ಆ್ಯಪ್ನಗರ

ನಿಫಾ ವೈರಸ್‌ ಜಾಲತಾಣಗಳಲ್ಲಿ ವೈರಲ್‌!!

ನಿಫಾ ವೈರಸ್‌ ಸೋಂಕು ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಜನಸಾಮಾನ್ಯರು ಗೊಂದಲಕ್ಕೆ ಬಿದ್ದಿದ್ದಾರೆ. ಪ್ರಾಣಿ, ಪಕ್ಷಿಗಳು ರುಚಿ ನೋಡಿದ ಹಣ್ಣುಗಳ ಸೇವನೆಯಿಂದ ಮನುಷ್ಯರಿಗೆ ಕಾಯಿಲೆ ಅಂಟುತ್ತದೆ. ಅಲ್ಲದೇ ಸೋಂಕಿಗೊಳಗಾದವರಿಗೆ ಚಿಕಿತ್ಸೆ ಇಲ್ಲ ಎಂಬ ವಿಚಾರ ಜನತೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ

Vijaya Karnataka 25 May 2018, 5:00 am
ಹೊಸನಗರ : ನಿಫಾ ವೈರಸ್‌ ಸೋಂಕು ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಜನಸಾಮಾನ್ಯರು ಗೊಂದಲಕ್ಕೆ ಬಿದ್ದಿದ್ದಾರೆ. ಪ್ರಾಣಿ, ಪಕ್ಷಿಗಳು ರುಚಿ ನೋಡಿದ ಹಣ್ಣುಗಳ ಸೇವನೆಯಿಂದ ಮನುಷ್ಯರಿಗೆ ಕಾಯಿಲೆ ಅಂಟುತ್ತದೆ. ಅಲ್ಲದೇ ಸೋಂಕಿಗೊಳಗಾದವರಿಗೆ ಚಿಕಿತ್ಸೆ ಇಲ್ಲ ಎಂಬ ವಿಚಾರ ಜನತೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
Vijaya Karnataka Web nipha virus viral at social media
ನಿಫಾ ವೈರಸ್‌ ಜಾಲತಾಣಗಳಲ್ಲಿ ವೈರಲ್‌!!


ಹೇಳೀಕೇಳಿ ಮಾರ್ಚ್‌ನಿಂದ ಜೂನ್‌ ತಿಂಗಳ ವರೆಗೆ ಹಣ್ಣುಗಳ ಸೀಸನ್‌! ಪೇಟೆಯಲ್ಲಿ ದೊರೆಯುವ ಸೇಬು, ಕಿತ್ತಳೆ, ಮೋಸಂಬಿ ಮೊದಲಾದ ಹಣ್ಣುಗಳ ಜತೆಗೆ ಗ್ರಾಮೀಣ ಭಾಗದಲ್ಲಿ ಮಾವು, ನೇರಳೆ, ಗೇರು, ಅನಾನಸ್‌, ಪಪಾಯಿ, ಬಾಳೆಹಣ್ಣು ಯತೇಚ್ಛವಾಗಿ ದೊರೆಯುವ ಕಾಲ.

ಆದರೆ ಕಳೆದ ಎರಡು ದಿನದಿಂದ ವಾಟ್ಸಾಪ್‌, ಫೇಸ್‌ಬುಕ್‌ಗಳಲ್ಲಿ ನಿಫಾ ವೈರಸ್‌ ಕುರಿತು ಪೋಸ್ಟ್‌ಗಳು ಹರಿದಾಡುತ್ತಿದ್ದಂತೆ ಸಾರ್ವಜನಿಕರು ಹಣ್ಣುಗಳಿಂದ ದೂರು ಉಳಿಯುವಂತೆ ಮಾಡಿದೆ. ಹಣ್ಣುಗಳನ್ನು ತಿಂದ ಮಾತ್ರಕ್ಕೇ ವೈರಸ್‌ ಅಂಟಬಹುದು ಎಂಬ ಚರ್ಚೆ ಗ್ರಾಮೀಣ ಭಾಗದಲ್ಲಿ ಹರಡಲಾರಂಭಿಸಿದೆ.

ಹಣ್ಣು ಮಾರಾಟ ಕುಂಠಿತ:

ಬಹುತೇಕ ಹಣ್ಣಿನ ಅಂಗಡಿಗಳಲ್ಲಿ ಕಳೆದೆರಡು ದಿನಗಳ ಈಚೆಗೆ ಹಣ್ಣುಗಳ ಮಾರಾಟದಲ್ಲಿ ದಿಢೀರ್‌ ಕುಸಿತ ಕಂಡಿದೆ ಎನ್ನುತ್ತಾರೆ ಹಣ್ಣಿನ ವ್ಯಾಪಾರಿಗಳು. ಇದ್ದಕ್ಕಿದ್ದಂತೇ ವ್ಯಾಪಾರ ಕುಸಿತಗೊಂಡಿದ್ದು, ಸಂಗ್ರಹಸಿರುವ ಹಣ್ಣುಗಳು ಹಾಳಾಗುವುದೋ ಎಂಬ ಭೀತಿ ವ್ಯಾಪಾರಿಗಳಲ್ಲಿ ಆವರಿಸಿದೆ. ನಿಫಾ ವೈರಸ್‌ ಕುರಿತು ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಜನತೆ ಹಣ್ಣುಗಳನ್ನು ಕೊಳ್ಳಲು ಹಿಂದೇಟು ಹಾಕುವಂತೆ ಮಾಡಿದೆ.


ಜನಸಾಮಾನ್ಯರಲ್ಲಿ ಗೊಂದಲ

ನಿಫಾ ಕುರಿತು ಸುದ್ದಿಗಳು ಹರಡುತ್ತಿದ್ದಂತೆ, ಈಗಾಗಲೇ ಜ್ವರದಿಂದ ಬಳಲುತ್ತಿರುವ ರೋಗಿಗಳು ಭಯದಿಂದ ತರಾತುರಿಯಲ್ಲಿ ಆಸ್ಪತ್ರೆಯತ್ತ ಧಾವಿಸತೊಡಗಿದ್ದಾರೆ. ವೈದ್ಯರು ಹೇಳುವ ಪ್ರಕಾರ ಸಾಮಾನ್ಯ ಜ್ವರವಾಗಿದ್ದರೂ ನಿಫಾ ಇರಬಹದೇನೋ ಎಂಬ ಭಯದಿಂದಲೇ ರೋಗಿಗಳು ''ಡಾಕ್ಟ್ರೇ ಎರಡು ದಿನದಿಂದ ಜ್ವರ ಬರ್ತಾ ಇದೆ, ನಿಫಾ ಅಲ್ಲಾ ತಾನೆ,'' ಎಂದು ಆತಂಕದಿಂದ ಕೇಳತೊಡಗಿದ್ದಾರೆ. ನಿಫಾ ವೈರಸ್‌ಗೆ ಬಾವಲಿಗಳು ಮೂಲ ಎನ್ನಲಾಗಿದೆ. ಮಲೆನಾಡಿನಲ್ಲಿ ಬಾವಲಿಗಳ ಸಂಖ್ಯೆ ಹೆಚ್ಚಾಗಿರುವುದು ಮತ್ತಷ್ಟು ಆತಂಕಕ್ಕೆ ಇಂಬು ಮಾಡಿಕೊಟ್ಟಿದೆ. ಈ ಆತಂಕ ಬಾವಲಿಗಳ ಬಗ್ಗೆ ಜನರಲ್ಲಿ ಇಲ್ಲಸಲ್ಲದ ಪೂರ್ವಗ್ರಹಕ್ಕೂ ಕಾರಣವಾಗಿದೆ.

ಸೋಂಕು ಹರಡುವಿಕೆ ಕುರಿತು ಸಾಕಷ್ಟು ಜಾಗೃತಿ ಮೂಡದಿರುವುದು ಜನತೆಯನ್ನು ಭಯಬೀಳುವಂತೆ ಮಾಡಿದೆ. ಆರೋಗ್ಯ ಇಲಾಖೆ ವಿಶೇಷವಾಗಿ ಗ್ರಾಮೀಣ ಜನತೆಗೆ ಅರಿವು ಮೂಡಿಸುವಲ್ಲಿ ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ.

----------

ಹಿಂದೆಂದೂ ಕೇಳಿರದ ಈ ಕಾಯಿಲೆಗೆ ಔಷಧ ಇಲ್ಲ ಎನ್ನುವುದು ಆತಂಕಕ್ಕೆ ಕಾರಣವೆನಿಸಿದೆ. ರೋಗ ಹೇಗೆ ಹರಡುತ್ತದೆ ಎಂಬ ಮಾಹಿತಿ ಸರಿಯಾಗಿ ದೊರೆಯುತ್ತಿಲ್ಲ. ಬಾವಲಿಗಳು ವಾಸಿಸುವ ಸ್ಥಳಕ್ಕೆ ಸಮೀಪ ವಾಸಿಸುವವರು ಯಾವ ಮುಂಜಾಗ್ರತೆ ತೆಗೆದುಕೊಳ್ಳಬೇಕು ಎಂದು ತಿಳಿಯುತ್ತಿಲ್ಲ.

- ಶರತ್‌, ಕಾಲೇಜು ವಿದ್ಯಾರ್ಥಿ, ಹೊಸನಗರ

ಕಳೆದೆರಡು ದಿನದಿಂದ ವ್ಯಾಪಾರದಲ್ಲಿ ಕುಸಿತವಾಗಿದೆ. ನಿಫಾ ಸೋಂಕಿನಿಂದ ಕೇರಳದಲ್ಲಿ ಮೃತಪಟ್ಟಿರುವವರ ಕುರಿತ ಸಂದೇಶ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ.

-ಆಸೀಫ್‌, ಹಣ್ಣಿನ ವ್ಯಾಪಾರಿ, ಹೊಸನಗರ.

(ವಾಟ್ಸ್‌ಆ್ಯಪ್‌ ಲೋಗೊ ಬಳಸಿ)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ