ಆ್ಯಪ್ನಗರ

ನಿಸ್ರಾಣಿ ರಾಮಚಂದ್ರರಿಗೆ ಚಾತುರ್ಮಾಸ್ಯ ಪ್ರಶಸ್ತಿ

ಮುಗ್ಧತೆ, ಪ್ರಾಮಾಣಿಕತೆ ಹಾಗೂ ನಿಷ್ಟುರತೆಯಿಂದ ಸಮಾಜ ಸೇವೆ ಮಾಡುವ ಮನೋಭಾವ ವಿರಳವಾಗುತ್ತಿದೆ. ಇಂತಹ ಗುಣ ಹೊಂದಿ ಸುದೀರ್ಘ ಕಾಲ ಸೇವೆ ಸಲ್ಲಿಸಿದದವರು ಸಮಾಜಕ್ಕೆ ಆದರ್ಶರಾಗುತ್ತಾರೆ ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಸಮ್ಮುಖ ಸರ್ವಾಧಿಕಾರಿ ತಿಮ್ಮಪ್ಪಯ್ಯ ಮಡಿಯಾಳ ಹೇಳಿದರು.

Vijaya Karnataka 25 Sep 2019, 5:00 am
ಸಾಗರ: ಮುಗ್ಧತೆ, ಪ್ರಾಮಾಣಿಕತೆ ಹಾಗೂ ನಿಷ್ಟುರತೆಯಿಂದ ಸಮಾಜ ಸೇವೆ ಮಾಡುವ ಮನೋಭಾವ ವಿರಳವಾಗುತ್ತಿದೆ. ಇಂತಹ ಗುಣ ಹೊಂದಿ ಸುದೀರ್ಘ ಕಾಲ ಸೇವೆ ಸಲ್ಲಿಸಿದದವರು ಸಮಾಜಕ್ಕೆ ಆದರ್ಶರಾಗುತ್ತಾರೆ ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಸಮ್ಮುಖ ಸರ್ವಾಧಿಕಾರಿ ತಿಮ್ಮಪ್ಪಯ್ಯ ಮಡಿಯಾಳ ಹೇಳಿದರು.
Vijaya Karnataka Web 24SGR2_46


ಇಲ್ಲಿನ ಶ್ರೀರಾಘವೇಶ್ವರಭಾರತೀ ಸಭಾಭವನದಲ್ಲಿಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿಸೇವಾ ಸಾಧಕ ನಿಸ್ರಾಣಿ ರಾಮಚಂದ್ರ ದಂಪತಿಗೆ ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಸಭಾಭವನ ಸಮಿತಿ ಅಧ್ಯಕ್ಷ ಹರನಾಥರಾವ್‌ ಮತ್ತಿಕೊಪ್ಪ ಮಾತನಾಡಿ, ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ ನಿಸ್ರಾಣಿ ರಾಮಚಂದ್ರ ಅವರು ನಮ್ಮ ಪರಂಪರೆಯ ಬಗ್ಗೆ ಕರಾರುವಾಕ್ಕಾಗಿ ತಿಳಿದುಕೊಂಡಿರುವ ಅಪರೂಪದ ವ್ಯಕ್ತಿ. ಶ್ರೀ ರಾಘವೇಶ್ವರಭಾರತೀ ಸ್ವಾಮಿಗಳು ಸಮಾಜದ ಸಂಘಟನೆಗೆ ಸಾಕಷ್ಟು ಒತ್ತು ನೀಡಿ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಉಳಿಸುವಲ್ಲಿಮತ್ತು ಹೊಸ ತಲೆಮಾರನ್ನು ಮಠದೊಂದಿಗೆ ತೊಡಗಿಕೊಳ್ಳುವಲ್ಲಿಯೋಜನೆಗಳನ್ನು ರೂಪಿಸುತ್ತಾ ಬಂದಿದ್ದಾರೆ. ಸಮಾಜದ ಕೆಲಸ ಎಂದು ಬಂದಾಗ ಅದು ಪದಾಧಿಕಾರಿಗಳ ಕೆಲಸ ಎಂದುಕೊಳ್ಳದೆ ಎಲ್ಲರೂ ಸೇರಿ ಸಂಘಟಿತವಾಗಿ ತೊಡಗಿಕೊಳ್ಳಬೇಕು ಎಂದರು.

ಅರ್ಥಧಾರಿ ಮೋಹನ್‌ ಭಾಸ್ಕರ್‌ ಹೆಗಡೆ ಮಾತನಾಡಿದರು. ಶ್ರೀಮಠದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಜಿ. ಭಟ್‌, ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್‌.ಎಸ್‌. ಹೆಗಡೆ, ಕೆಕ್ಕಾರು ರಾಮಚಂದ್ರ ಭಟ್‌, ವಿಷ್ಣುಗುಪ್ತ ವಿದ್ಯಾಪೀಠ ವ್ಯವಸ್ಥಾ ಸಮಿತಿ ಕೋಶಾಧ್ಯಕ್ಷ ರಮೇಶ್‌ ಹೆಗಡೆ ಗುಂಡೂಮನೆ, ಸಾಗರ ಮಂಡಲ ಅಧ್ಯಕ್ಷ ಮುರಳಿ ಗೀಜಗಾರು, ಸಭಾ ಭವನ ಸಮಿತಿ ಕಾರ‍್ಯದರ್ಶಿ ಸದಾಶಿವ , ಐಸಿರಿ ಗುರುಪ್ರಸಾದ್‌, ಮಧುಶ್ರೀ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ