ಆ್ಯಪ್ನಗರ

ವಿಐಎಸ್‌ಎಲ್‌ ನಿವೃತ್ತ ಕಾರ್ಮಿಕರಿಗೆ ಮನೆ ತೆರವಿಗೆ ನೋಟಿಸ್‌

ವಿಐಎಸ್‌ಎಲ್‌ ಕಾರ್ಖಾನೆ ನಿವೃತ್ತ ಕಾರ್ಮಿಕರು ವಾಸ ಮಾಡುತ್ತಿರುವ ಮನೆಗಳನ್ನು ನವೀಕರಿಸಿ ಯಥಾ ಸ್ಥಿತಿಯಲ್ಲಿನೀಡಲು ಆಡಳಿತ ಮಂಡಳಿ ಮುಂದಾಗಬೇಕಿದೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್‌ ಹೇಳಿದರು.

Vijaya Karnataka 17 Sep 2019, 5:00 am
ಭದ್ರಾವತಿ: ವಿಐಎಸ್‌ಎಲ್‌ ಕಾರ್ಖಾನೆ ನಿವೃತ್ತ ಕಾರ್ಮಿಕರು ವಾಸ ಮಾಡುತ್ತಿರುವ ಮನೆಗಳನ್ನು ನವೀಕರಿಸಿ ಯಥಾ ಸ್ಥಿತಿಯಲ್ಲಿನೀಡಲು ಆಡಳಿತ ಮಂಡಳಿ ಮುಂದಾಗಬೇಕಿದೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್‌ ಹೇಳಿದರು.
Vijaya Karnataka Web 16BDVT1_46


ಅವರು ಸೋಮವಾರ ನ್ಯೂಟೌನ್‌ ವಿಐಎಸ್‌ಎಲ್‌ ನಗರಾಡಳಿತ ಕಚೇರಿ ಮುಂಭಾಗ ವಿಐಎಸ್‌ಎಲ್‌ ಕಾರ್ಖಾನೆ ನಿವೃತ್ತ ಕಾರ್ಮಿಕರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿಮಾತನಾಡಿದರು.

ನಿವೃತ್ತ ಕಾರ್ಮಿಕರಿಗೆ ನೀಡಲಾಗಿರುವ ವಸತಿ ಗೃಹಗಳನ್ನು ಆಡಳಿತ ಮಂಡಳಿ ನೋಟಿಸ್‌ ನೀಡಿ ತೆರವು ಮಾಡುವಂತೆ ಒತ್ತಾಯಿಸಿರುವುದು ಸರಿಯಲ್ಲ. ನೋಟಿಸ್‌ ಹಿಂಪಡೆದು ಯಥಾ ಸ್ಥಿತಿಯಲ್ಲಿಉಳಿಸಲು ಕ್ರಮ ಕೈಗೊಳ್ಳಬೇಕು. ಆಡಳಿತ ಮಂಡಳಿ ಯಾವುದೇ ರೀತಿಯಲ್ಲಿತೊಂದರೆ ನೀಡದಂತೆ ಕ್ರಮಕ್ಕೆ ಮುಂದಾಗಬೇಕು. ನಿವೃತ್ತ ಕಾರ್ಮಿಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಹಾಲಿ ಇರುವ ಮನೆಗಳನ್ನು ನವೀಕರಿಸಿ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿ, ಕಾರ್ಯಪಾಲಕ ನಿರ್ದೇಶಕ ಕೆ.ಎಲ್‌.ಎಸ್‌. ರಾವ್‌ ಅವರಿಗೆ ಮನವಿ ಸಲ್ಲಿಸಿದರು.

ವಸತಿಗೃಹಗಳನ್ನು ಆಡಳಿತ ಮಂಡಳಿ ಮುಂದುವರಿಸಲಿ:
ನಗರದ ವಿಐಎಸ್‌ಎಲ್‌ ಕಾರ್ಖಾನೆಯು ನಿವೃತ್ತ ಕಾರ್ಮಿಕರಿಗೆ ನೀಡಿರುವ ಮನೆಗಳನ್ನು ಬಿಡಿಸದೇ ಯಥಾಸ್ಥಿತಿಯಲ್ಲಿಮುಂದುವರಿಸಿ ಅನುಕೂಲ ಮಾಡಿ ಕೊಡುವಂತೆ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಒತ್ತಾಯಿಸಿದರು.

ಹಾಲಿ ವಾಸವಿರುವ ಮನೆಗಳನ್ನು ಖಾಲಿ ಮಾಡಿಸಲು ಆಡಳಿತ ಮಂಡಳಿ ಏಕಾಏಕಿ ನೋಟಿಸ್‌ ನೀಡಿರುವುದು ಖಂಡನೀಯ. ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಮನೆಗಳನ್ನು ತೆರವು ಮಾಡಬೇಡಿ ಎಂದು ನಿವೃತ್ತರಿಗೆ ಧೈರ್ಯ ತುಂಬಿದರು.

ಹಿರಿಯ ಕಾರ್ಮಿಕ ಮುಖಂಡ ಎಸ್‌.ಎನ್‌.ಬಾಲಕೃಷ್ಣ ಮಾತನಾಡಿ, ನಿವೃತ್ತ ಕಾರ್ಮಿಕರಿಗೆ ಮನೆಗಳ ತೆರವಿಗೆ ನೋಟಿಸ್‌ ನೀಡಿರುವುದು ಖಂಡನೀಯ. ನಿವೃತ್ತರಾಗಿರುವ ಕಾರ್ಮಿಕರ ಮಕ್ಕಳು ತಂದೆ ತಾಯಿಗಳನ್ನು ತೊರೆದು ಬೇರೆ ಬೇರೆ ನೆಲೆಸಿದ್ದಾರೆ. ನಿವೃತ್ತರಿಗೆ ಮನೆ ತೊರೆಯುವಂತೆ ಆದೇಶ ನೀಡಿರುವುದನ್ನು ಕೈಬಿಟ್ಟು ಬಾಡಿಗೆ ಆಧಾರದಡಿ ಮುಂದುವರಿಸಲು ಅನುವು ಮಾಡಿಕೊಡಬೇಕೆಂದರು.

ಕೂಡಲೇ ಸಂಸದ ಬಿ.ವೈ.ರಾಘವೇಂದ್ರ ಅವರು ಮಧ್ಯೆ ಪ್ರವೇಶಿಸಿ ಕಾರ್ಮಿಕರ ಸಮಸ್ಯೆಗಳನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಗಮನ ಸೆಳೆದು, ಕ್ರಮ ಕೈಗೊಳ್ಳಬೇಕು ಎಂದರು.

ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಎಎಲ್‌ಎಸ್‌ ರಾವ್‌, ಅಧಿಕಾರಿಗಳಾದ ಚಕ್ರವರ್ತಿ, ವಿಶ್ವನಾಥ್‌, ಕಾರ್ಮಿಕ ಸಂಘದ ಪದಾಧಿಕಾರಿಗಳಾದ ಜೆ.ಜಗದೀಶ್‌, ಬಸಂತಕುಮಾರ್‌, ಅಮೃತ್‌ ಕುಮಾರ್‌, ನಿವೃತ್ತ ಕಲ್ಯಾಣ ಕೇಂದ್ರದ ಜೆ.ಎನ್‌.ನಾಗಭೂಷಣ್‌, ಹನುಮಂತರೆಡ್ಡಿ, ರಾಮಲಿಂಗಯ್ಯ ಮತ್ತಿತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ