ಶಿವಮೊಗ್ಗ: ಕ್ಷೇತ್ರದಲ್ಲಿ ಪರಾಜಿತರಾದ 11 ಅಭ್ಯರ್ಥಿಗಳ ಪೈಕಿ ಮಧು ಬಂಗಾರಪ್ಪ ಬಳಿಕ ಅತಿಹೆಚ್ಚು ಮತಗಳನ್ನು ಪಡೆದು ಅಭ್ಯರ್ಥಿ ಎಂದರೆ ನೋಟಾ.
ಹೌದು. ಈ ಬಾರಿ 6,868 ಮತದಾರರು ನೋಟಾಕ್ಕೆ ಮತ ಚಲಾಯಿಸಿದ್ದಾರೆ. ಬಿಜೆಪಿ- ಜೆಡಿಎಸ್ ಅಭ್ಯರ್ಥಿಗಳ ನೇರಾನೇರ ಹಣಾಹಣಿಯಲ್ಲಿ ಕಣದಲ್ಲಿರುವ ಉಳಿದ 10 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಈ ಎಲ್ಲ ಅಭ್ಯರ್ಥಿಗಳು ನಾಲ್ಕು ಅಂಕೆಯ ಮತಗಳನ್ನು ಪಡೆದಿದ್ದರೂ ನೋಟಾಕ್ಕಿಂತಲೂ ಕಡಿಮೆ ಮತ ಗಳಿಸಿದ್ದಾರೆ. ಬೈಂದೂರಲ್ಲಿ ಅತಿಹೆಚ್ಚು 1286, ಶಿಕಾರಿಪುರದಲ್ಲಿ ಅತಿಕಡಿಮೆ 672 ಮತಗಳು ಚಲಾವಣೆಯಾಗಿವೆ.
490 ಮತಗಳು ತಿರಸ್ಕೃತ!
ಚುನಾವಣೆಯಲ್ಲಿ 490 ಮತಗಳು ತಿರಸ್ಕೃತಗೊಂಡಿವೆ. ಎಲೆಕ್ಟ್ರಾನಿಕ್ ಮತ ಯಂತ್ರಗಳಲ್ಲಿ ಯಾವುದಾದರೂ ಒಂದು ಗುಂಡಿಯನ್ನು ಒತ್ತಬೇಕಾಗಿರುವುದರಿಂದ ಜನಸಾಮಾನ್ಯರು ಚಲಾಯಿಸುವ ಮತಗಳು ತಿರಸ್ಕೃತವಾಗುವುದಿಲ್ಲ. ಆದರೆ, ವಿದ್ಯಾವಂತರು, ಪ್ರಜ್ಞಾವಂತರು, ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವವರು ಚಲಾಯಿಸುವ ಅಂಚೆ ಮತ್ತು ಸೇವಾ ಮತಗಳೇ ತಿರಸ್ಕೃತಗೊಂಡಿವೆ.
ಮತದಾನ ಕರ್ತವ್ಯದಲ್ಲಿ ಪಾಲ್ಗೊಳ್ಳುವ ಅದೇ ಕ್ಷೇತ್ರದ ಅಧಿಕಾರಿ ಮತ್ತು ಸಿಬ್ಬಂದಿಗೆ ಸೇವಾ ಮತ ಮತ್ತು ಹೊರ ಜಿಲ್ಲೆ ಅಥವಾ ರಾಜ್ಯಗಳಲ್ಲಿ ಸೇವೆ ಸಲ್ಲಿಸುವ ಅಧಿಕಾರಿ ಮತ್ತು ಸಿಬ್ಬಂದಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ. ಕ್ಷೇತ್ರದಲ್ಲಿ ಈ ಬಾರಿ 1788 ಅಂಚೆ ಮತ್ತು ಸೇವಾ ಮತಗಳು ಚಲಾವಣೆಯಾಗಿದ್ದವು. ಅವುಗಳಲ್ಲಿ 490 ಮತಗಳು ತಿರಸ್ಕೃತಗೊಂಡಿವೆ. ಇಂತಹ ಮತಗಳನ್ನು ಚಲಾಯಿಸಲು ನಿಗದಿತ ಅರ್ಜಿ ಭರ್ತಿ ಮಾಡಬೇಕು. ಅರ್ಜಿಯಲ್ಲಿ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡದಿದ್ದಲ್ಲಿ, ಅಂತಿಮವಾಗಿ ತಮ್ಮ ಮೇಲಧಿಕಾರಿಯಿಂದ ಸಹಿ ಮಾಡಿಸದಿದ್ದಲ್ಲಿ ಅಂತಹ ಮತಗಳನ್ನು ತಿರಸ್ಕರಿಸಲಾಗುತ್ತದೆ. ಇದರ ಮಧ್ಯೆ ಅಂಚೆ ಮತ್ತು ಸೇವಾ ಮತಗಳಲ್ಲಿ ಬಿ.ವೈ.ರಾಘವೇಂದ್ರ ಅವರಿಗೆ 970 ಮತ್ತು ಮಧು ಬಂಗಾರಪ್ಪ ಅವರಿಗೆ 300 ಮತಗಳು ಲಭಿಸಿವೆ.
ಹೌದು. ಈ ಬಾರಿ 6,868 ಮತದಾರರು ನೋಟಾಕ್ಕೆ ಮತ ಚಲಾಯಿಸಿದ್ದಾರೆ. ಬಿಜೆಪಿ- ಜೆಡಿಎಸ್ ಅಭ್ಯರ್ಥಿಗಳ ನೇರಾನೇರ ಹಣಾಹಣಿಯಲ್ಲಿ ಕಣದಲ್ಲಿರುವ ಉಳಿದ 10 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಈ ಎಲ್ಲ ಅಭ್ಯರ್ಥಿಗಳು ನಾಲ್ಕು ಅಂಕೆಯ ಮತಗಳನ್ನು ಪಡೆದಿದ್ದರೂ ನೋಟಾಕ್ಕಿಂತಲೂ ಕಡಿಮೆ ಮತ ಗಳಿಸಿದ್ದಾರೆ. ಬೈಂದೂರಲ್ಲಿ ಅತಿಹೆಚ್ಚು 1286, ಶಿಕಾರಿಪುರದಲ್ಲಿ ಅತಿಕಡಿಮೆ 672 ಮತಗಳು ಚಲಾವಣೆಯಾಗಿವೆ.
490 ಮತಗಳು ತಿರಸ್ಕೃತ!
ಚುನಾವಣೆಯಲ್ಲಿ 490 ಮತಗಳು ತಿರಸ್ಕೃತಗೊಂಡಿವೆ. ಎಲೆಕ್ಟ್ರಾನಿಕ್ ಮತ ಯಂತ್ರಗಳಲ್ಲಿ ಯಾವುದಾದರೂ ಒಂದು ಗುಂಡಿಯನ್ನು ಒತ್ತಬೇಕಾಗಿರುವುದರಿಂದ ಜನಸಾಮಾನ್ಯರು ಚಲಾಯಿಸುವ ಮತಗಳು ತಿರಸ್ಕೃತವಾಗುವುದಿಲ್ಲ. ಆದರೆ, ವಿದ್ಯಾವಂತರು, ಪ್ರಜ್ಞಾವಂತರು, ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವವರು ಚಲಾಯಿಸುವ ಅಂಚೆ ಮತ್ತು ಸೇವಾ ಮತಗಳೇ ತಿರಸ್ಕೃತಗೊಂಡಿವೆ.
ಮತದಾನ ಕರ್ತವ್ಯದಲ್ಲಿ ಪಾಲ್ಗೊಳ್ಳುವ ಅದೇ ಕ್ಷೇತ್ರದ ಅಧಿಕಾರಿ ಮತ್ತು ಸಿಬ್ಬಂದಿಗೆ ಸೇವಾ ಮತ ಮತ್ತು ಹೊರ ಜಿಲ್ಲೆ ಅಥವಾ ರಾಜ್ಯಗಳಲ್ಲಿ ಸೇವೆ ಸಲ್ಲಿಸುವ ಅಧಿಕಾರಿ ಮತ್ತು ಸಿಬ್ಬಂದಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ. ಕ್ಷೇತ್ರದಲ್ಲಿ ಈ ಬಾರಿ 1788 ಅಂಚೆ ಮತ್ತು ಸೇವಾ ಮತಗಳು ಚಲಾವಣೆಯಾಗಿದ್ದವು. ಅವುಗಳಲ್ಲಿ 490 ಮತಗಳು ತಿರಸ್ಕೃತಗೊಂಡಿವೆ. ಇಂತಹ ಮತಗಳನ್ನು ಚಲಾಯಿಸಲು ನಿಗದಿತ ಅರ್ಜಿ ಭರ್ತಿ ಮಾಡಬೇಕು. ಅರ್ಜಿಯಲ್ಲಿ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡದಿದ್ದಲ್ಲಿ, ಅಂತಿಮವಾಗಿ ತಮ್ಮ ಮೇಲಧಿಕಾರಿಯಿಂದ ಸಹಿ ಮಾಡಿಸದಿದ್ದಲ್ಲಿ ಅಂತಹ ಮತಗಳನ್ನು ತಿರಸ್ಕರಿಸಲಾಗುತ್ತದೆ. ಇದರ ಮಧ್ಯೆ ಅಂಚೆ ಮತ್ತು ಸೇವಾ ಮತಗಳಲ್ಲಿ ಬಿ.ವೈ.ರಾಘವೇಂದ್ರ ಅವರಿಗೆ 970 ಮತ್ತು ಮಧು ಬಂಗಾರಪ್ಪ ಅವರಿಗೆ 300 ಮತಗಳು ಲಭಿಸಿವೆ.