ಆ್ಯಪ್ನಗರ

ಬೆಳ್ಳಿಕೊಪ್ಪ-ಮಡಸೂರಲ್ಲಿಮದ್ಯದಂಗಡಿ ಬೇಡ

ತಾಲೂಕಿನ ಪಡವಗೋಡು ಗ್ರಾ.ಪಂ. ವ್ಯಾಪ್ತಿಯ ಬೆಳ್ಳಿಕೊಪ್ಪ-ಮಡಸೂರು ಗ್ರಾಮದಲ್ಲಿಎಂಎಸ್‌ಐಎಲ್‌ ಮದ್ಯದಂಗಡಿ ತೆರೆಯುವ ಮೂಲಕ ಗ್ರಾಮದಲ್ಲಿನ ಶಾಂತಿ, ಆರೋಗ್ಯ ಕದಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಾಲೂಕು ಪ್ರಗತಿಪರ ಯುವ ಒಕ್ಕೂಟದ ಅಧ್ಯಕ್ಷ ರಮೇಶ್‌ ಈ. ಕೆಳದಿ ದೂರಿದ್ದಾರೆ.

Vijaya Karnataka 24 Oct 2019, 5:00 am
ಸಾಗರ: ತಾಲೂಕಿನ ಪಡವಗೋಡು ಗ್ರಾ.ಪಂ. ವ್ಯಾಪ್ತಿಯ ಬೆಳ್ಳಿಕೊಪ್ಪ-ಮಡಸೂರು ಗ್ರಾಮದಲ್ಲಿಎಂಎಸ್‌ಐಎಲ್‌ ಮದ್ಯದಂಗಡಿ ತೆರೆಯುವ ಮೂಲಕ ಗ್ರಾಮದಲ್ಲಿನ ಶಾಂತಿ, ಆರೋಗ್ಯ ಕದಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಾಲೂಕು ಪ್ರಗತಿಪರ ಯುವ ಒಕ್ಕೂಟದ ಅಧ್ಯಕ್ಷ ರಮೇಶ್‌ ಈ. ಕೆಳದಿ ದೂರಿದ್ದಾರೆ.
Vijaya Karnataka Web no silver shop in vellikoppa madasur
ಬೆಳ್ಳಿಕೊಪ್ಪ-ಮಡಸೂರಲ್ಲಿಮದ್ಯದಂಗಡಿ ಬೇಡ


ಸುದ್ದಿಗೋಷ್ಠಿಯಲ್ಲಿಬುಧವಾರ ಮಾತನಾಡಿದ ಅವರು, ಬೆಳ್ಳಿಕೊಪ್ಪ ಗ್ರಾಮದಲ್ಲಿಎಂಎಸ್‌ಐಎಲ್‌ ಸನ್ನದು ಮದ್ಯದಂಗಡಿ ತೆರೆಯಲು ಮುಂದಾಗಿರುವ ಸ್ಥಳದ ಹತ್ತಿರ ಶಾಲೆಯಿದೆ. ಎರಡು ದೇವಸ್ಥಾನಗಳು ಸಹ ಇವೆ. ಗ್ರಾಮಸ್ಥರು ಮದ್ಯದಂಗಡಿ ತೆರೆಯಲು ತೀವ್ರ ವಿರೋಧ ವ್ಯಕ್ತಪಡಿಸಿದರೂ ಗ್ರಾ.ಪಂ. ಆಡಳಿತವನ್ನು ದುರುಪಯೋಗಪಡಿಸಿಕೊಂಡು ಮದ್ಯದಂಗಡಿಗೆ ನಿರಾಪೇಕ್ಷಣಾ ಪತ್ರ ಪಡೆಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಈ ರಸ್ತೆಯಲ್ಲಿಪ್ರತಿದಿನ ಶಾಲಾ ವಿದ್ಯಾರ್ಥಿಗಳು, ರೈತರು, ಮಹಿಳೆಯರು ಸಂಚರಿಸುತ್ತಾರೆ. ಅಬಕಾರಿ ಇಲಾಖೆ ಜತೆ ನಾವು ಸಂಪರ್ಕದಲ್ಲಿದ್ದು, ಮದ್ಯದಂಗಡಿಗೆ ಪರವಾನಗಿ ನೀಡಬಾರದು ಎಂದು ಒತ್ತಾಯಿಸಿದ್ದೇವೆ. ಆದರೆ ಮೇಲ್ಪಟ್ಟದ ಒತ್ತಡ ಬಳಸಿ ಈಗಾಗಲೆ ಮದ್ಯದಂಗಡಿ ತೆರೆಯಲು ಎಲ್ಲಸಿದ್ಧತೆ ಮಾಡಿಕೊಳ್ಳಲಾಗಿದೆ. ಕಟ್ಟಡ ನಿರ್ಮಾಣವಾಗಿದ್ದು, ಅಧಿಕಾರಿಗಳು ಬಂದು ಸ್ಥಳಪರಿಶೀಲನೆ ಮಾಡಿದ್ದಾರೆ. ಮದ್ಯದಂಗಡಿ ವಿರೋಧಿಸಿ ಗ್ರಾಮಸ್ಥರು ಹೋರಾಟದ ಹಾದಿ ತುಳಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.

ರವಿಚಂದ್ರ, ಸುರೇಶ್‌, ರವೀಂದ್ರ, ಕೃಷ್ಣಮೂರ್ತಿ, ಲೋಕೇಶ್‌, ಗೋಪಾಲ ಹಾಜರಿದ್ದರು.

-----
ಗ್ರಾಮದಲ್ಲಿಎಂಎಸ್‌ಐಎಲ್‌ ಮದ್ಯದಂಗಡಿ ತೆರೆಯುವುದಕ್ಕೆ ವಿರೋಧವಿದೆ. ಸಂಬಂಧಪಟ್ಟ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಒತ್ತಡಕ್ಕೆ ಒಳಗಾಗದಂತೆ ಮದ್ಯದಂಗಡಿಗೆ ಪರವಾನಗಿ ನೀಡಬಾರದು. ಒಂದೊಮ್ಮೆ ಗ್ರಾಮಸ್ಥರ ವಿರೋಧದ ನಡುವೆ ಮದ್ಯದಂಗಡಿ ತೆರೆಯಲು ಪರವಾನಗಿ ನೀಡಿದರೆ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯ.

-ಲಿಂಗರಾಜ್‌ ಬೆಳ್ಳಿಕೊಪ್ಪ, ಗ್ರಾಮ ಸಮಿತಿ ಅಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ