ಆ್ಯಪ್ನಗರ

‘ಶಾಲೆ ಬಳಿ ತೆರೆದ ಬಾವಿಗಿಲ್ಲಕೈಪಿಡಿ’

ಸರಕಾರಿ ಶಾಲೆಗಳ ಬಳಿ ನಿರ್ಮಿಸಿರುವ ತೆರೆದ ಬಾವಿಗಳಿಗೆ ಕೈಪಿಡಿ ಇಲ್ಲದೇ ಇರುವುದು ಮತ್ತು ಶೌಚಾಲಯಕ್ಕೆ ಸಮರ್ಪಕವಾಗಿ ನೀರಿನ ವ್ಯವಸ್ಥೆ ಮಾಡುವುದು ಸೇರಿದಂತೆ ಇತರ ಮೂಲ ಸಮಸ್ಯೆ ಬಗೆಹರಿಸುವಂತೆ ಮಕ್ಕಳು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಒತ್ತಾಯಿಸಿದರು.

Vijaya Karnataka 21 Nov 2019, 5:00 am
ರಿಪ್ಪನ್‌ಪೇಟೆ: ಸರಕಾರಿ ಶಾಲೆಗಳ ಬಳಿ ನಿರ್ಮಿಸಿರುವ ತೆರೆದ ಬಾವಿಗಳಿಗೆ ಕೈಪಿಡಿ ಇಲ್ಲದೇ ಇರುವುದು ಮತ್ತು ಶೌಚಾಲಯಕ್ಕೆ ಸಮರ್ಪಕವಾಗಿ ನೀರಿನ ವ್ಯವಸ್ಥೆ ಮಾಡುವುದು ಸೇರಿದಂತೆ ಇತರ ಮೂಲ ಸಮಸ್ಯೆ ಬಗೆಹರಿಸುವಂತೆ ಮಕ್ಕಳು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಒತ್ತಾಯಿಸಿದರು.
Vijaya Karnataka Web open well near school
‘ಶಾಲೆ ಬಳಿ ತೆರೆದ ಬಾವಿಗಿಲ್ಲಕೈಪಿಡಿ’

ಅಮೃತ ಗ್ರಾಮ ಪಂಚಾಯಿತಿ ವತಿಯಿಂದ ಅಮೃತ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆವರಣದಲ್ಲಿಮಂಗಳವಾರ ಆಯೋಜಿಸಿದ್ದ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿಅವರು ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ನಿಲ್ದಾಣವಿಲ್ಲದೇ ಸೈಕಲ್‌ ಬಿಸಿಲಲ್ಲಿಇಡಬೇಕಾಗಿದೆ ಮತ್ತು ಕುಡಿಯುವ ನೀರಿನ ತೆರೆದ ಬಾವಿ ನಿರ್ಮಿಸಿದ್ದರೂ ಕೈಪಿಡಿ ಮಾಡಿಲ್ಲ.
ತಕ್ಷಣ ಅಪೂರ್ಣವಾಗಿರುವ ಬಾವಿ ಕೈಪಿಡಿ ಪೂರ್ಣಗೊಳಿಸುವಂತೆ ಆಗ್ರಹಿಸಿದರು. ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದ ದೀಕ್ಷಾ ಮಾತನಾಡಿ, ಕಡ್ಡಾಯವಾಗಿ ಸರಕಾರ ಪ್ಲಾಸ್ಟಿಕ್‌ ತಯಾರಿಕಾ ಘಟಕವನ್ನು ಸಂಪೂರ್ಣ ಮುಚ್ಚುವಂತೆ ಸಭೆಯಲ್ಲಿನಿರ್ಣಯ ಕೈಗೊಳ್ಳಬೇಕು ಹಾಗೂ ಅಂಗಡಿಗಳಲ್ಲಿಬಟ್ಟೆ ಚೀಲ ತರದವರಿಗೆ ಸಾಮಾನು ನೀಡದಂತೆ ಎಚ್ಚರಿಕೆ ನೀಡಬೇಕು ಹಾಗೂ ಪ್ಲಾಸ್ಟಿಕ್‌ ಬಳಕೆಯಿಂದಾಗುವ ಮಾರಕ ರೋಗ ತಡೆಗಟ್ಟಲು ಎಲ್ಲರೂ ಜಾಗೃತರಾಗ ಬೇಕೆಂದರು.
ವಿದ್ಯಾರ್ಥಿನಿ ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿವಿಧ ಶಾಲೆ ವಿದ್ಯಾರ್ಥಿಗಳಾದ ದೀಕ್ಷಾ, ಎಂ.ಆರ್‌. ಐಶ್ವರ್ಯ, ಮಧುರ, ಜಾನವಿ, ಹಾಜಿರಾ, ಭೂಮಿಕಾ, ಪಿ.ಪ್ರಗತಿ, ಎನ್‌.ಸಿಂಚನಾ ಇತರ ಸರಕಾರಿ ವಿದ್ಯಾರ್ಥಿಗಳು ಆಯಾ ಶಾಲೆಗಳಲ್ಲಿನ ಸಮಸ್ಯೆ ಬಿಡಿಸಿಟ್ಟರು. ಪಿಡಿಓ ಸುಧಾ ಪ್ರಾಸ್ತಾವಿಕ ಮಾತನಾಡಿದರು.
ಮಕ್ಕಳ ಗ್ರಾಮ ಸಭೆಯಲ್ಲಿಗ್ರಾ.ಪಂ.ಅಧ್ಯಕ್ಷೆ ಗೀತಾ, ತಾಲೂಕು ಮಕ್ಕಳ ಹಕ್ಕು ನೋಡಲ್‌ ಅಧಿಕಾರಿ ಶಾಂತಾ, ಸಿಅರ್‌ಪಿ ವಿಶ್ವನಾಥ್‌, ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಪ್ರಾಚಾರ್ಯ ಉದಯಕುಮಾರ್‌, ಮುಖ್ಯಶಿಕ್ಷಕಿ ಹೇಮಲತಾ, ಗ್ರಾ.ಪಂ.ಸದಸ್ಯೆ ಲತಾ, ಗಂಗಾಧರಪ್ಪಗೌಡ ಶಿವಪುರ, ಸುರೇಶ್‌, ನಾಗರತ್ನ, ಶಿಕ್ಷಕ ನಾಗರಾಜ್‌, ವಿವಿಧ ಶಾಲೆಗಳ ಎಸ್‌ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು ಇದ್ದರು. ಎನ್‌.ಸಿಂಚನಾ ಪ್ರಾರ್ಥಿಸಿ, ಟಿ.ಎನ್‌.ಜ್ಯೋತಿ ಸ್ವಾಗತಿಸಿದರು. ಎನ್‌.ಅನುಷಾ ನಿರೂಪಿಸಿದರು. ಕಾರ‍್ಯದರ್ಶಿ ಮೇಘರಾಜ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ