ಆ್ಯಪ್ನಗರ

ನೂತನ ಕಾಯಿದೆಗೆ ವಿರೋಧ

ಕೇಂದ್ರ ಸರಕಾರ ಹೊರತರಲು ಮುಂದಾಗಿರುವ ನ್ಯಾಷನಲ್‌ ಮೆಡಿಕಲ್‌ ಕಮಿಷನ್‌ ಕಾಯಿದೆ ವಿರುದ್ಧ ಜಿಲ್ಲಾದ್ಯಂತ ಬುಧವಾರ ಭಾರತೀಯ ವೈದ್ಯಕೀಯ ಸಂಘ ನೇತೃತ್ವದಲ್ಲಿ ಖಾಸಗಿ ಆಸ್ಪತ್ರೆ ವೈದ್ಯರು ಹೊರ ರೋಗಿಗಳ ಘಟಕ ಬಂದ್‌ ಮಾಡಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು

Vijaya Karnataka 1 Aug 2019, 5:00 am
ಶಿವಮೊಗ್ಗ : ಕೇಂದ್ರ ಸರಕಾರ ಹೊರತರಲು ಮುಂದಾಗಿರುವ ನ್ಯಾಷನಲ್‌ ಮೆಡಿಕಲ್‌ ಕಮಿಷನ್‌ ಕಾಯಿದೆ ವಿರುದ್ಧ ಜಿಲ್ಲಾದ್ಯಂತ ಬುಧವಾರ ಭಾರತೀಯ ವೈದ್ಯಕೀಯ ಸಂಘ ನೇತೃತ್ವದಲ್ಲಿ ಖಾಸಗಿ ಆಸ್ಪತ್ರೆ ವೈದ್ಯರು ಹೊರ ರೋಗಿಗಳ ಘಟಕ ಬಂದ್‌ ಮಾಡಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು
Vijaya Karnataka Web SMR-31GANESH1


ಕೇಂದ್ರ ಸರಕಾರದ ಕಾಯಿದೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮುಷ್ಕರಕ್ಕೆ ಬೆಂಬಲ ವ್ಯಕ್ತವಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಹೊರತುಪಡಿಸಿ, ಹೊರ ರೋಗಗಳ ಘಟಕ ಬಂದ್‌ ಮಾಡಿ ವೈದ್ಯರು ಪ್ರತಿಭಟಿಸಿದರು.

ಹಾಲಿ ಮೆಡಿಕಲ್‌ ಕೌನ್ಸಿಲ್‌ ಆಫ್‌ ಇಂಡಿಯಾ ಬದಲಾಯಿಸಿ ಅದರ ಜಾಗದಲ್ಲಿ ನ್ಯಾಷನಲ್‌ ಮೆಡಿಕಲ್‌ ಕಮಿಷನ್‌ ತರಲು ಕಾಯ್ದೆಯಲ್ಲಿ ತಿದ್ದುಪಡಿ ಮಾಡಲಾಗಿದೆ. ನೀಟ್‌ಪರೀಕ್ಷೆ ಜತೆಗೆ ಹೊಸದಾಗಿ ನೆಕ್ಟ್ಸ್ ಪರೀಕ್ಷೆಯನ್ನು ಏಮ್ಸ್‌ನಂಥ ಸಂಸ್ಥೆಗೆ ತರಲಾಗುತ್ತಿದೆ. ಇದಲ್ಲದೇ ಮೆಡಿಕಲ್‌ ಶುಲ್ಕ, ಸೀಟು ಹಂಚಿಕೆಯಲ್ಲೂ ಬದಲಾವಣೆಯಾಗಲಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಪರದಾಡಿದ ರೋಗಿಗಳು:
ವೈದ್ಯರ ಪ್ರತಿಭಟನೆ ಅಂಗವಾಗಿ ಬುಧವಾರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಘಟಕ ಬಂದ್‌ ಮಾಡಲಾಗಿತ್ತು.ಇದರಿಂದ ದೂರದ ಊರುಗಳಿಂದ ಆಸ್ಪತ್ರೆಗೆ ಬಂದಿದ್ದ ರೋಗಿಗಳು ಚಿಕಿತ್ಸೆ ಸಿಗದೇ ಪರದಾಡಿದರು. ನಗರದಲ್ಲಿ ಖಾಸಗಿ ಆಸ್ಪತ್ರೆಗಳು ಬಂದ್‌ ಇದ್ದ ಕಾರಣ ಹೊರ ರೋಗಿಗಳು ಮೆಗ್ಗಾನ್‌ ಆಸ್ಪತ್ರೆಗೆ ದೌಡಾಯಿಸಿದರು. ಪ್ರತಿಭಟನೆಯಲ್ಲಿ ಐಎಂಎ ಶಿವಮೊಗ್ಗ ಶಾಖೆ ಅಧ್ಯಕ್ಷ ಡಾ.ಪಿ.ಕೆ.ಪೈ, ಡಾ.ಎಸ್‌.ಎಂ.ವೀರೇಶ್‌, ಡಾ.ಶ್ರೀಧರ್‌, ಡಾ.ಪುರುಷೋತ್ತÜಮ್‌, ಡಾ.ನರೇಂದ್ರ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ