ಆ್ಯಪ್ನಗರ

‘ಸಮ್ಮಿಶ್ರ ಸರಕಾರ ಜೀವಂತ ಇಲ್ಲ’

ರಾಜ್ಯದಲ್ಲಿ ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಜೀವಂತ ಇಲ್ಲ ಎಂಬುದು ಜನರಿಗೆ ಎಂದೋ ಗೊತ್ತಾಗಿದೆ. ಜೀವಂತ ಇಲ್ಲದ ಸರಕಾರಕ್ಕೆ ಯಾರಿದ್ದರೂ ಪ್ರಯೋಜನ ಇಲ್ಲ ಎಂದು ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸಪೂಜಾರಿ ಹೇಳಿದರು.

Vijaya Karnataka 19 Apr 2019, 5:00 am
ತೀರ್ಥಹಳ್ಳಿ: ರಾಜ್ಯದಲ್ಲಿ ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಜೀವಂತ ಇಲ್ಲ ಎಂಬುದು ಜನರಿಗೆ ಎಂದೋ ಗೊತ್ತಾಗಿದೆ. ಜೀವಂತ ಇಲ್ಲದ ಸರಕಾರಕ್ಕೆ ಯಾರಿದ್ದರೂ ಪ್ರಯೋಜನ ಇಲ್ಲ ಎಂದು ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸಪೂಜಾರಿ ಹೇಳಿದರು.
Vijaya Karnataka Web SMR-18TTH2


ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಗರ್‌ಹುಕುಂ ಸಾಗುವಳಿ ರೈತರಿಗೆ, ಮನೆಕಟ್ಟಿಕೊಂಡ ಬಡಕುಟುಂಬಗಳಿಗೆ ರಾಜ್ಯ ಸರಕಾರ ಹಕ್ಕುಪತ್ರ ವಿತರಿಸಲು ವಿಫಲವಾಗಿದೆ. ಕಾಗೋಡು ತಿಮ್ಮಪ್ಪ ಅವರು ಸುಮ್ಮನೆ ಭಾಷಣ ಬಿಗಿದರೂ ಬಿಟ್ಟರೆ ಹಕ್ಕುಪತ್ರ ವಿತರಿಸಿಲ್ಲ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಅಶೋಕಮೂರ್ತಿ, ನಾಗರಾಜಶೆಟ್ಟಿ, ಆರ್‌.ಮದನ್‌, ಕೋಣಂದೂರು ಮೋಹನ್‌ಶೆಟ್ಟಿ, ಸಂದೇಶಜವಳಿ ಇದ್ದರು.

----------
ಪ್ರಶ್ನೆಗೆ ಜಾರಿದ ಪೂಜಾರಿ
ಪತ್ರಕರ್ತರ ಪ್ರಶ್ನೆಗೆ ಶ್ರೀನಿವಾಸಪೂಜಾರಿ ಅವರು, ರಾಜ್ಯದಲ್ಲಿ 192(ಎ) ಭೂ ಕಬಳಿಕೆ ಕಾಯಿದೆ ಜಾರಿ ಅವಧಿ ಕುರಿತು ಮಾಹಿತಿ ಇಲ್ಲ ಎಂದು ಉತ್ತರಿಸಿ ಜಾರಿಕೊಂಡರು. ಅರಣ್ಯ, ಸರಕಾರಿ ಭೂ ಪ್ರದೇಶ ಸಾಗುವಳಿ ರೈತರನ್ನು ಜೈಲಿಗೆ ಹಾಕುವ ತೀರ್ಮಾನ ಕಾಯಿದೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.

----------
ಬಿಜೆಪಿಯಲ್ಲಿ ಕೌಟುಂಬಿಕ ರಾಜಕಾರಣ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಲು ಶ್ರೀನಿವಾಸಪೂಜಾರಿ ತಡವರಿಸಿದರು. ಬಿಜೆಪಿಯಲ್ಲಿ ಕನಿಷ್ಟ ಮಟ್ಟದ ಕೌಟುಂಬಿಕ ರಾಜಕಾರಣ ಇದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ