ಆ್ಯಪ್ನಗರ

ಸಾಗರದಲ್ಲಿ ಶಂಕಿತ ಪ್ರಕರಣ ನಿಫಾ ಅಲ್ಲ

ಸಿರಿವಂತೆ ಗ್ರಾಮದ ಕಾರೇಮನೆ ವಾಸಿ ಮಿಥುನ್‌ ಅವರಿಗೆ ನಿಫಾ ವೈರಸ್‌ ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಅವರ ರಕ್ತ ಮಾದರಿಯನ್ನು ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಅದು ನಿಫಾ ನೆಗೆಟಿವ್‌ ಎಂದು ಸಾಬೀತಾಗಿದೆ.

Vijaya Karnataka Web 25 May 2018, 12:17 pm
ಶಿವಮೊಗ್ಗ: ಸಿರಿವಂತೆ ಗ್ರಾಮದ ಕಾರೇಮನೆ ವಾಸಿ ಮಿಥುನ್‌ ಅವರಿಗೆ ನಿಫಾ ವೈರಸ್‌ ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಅವರ ರಕ್ತ ಮಾದರಿಯನ್ನು ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಅದು ನಿಫಾ ನೆಗೆಟಿವ್‌ ಎಂಬುದು ದೃಢಪಟ್ಟಿದೆ.
Vijaya Karnataka Web virus


ಮಿಥುನ್‌ ಇತ್ತೀಚೆಗೆ ಕೇರಳಕ್ಕೆ ಹೋಗಿದ್ದು, ಎರಡು ಮೂರು ದಿನದ ಹಿಂದೆ ಕಾರೇಮನೆಗೆ ಮರಳಿದ್ದರು. ಬಳಿಕ ಜ್ವರ ಬಂದಿದ್ದು, ಸಿರಿವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸುವಾಗ ಕೇರಳಕ್ಕೆ ಹೋಗಿ ಬಂದ ವಿಷಯವನ್ನು ಮಿಥುನ್‌ ವೈದ್ಯರ ಬಳಿ ತಿಳಿಸಿದ್ದರು. ಹೀಗಾಗಿ ಹೆಚ್ಚಿನ ನಿಗಾ ವಹಿಸಲಾಗಿತ್ತು.

ಮಿಥುನ್‌ ಅವರ ರಕ್ತದ ಮಾದರಿಯನ್ನು ಮಹಾರಾಷ್ಟ್ರದ ಪುಣೆಯಲ್ಲಿರುವ ವೈದ್ಯಕೀಯ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು, ಅವರಿಗೆ ನಿಫಾ ಸೋಂಕು ಇಲ್ಲ ಎಂಬುದು ರಕ್ತಪರೀಕ್ಷೆಯಲ್ಲಿ ಸಾಬೀತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ