ಆ್ಯಪ್ನಗರ

ನಿಫಾ ಶಂಕೆ: ರಕ್ತ ಮಾದರಿ ಸಂಗ್ರಹ

ತಾಲೂಕಿನ ಸಿರಿವಂತೆ ಗ್ರಾಮದ ಕಾರೇಮನೆ ವಾಸಿ ಮಿಥುನ್‌ ಅವರಿಗೆ ನಿಫಾ ವೈರಸ್‌ ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಅವರ ರಕ್ತ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದೆ.

Vijaya Karnataka 25 May 2018, 5:00 am
ಸಾಗರ : ತಾಲೂಕಿನ ಸಿರಿವಂತೆ ಗ್ರಾಮದ ಕಾರೇಮನೆ ವಾಸಿ ಮಿಥುನ್‌ ಅವರಿಗೆ ನಿಫಾ ವೈರಸ್‌ ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಅವರ ರಕ್ತ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದೆ.
Vijaya Karnataka Web nifa suspect blood sampling
ನಿಫಾ ಶಂಕೆ: ರಕ್ತ ಮಾದರಿ ಸಂಗ್ರಹ


ಯುವಕ ಮಿಥುನ್‌ ಅವರು ಈಚೆಗೆ ಕೇರಳಕ್ಕೆ ಹೋಗಿದ್ದು, ಎರಡು ಮೂರು ದಿನದ ಹಿಂದೆ ತಮ್ಮ ಊರಾದ ಕಾರೇಮನೆಗೆ ಮರಳಿದ್ದರು. ಬಳಿಕ ಜ್ವರ ಬಂದಿದ್ದು, ಸಿರಿವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಗಾಗಿದ್ದರು. ಈ ಸಂದರ್ಭ ಕೇರಳಕ್ಕೆ ಹೋಗಿ ಬಂದ ವಿಷಯವನ್ನು ಮಿಥುನ್‌ ವೈದ್ಯರ ಬಳಿ ತಿಳಿಸಿದ್ದು, ಬಳಿಕ ಹೆಚ್ಚಿನ ನಿಗಾ ವಹಿಸಲಾಗಿದೆ. ಮಿಥುನ್‌ ಅವರ ರಕ್ತದ ಮಾದರಿಯನ್ನು ಮಹಾರಾಷ್ಟ್ರದ ಪುಣೆಯಲ್ಲಿರುವ ವೈದ್ಯಕೀಯ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಫಲಿತಾಂಶ ಶುಕ್ರವಾರ ಸಂಜೆ ಗೊತ್ತಾಗಲಿದ್ದು, ಆ ಬಳಿಕ ಮಿಥುನ್‌ ಅವರಿಗೆ ನಿಫಾ ಸೋಂಕು ತಗುಲಿದೆಯೋ, ಇಲ್ಲವೋ ಎನ್ನುವುದು ನಿಗದಿಯಾಗಲಿದೆ.

ಡಿಎಚ್‌ಓ ಭೇಟಿ : ಯುವಕ ಮಿಥುನ್‌ಗೆ ನಿಫಾ ಶಂಕೆ ವಿಚಾರ ತಿಳಿದು ಇಲ್ಲಿನ ಉಪವಿಭಾಗೀಯ ಆಸ್ಪತ್ರೆಗೆ ಡಿಎಚ್‌ಒ ಡಾ. ವೆಂಕಟೇಶ್‌ ಗುರುವಾರ ಭೇಟಿ ನೀಡಿದ್ದರು. ಯುವಕನ ಆರೋಗ್ಯ ವಿಚಾರಣೆ ಮಾಡಿದ ಅವರು, ನಿಫಾ ಕಾಯಿಲೆಗೆ ಸಂಬಂಧಪಟ್ಟಂತೆ ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷ ಣಾಧಿಕಾರಿ ಡಾ. ಶಂಕರಪ್ಪ, ತಾಲೂಕು ವೈದ್ಯಾಧಿಕಾರಿ ಡಾ.ಕೆ.ಪಿ.ಅಚ್ಚುತ್‌ ಇನ್ನಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ