ಆ್ಯಪ್ನಗರ

ಸಂಸತ್‌ನಲ್ಲಿಚರ್ಚಿಸದೇ ರೆಸೆಪ್‌ ಒಪ್ಪಂದ ಬೇಡ

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ರೆಸೆಪ್‌) ಒಪ್ಪಂದ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಎಂ.ಆರ್‌.ಎಸ್‌.ವೃತ್ತದಲ್ಲಿಗುರುವಾರ ಪ್ರತಿಭಟನೆ ನಡೆಸಿದರು.

Vijaya Karnataka 25 Oct 2019, 5:00 am
ಶಿವಮೊಗ್ಗ: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ರೆಸೆಪ್‌) ಒಪ್ಪಂದ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಎಂ.ಆರ್‌.ಎಸ್‌.ವೃತ್ತದಲ್ಲಿಗುರುವಾರ ಪ್ರತಿಭಟನೆ ನಡೆಸಿದರು.
Vijaya Karnataka Web 24GANESH1_46


ರೆಸೆಪ್‌ ಒಪ್ಪಂದದಿಂದ ಹಾಲು ಉತ್ಪಾದಕರ ಮೇಲೆ ತೀವ್ರವಾಗಿ ಪರಿಣಾಮ ಬೀರಲಿದೆ. ಅಲ್ಲದೇ ಅಡಕೆ ಬೆಳೆಗಾರರು ಕೂಡ ತೀವ್ರ ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ. ಈ ಒಪ್ಪಂದದಿಂದ ಸುಮಾರು 15 ದೇಶಗಳಿಂದ ಹಾಲು ಮತ್ತು ಹೈನುಗಾರಿಕೆ ಉತ್ಪನ್ನಗಳು ಭಾರತದ ಮಾರುಕಟ್ಟೆಗೆ ಆಮದು ಸುಂಕ ವಿನಾಯಿತಿಯೊಂದಿಗೆ ಪ್ರವೇಶ ಮಾಡುವುದರಿಂದ ಭಾರತದ ಹಾಲು ಉತ್ಪಾದಕರು ಸಂಕಷ್ಟಕ್ಕೆ ಈಡಾಗಿ ಪಶುಸಂಗೋಪನಾ ವ್ಯವಸ್ಥೆ ನಾಶವಾಗುತ್ತದೆ ಎಂದು ಪ್ರತಿಭಟನಾಕಾರರು ದೂರಿದರು.

ಅಲ್ಲದೇ ಈ ಒಪ್ಪಂದದಿಂದ ಬಹುತೇಕ ಕೃಷಿ ಸರಕುಗಳ ಮೇಲಿನ ಅಮದು ಸುಂಕ ಶಾಶ್ವತವಾಗಿ ಶೂನ್ಯಕ್ಕೆ ತರುತ್ತದೆ. ಕೃಷಿ ಉತ್ಪನ್ನಗಳು ಆಮದಾಗುವುದೇ ಹೆಚ್ಚಾಗುತ್ತದೆ. ಇದರಿಂದ ಭಾರತದ ಲಕ್ಷಾಂತರ ಸಣ್ಣ ರೈತರು, ವಿಶೇಷವಾಗಿ ಹೈನುಗಾರಿಕೆ ಕ್ಷೇತ್ರ ತೀವ್ರ ಅಪಾಯಕ್ಕೆ ಒಳಗಾಗುತ್ತದೆ. ಬೀಜ ಕಂಪನಿಗಳು ಹೆಚ್ಚಿನ ಅಧಿಕಾರ ಪಡೆಯುತ್ತಾರೆ. ಈ ಎಲ್ಲಹಿನ್ನೆಲೆಯಲ್ಲಿಈ ಒಪ್ಪಂದ ಕೂಡಲೇ ರದ್ದಾಗಬೇಕು ಎಂದು ಒತ್ತಾಯಿಸಿದರು.

ನವೆಂಬರ್‌ ತಿಂಗಳಲ್ಲಿಹೈದರಾಬಾದ್‌ನಲ್ಲಿನಡೆಯುವ ಶೃಂಗ ಸಭೆಯಲ್ಲಿವಿಶ್ವದ ಸುಮಾರು 16 ದೇಶಗಳು ಭಾಗವಹಿಸುತ್ತಿದ್ದು, ಸಂಸತ್‌ನಲ್ಲಿರೆಸೆಪ್‌ ಬಗ್ಗೆ ಚರ್ಚೆ ಮಾಡದೇ ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿರೈತ ಮುಖಂಡರಾದ ಕೆ.ಟಿ.ಗಂಗಾಧರ್‌, ಯಶವಂತ ರಾವ್‌ ಘೋರ್ಪಡೆ, ಎಸ್‌.ಎಚ್‌.ಮಂಜುನಾಥ್‌, ಡಿ.ವಿ.ವೀರೇಶ್‌, ಮೋಹನ್‌, ಎಚ್‌.ಕೆ.ಪರಮೇಶ್ವರಪ್ಪ, ಹಿರಿಯಣ್ಣಯ್ಯ, ಉಮಾಪತಿಯಪ್ಪ, ಸಂಗಪ್ಪ ಮಾಸ್ಟರ್‌, ಜಯಪ್ಪಗೌಡ, ವಿಜಯಕುಮಾರ್‌ ಪಾಟೀಲ್‌ ಮತ್ತಿತರರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ