತಿವೆ. ಸಂಬಂಧಪಟ್ಟ ಇಲಾಖೆ, ಎಂಜಿನಿಯರ್ಗಳು ಅಥವಾ ಗುತ್ತಿಗೆದಾರರು ಮಾತ್ರ ಸಬೂಬುಗಳನ್ನ ಹೇಳಿ ನುಣುಚಿಕೊಳ್ಳುತ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಕ್ಷೇತ್ರದಲ್ಲೇ ಇಂತಹದೊಂದು ರಸ್ತೆ ಕಾಮಗಾರಿ ಹಳ್ಳ ಹಿಡಿದಿದೆ. ಈ ಕುರಿತು ಪ್ರತಿಕ್ರಿಯೆಗೆ ಗುತ್ತಿಗೆದಾರನನ್ನ ಸಂಪರ್ಕಿಸಿದರೆ, ರಸ್ತೆ ದುರಸ್ತಿ ಹಾಗೂ ನಿರ್ವಹಣೆ ಇರೋದ್ರಿಂದ ರಿಪೇರಿ ಮಾಡಲಾಗುತ್ತೆ, ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಮಾಡಿರೋದು ಆದರೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಲ್ಲ ಎಂದರು.