ಆ್ಯಪ್ನಗರ

ಅದಿರು ಸಾಗಿಸುತ್ತಿದ್ದ ಲಾರಿ ಪಲ್ಟಿ: ಚಾಲಕನಿಗೆ ಗಾಯ

ಅದಿರು ಸಾಗಿಸುತ್ತಿದ್ದ ಬೃಹತ್‌ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗದ್ದೆಗೆ ಪಲ್ಟಿ ಹೊಡೆದ ಘಟನೆ ಪಟ್ಟಣದ ಮಾವಿನಕೊಪ್ಪ ಸಮೀಪದ ರಾಣೆಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ನಡೆದಿದೆ.

Vijaya Karnataka 26 Jul 2019, 5:00 am
ಹೊಸನಗರ: ಅದಿರು ಸಾಗಿಸುತ್ತಿದ್ದ ಬೃಹತ್‌ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗದ್ದೆಗೆ ಪಲ್ಟಿ ಹೊಡೆದ ಘಟನೆ ಪಟ್ಟಣದ ಮಾವಿನಕೊಪ್ಪ ಸಮೀಪದ ರಾಣೆಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ನಡೆದಿದೆ.
Vijaya Karnataka Web SMR-25HOSP3


ಅದಿರು ತುಂಬಿದ ಲಾರಿ ಮಂಗಳೂರಿನಿಂದ ಬಳ್ಳಾರಿಗೆ ಸಾಗುತ್ತಿತ್ತು. ರಸ್ತೆ ಬದಿಯಲ್ಲಿ ಬಸ್‌ ಕೆಟ್ಟು ನಿಂತಿದ್ದು, ಕಿರಿದಾದ ಜಾಗದಲ್ಲಿ ಮತ್ತೊಂದು ವಾಹನಕ್ಕೆ ಸೈಡ್‌ ಕೊಡುವ ವೇಳೆ ಅವಘಡ ಸಂಭವಿಸಿದೆ. ಬೃಹತ್‌ ಲಾರಿಯ ಚಕ್ರ ರಸ್ತೆ ಕೆಳಗಿಳಿಯುತ್ತಿದ್ದಂತೆ ಮಣ್ಣು ಕುಸಿತಗೊಂಡು ಲಾರಿ ಸುಮಾರು 12 ಅಡಿ ಆಳದ ಗದ್ದೆಗೆ ಪಲ್ಟಿ ಹೊಡೆದಿದೆ. ಲಾರಿ ಚಾಲಕ ಹೊಸನಗರದ ಮುರಳಿ(32) ಎಂಬುವವರ ಕುತ್ತಿಗೆ ಮತ್ತು ಕಾಲಿಗೆ ತೀವ್ರ ಪೆಟ್ಟಾಗಿದ್ದು, ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೊಸನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ