ಆ್ಯಪ್ನಗರ

ಪರಿಶಿಷ್ಟ ಕುಟುಂಬದ ಮನೆ ತೆರವಿಗೆ ವಿರೋಧ

ನ್ಯಾಯಾಲಯ ನೀಡಿದ ತಡೆಯಾಜ್ಞೆ ಆದೇಶ ಉಲ್ಲಂಘಿಸಿ 2 ಪರಿಶಿಷ್ಟ ಕುಟುಂಬಗಳ ಮನೆಯನ್ನು ಬಲವಂತವಾಗಿ ತೆರವು ಮಾಡಿದ್ದನ್ನು ವಿರೋಧಿಸಿ ಗುರುವಾರ ತಾಲೂಕಿನ ಮೇಗರವಳ್ಳಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

Vijaya Karnataka 11 Aug 2019, 5:00 am
ತೀರ್ಥಹಳ್ಳಿ: ನ್ಯಾಯಾಲಯ ನೀಡಿದ ತಡೆಯಾಜ್ಞೆ ಆದೇಶ ಉಲ್ಲಂಘಿಸಿ 2 ಪರಿಶಿಷ್ಟ ಕುಟುಂಬಗಳ ಮನೆಯನ್ನು ಬಲವಂತವಾಗಿ ತೆರವು ಮಾಡಿದ್ದನ್ನು ವಿರೋಧಿಸಿ ಗುರುವಾರ ತಾಲೂಕಿನ ಮೇಗರವಳ್ಳಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
Vijaya Karnataka Web SMR-10TTH1


ಮನೆಗೆ ಹಾನಿ ಮಾಡಿ ಬೇಲಿ ಕಿತ್ತು, ಕುಡಿವ ನೀರಿನ ಬಾವಿ ಮುಚ್ಚಿ ಅನಾಗರಿಕರಂತೆ ವರ್ತಿಸಿದ್ದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು. ಹಾನಿಗೊಂಡ ಮನೆ ದುರಸ್ತಿಗೊಳಿಸಿ , ಬೇಲಿಯನ್ನು ಮರು ನಿರ್ಮಾಣ, ಮುಚ್ಚಿದ ತೆರೆದ ಬಾವಿ ಸ್ವಚ್ಛಗೊಳಿಸುವ ಕಾರ‍್ಯವನ್ನು ಶ್ರಮದಾನ ಮೂಲಕ ಪ್ರತಿಭಟನಾಕಾರರು ಮಾಡಿದರು.

ಶತಮಾನಕ್ಕೂ ಹೆಚ್ಚು ವರ್ಷಗಳಿಂದ ವಾಸ ಇರುವ ಜಾಗದಿಂದ ಬಡ ಪರಿಶಿಷ್ಟ ಕುಟುಂಬಗಳನ್ನು ತೆರವುಗೊಳಿಸುವ ಹುನ್ನಾರ ರೂಪಿಸಿ ವಂಚಿಸುವ ಪ್ರಯತ್ನ ನಡೆಸಲಾಗಿದೆ. ಸುಳ್ಳು ದಾಖಲೆ ಸೃಷ್ಟಿಸಿ ಪರಿಶಿಷ್ಟ ಕುಟುಂಬಗಳಿಗೆ ಮೋಸ ಮಾಡಲಾಗುತ್ತಿದೆ. ತೆರವು ಕಾರಾರ‍ಯಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ, ಸಿಬ್ಬಂದಿ ಮೇಲೆ ಪರಿಶಿಷ್ಟ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಮೇಗರವಳ್ಳಿ ಗ್ರಾಮದ ಸ.ನಂ.1ರಲ್ಲಿ ಒಟ್ಟು 2.07 ಗುಂಟೆ ವಿಸ್ತೀರ್ಣದ ಪ್ರದೇಶ ಇದ್ದು ಸರಕಾರದಿಂದ ನಿಯಮ ಬಾಹಿರವಾಗಿ ಮಂಜೂರು ಪಡೆದು ಅನಾದಿ ಕಾಲದಿಂದ ಸದರಿ ಪ್ರದೇಶದಲ್ಲಿ ವಾಸ ಮಾಡುತ್ತಿರುವ ದಲಿತ ಕುಟುಂಬಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.

1960-61ರಲ್ಲಿ ದಲಿತ ಕುಟುಂಬಗಳಿಗೆ ಸದರಿ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಮನೆ ಕಂದಾಯ ಪಾವತಿಸಿಕೊಂಡು ಖಾತೆ ನಮೂದು ಮಾಡಿದೆ. ಸದರಿ ಪ್ರದೇಶದಲ್ಲಿ ಸುಮಾರು 1ವರೆ ಎಕರೆ ಸರಕಾರಿ ಪ್ರದೇಶ ಇದ್ದು ಕಂದಾಯ ಇಲಾಖೆ ತಕ್ಷಣ ಪರಿಶೀಲಿಸಿ ದಲಿತ ಕುಟುಂಬಗಳಿಗೆ ಭೂಮಿ ಮಂಜೂರುಗೊಳಿಸಿ ಖಾತೆ ಹಕ್ಕು ನೀಡಬೇಕು. ಪರಿಶಿಷ್ಟ ಕುಟುಂಬಗಳಿಗೆ ಕಿರುಕುಳ ನೀಡಲು ಪ್ರಯತ್ನಿಸಿದರೆ ವಾಸಿಸುವವನೆ ಜಾಗದ ಒಡೆಯ ಚಳವಳಿ ಹಮ್ಮಿಕೊಳ್ಳಲಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ. ಅಂಬೇಡ್ಕರ್‌ ವಾದ) ಪ್ರತಿಭಟನೆ ನೇತೃತ್ವ ವಹಿಸಿದ್ದವು. ಸಮಿತಿಯ ಜಿಲ್ಲಾ ಸಂಚಾಲಕ ಹಾಲೇಶಪ್ಪ, ತಾಲೂಕು ಸಂಚಾಲಕ ಕೀಗಡಿ ಕೃಷ್ಣಮೂರ್ತಿ, ಸಹ ಸಂಚಾಲಕ ಹಾರೋಗೊಳಿಗೆ ವಿಶ್ವನಾಥ್‌, ಪಡುವಳ್ಳಿ ಕಿಟ್ಟಪ್ಪ ಮಾಸ್ತರ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ