ಆ್ಯಪ್ನಗರ

ಆರೋಗ್ಯ ಜಾಗೃತಿಗೆ ಪೋಷಣ ಅಭಿಯಾನ

ಆರೋಗ್ಯ ಕುರಿತು ಜನರಿಗೆ ಸೂಕ್ತ ಮಾಹಿತಿ ನೀಡಬೇಕು. ಪೋಷಣ ಅಭಿಯಾನ ಮೂಲಕ ಜಾಗೃತಿ ಮೂಡಿಸಬೇಕು. ಕೇಂದ್ರ ಸರಕಾರದ ಪೋಷಣ ಅಭಿಯಾನ ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

Vijaya Karnataka 14 Sep 2019, 5:00 am
ತೀರ್ಥಹಳ್ಳಿ: ಆರೋಗ್ಯ ಕುರಿತು ಜನರಿಗೆ ಸೂಕ್ತ ಮಾಹಿತಿ ನೀಡಬೇಕು. ಪೋಷಣ ಅಭಿಯಾನ ಮೂಲಕ ಜಾಗೃತಿ ಮೂಡಿಸಬೇಕು. ಕೇಂದ್ರ ಸರಕಾರದ ಪೋಷಣ ಅಭಿಯಾನ ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
Vijaya Karnataka Web nutrition campaign for health awareness
ಆರೋಗ್ಯ ಜಾಗೃತಿಗೆ ಪೋಷಣ ಅಭಿಯಾನ


ಗುರುವಾರ ಪಟ್ಟಣದ ಜೆಸಿ ಆಸ್ಪತ್ರೆಯಲ್ಲಿಪೋಷಣ ಅಭಿಯಾನ, ರೋಟಾ ವೈರಸ್‌ ಲಸಿಕೆ ನೀಡುವ ಕಾರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಗುವಿನ ಮೊದಲ 1000 ದಿನದ ಅವಧಿಯಲ್ಲಿನ ಆರೈಕೆಗಾಗಿ ಕೇಂದ್ರ, ರಾಜ್ಯ ಸರಕಾರ ಜಾರಿಗೆ ತಂದಿರುವ ಪೋಷಣ ಅಭಿಯಾನ, ರೋಟಾವೈರಸ್‌ ಕಾರ‍್ಯಕ್ರಮ ಯಶಸ್ವಿಗೊಂಡಾಗ ಮಾತ್ರ ಉದ್ದೇಶ ಸಾಕಾರಗೊಳ್ಳಲು ಸಾಧ್ಯ. ಗ್ರಾಮಾಂತರ ಪ್ರದೇಶದಲ್ಲಿಅಭಿಯಾನ ಹಮ್ಮಿಕೊಳ್ಳಬೇಕೆಂದರು. ತಾಲೂಕು ವೈದ್ಯಾಧಿಕಾರಿ ಡಾ.ಅಶೋಕ್‌ ಪ್ರಾಸ್ತಾವಿಕ ಮಾತನಾಡಿದರು. ಮಕ್ಕಳ ತಜ್ಞ ಡಾ.ಪ್ರಭಾಕರ್‌, ಪೌಷ್ಟಿಕ ಆಹಾರ ಕುರಿತು ತಜ್ಞವೈದ್ಯ ಡಾ.ಗಿರೀಶ್‌ ಮಾಹಿತಿ ನೀಡಿದರು. ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಚಂದವಳ್ಳಿ ಸೋಮಶೇಖರ್‌, ಸದಸ್ಯರಾದ ಪ್ರಶಾಂತ್‌ಕುಕ್ಕೆ, ಟಿ.ಮಂಜುನಾಥ್‌, ಜೆಸಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ನಟರಾಜ್‌, ಡಾ.ಸುಮಾ, ಡಾ.ಮಹಿಮಾ, ಹಿರಿಯ ಆರೋಗ್ಯ ಸಹಾಯಕ ಎ.ಎಂ.ಜಗದೀಶ್‌, ನಥಾಲಬಾಯಿ, ಅಂಗನವಾಡಿ ಹಿರಿಯ ಮೇಲ್ವಿಚಾರಕಿ ಲಕ್ಷ್ಮೇ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ