ಆ್ಯಪ್ನಗರ

ಏಪ್ರಿಲ್‌ ಫೂಲ್‌ ಅಲ್ಲ, ‘ಕೂಲ್‌’ ಡೇ

ಏಪ್ರಿಲ್‌ ತಿಂಗಳಮೊದಲ ದಿನಂದಂದು 'ಫೂಲ್‌' ಮಾಡುವವರೆ ಹೆಚ್ಚು. ಇಂತಹುವುದರಲ್ಲಿ ನಗರದ ಇರುವೆ ಟ್ರಸ್ಟ್‌ ' ಏಪ್ರಿಲ್‌ ಕೂಲ್‌' ಎಂಬ ಹೆಸರಲ್ಲಿ ಸಸಿ ನೆಡುವ ವಿನೂತನ ಕಾರ್ಯಕ್ಕೆ ಚಾಲನೆ ನೀಡಿತು.

Vijaya Karnataka 3 Apr 2019, 5:00 am
ಭದ್ರಾವತಿ : ಏಪ್ರಿಲ್‌ ತಿಂಗಳಮೊದಲ ದಿನಂದಂದು 'ಫೂಲ್‌' ಮಾಡುವವರೆ ಹೆಚ್ಚು. ಇಂತಹುವುದರಲ್ಲಿ ನಗರದ ಇರುವೆ ಟ್ರಸ್ಟ್‌ ' ಏಪ್ರಿಲ್‌ ಕೂಲ್‌' ಎಂಬ ಹೆಸರಲ್ಲಿ ಸಸಿ ನೆಡುವ ವಿನೂತನ ಕಾರ್ಯಕ್ಕೆ ಚಾಲನೆ ನೀಡಿತು.
Vijaya Karnataka Web SMR-2BDVT4


ಸೋಮವಾರ ಸಂಜೆ ನ್ಯೂಟೌನ್‌ ಜಂಟ್ಸ್‌ ಕ್ಲಬ್‌ ಆವರಣದಲ್ಲಿ ಅರಣ್ಯ ವಲಯಾಧಿಕಾರಿ ದಿನೇಶ್‌ ನೇತೃತ್ವದಲ್ಲಿ ನಗರದ ಇರುವೆ ಟ್ರಸ್ಟ್‌ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಬಯಲು ಪ್ರದೇಶ ಹಾಗು ರಸ್ತೆ ಬದಿಗಳಲ್ಲಿ ಗಿಡಮರಗಳನ್ನು ನೆಟ್ಟು ಬೆಳೆಸಿ ನೀರೆರುವ ಮೂಲಕ ಸಂರಕ್ಷಿಸುವಂತಾದಲ್ಲಿ ಪರಿಸರ ಸಮತೋಲನ ಕಾಯ್ದುಕೊಳ್ಳುವಂತಾಗಲಿದೆ. ಕೇವಲ ಸಸಿಗಳನ್ನು ನೆಡುವುದರಿಂದ ಪರಿಸರ ಉಳಿಸಲು ಅಸಾಧÜ್ಯ. ಸಸಿ ನೆಡುವುದರ ಮೂಲಕ ಅವುಗಳಿಗೆ ನೀರೆರೆದು ಪೋಷಿಸುವಂತಾದಲ್ಲಿ ಮಾತ್ರ ಸಾಧ್ಯ ಎಂದರು. ಟ್ರಸ್ಟ್‌ ಅಧ್ಯಕ್ಷ ಬಿ.ಎಂ.ಶಾಂತಕುಮಾರ್‌ ಪದಾಧಿಕಾರಿಗಳಾದ ಬಿ.ಕಿರಣ್‌ಕುಮಾರ್‌, ಕಾರ್ತಿಕ್‌ ಕೆ.ಕೆದಿಲಾಯ್‌, ಸದಸ್ಯರಾದ ಬಿ.ಎಂ.ಧಮೇಂದ್ರ, ವಸಂತಕುಮಾರ ರೆಡ್ಡಿ, ಶ್ರೀನಿವಾಸ್‌, ಸುಮಂತ್‌, ಲಲಿತ್‌ಕುಮಾರ್‌, ಶಕೀನ್‌, ಪೋಲೀಸ್‌ ಇಲಾಖೆಯ ಕೆ.ಎಸ್‌.ರಂಗಸ್ವಾಮಿ, ಜಿ.ಹಾಲಪ್ಪ, ತಮ್ಮಣ್ಣ, ರೇವಣ್ಣ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ