ಆ್ಯಪ್ನಗರ

6ರಂದು ಓಣಂ ಆಚರಣೆ

ನಗರದ ಕೇರಳ ಸಮಾಜದಿಂದ ಅ.6ರಂದು ಕೇರಳದ ಪ್ರತಿಷ್ಠಿತ ಹಬ್ಬವಾದ ಓಣಂ ಆಚರಣೆ ಮಾಡಲಾಗುತ್ತಿದೆ ಎಂದು ಸಮಾಜದ ಅಧ್ಯಕ್ಷ ಕೆ.ಚಂದ್ರಶೇಖರ ಪೊದುವಾಳ್‌ ತಿಳಿಸಿದರು.

Vijaya Karnataka 5 Oct 2019, 5:00 am
ಶಿವಮೊಗ್ಗ: ನಗರದ ಕೇರಳ ಸಮಾಜದಿಂದ ಅ.6ರಂದು ಕೇರಳದ ಪ್ರತಿಷ್ಠಿತ ಹಬ್ಬವಾದ ಓಣಂ ಆಚರಣೆ ಮಾಡಲಾಗುತ್ತಿದೆ ಎಂದು ಸಮಾಜದ ಅಧ್ಯಕ್ಷ ಕೆ.ಚಂದ್ರಶೇಖರ ಪೊದುವಾಳ್‌ ತಿಳಿಸಿದರು.
Vijaya Karnataka Web onam celebration on 6th
6ರಂದು ಓಣಂ ಆಚರಣೆ

ಸುದ್ದಿಗೋಷ್ಠಿಯಲ್ಲಿಶುಕ್ರವಾರ ಅವರು ಮಾತನಾಡಿ, ಓಣಂ ಕೇರಳ ರಾಜ್ಯದ ಬಹಳ ಮಹತ್ವದ ಹಬ್ಬವಾಗಿದೆ. ಇದನ್ನು ಹಿಂದು, ಮುಸ್ಲಿಂ, ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲರು ಒಟ್ಟಾಗಿ ಆಚರಿಸುವ ಸಂಭ್ರಮ ಎಂದರು. ಕಾರ್ಯಕ್ರಮ ಉದ್ಘಾಟನೆ: ನಗರದ ಕೆಇಬಿ ಸಭಾಭವನದಲ್ಲಿಅ.6ರಂದು ಬೆಳಗ್ಗೆ 11ಕ್ಕೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಓಣಂ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ.
ವಿಧಾನ ಪರಿಷತ್‌ ಸದಸ್ಯ ಆರ್‌.ಪ್ರಸನ್ನಕುಮಾರ್‌, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್‌, ಕೇರಳ ಸಮಾಜದ ಮಹಿಳಾ ಅಧ್ಯಕ್ಷೆ ನಿರ್ಮಲಾ ಕಾಶಿ ಮತ್ತಿತರರು ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದರು. ಗೋಷ್ಠಿಯಲ್ಲಿವಿ.ಪ್ರಮೋದ್‌, ವಿ.ಗಿರೀಶ್‌ ಕುಮಾರ್‌, ಸುರೇಶ್‌ ಕುಮಾರ್‌, ಕೆ.ಶಿವಕುಮಾರ್‌, ಭರತನ್‌, ಶಾಂತಾ ನಾಯಕ್‌, ದೇವಕಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ