ಆ್ಯಪ್ನಗರ

ಕ್ಷೇತ್ರದಲ್ಲಿ ಸಾವಯವ ರಾಜಕಾರಣ: ಮಹಿಮಾ

ಸಾವಯವ ರಾಜಕಾರಣದ ಚಿಂತನೆಯಡಿ ಬದಲಾವಣೆಗೆ ಪ್ರಯತ್ನ ಮಾಡಲಾಗುತ್ತಿದೆ. ಸಕರಾತ್ಮಕ ಆಲೋಚನೆಗಳಿಂದ ರಾಜಕಾರಣವನ್ನು ಕಟ್ಟುವ ಕೆಲಸ ಆಗಬೇಕಿದೆ. ಚುನಾವಣೆಯನ್ನು ವೇದಿಕೆಯನ್ನಾಗಿಸಿಕೊಂಡು ಬದಲಾವಣೆ ರಾಜಕಾರಣದ ಗುರಿ ತಲುಪಲು ಜನರ ಸಹಕಾರ ಬೇಕಿದೆ ಎಂದು ಲೋಕಸಭಾ ಕ್ಷೇತ್ರದ ಜೆಡಿಯು ಅಭ್ಯರ್ಥಿ ಮಹಿಮಾ ಜೆ.ಪಟೇಲ್‌ ಹೇಳಿದರು.

Vijaya Karnataka 31 Oct 2018, 5:00 am
ತೀರ್ಥಹಳ್ಳಿ : ಸಾವಯವ ರಾಜಕಾರಣದ ಚಿಂತನೆಯಡಿ ಬದಲಾವಣೆಗೆ ಪ್ರಯತ್ನ ಮಾಡಲಾಗುತ್ತಿದೆ. ಸಕರಾತ್ಮಕ ಆಲೋಚನೆಗಳಿಂದ ರಾಜಕಾರಣವನ್ನು ಕಟ್ಟುವ ಕೆಲಸ ಆಗಬೇಕಿದೆ. ಚುನಾವಣೆಯನ್ನು ವೇದಿಕೆಯನ್ನಾಗಿಸಿಕೊಂಡು ಬದಲಾವಣೆ ರಾಜಕಾರಣದ ಗುರಿ ತಲುಪಲು ಜನರ ಸಹಕಾರ ಬೇಕಿದೆ ಎಂದು ಲೋಕಸಭಾ ಕ್ಷೇತ್ರದ ಜೆಡಿಯು ಅಭ್ಯರ್ಥಿ ಮಹಿಮಾ ಜೆ.ಪಟೇಲ್‌ ಹೇಳಿದರು.
Vijaya Karnataka Web SMR-30TTH3


ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಸ್ತುತ ರಾಜಕಾರಣದ ಕುರಿತು ಹೆಚ್ಚು ಜನರಲ್ಲಿ, ಮುಖಂಡರಲ್ಲಿ ಬೇಸರವಿದೆ. ಬದ್ಧತೆಯುಳ್ಳ ರಾಜಕಾರಣದ ಅಗತ್ಯವಿದೆ ಎಂಬ ಮನಸಿದೆ. ಹೃದಯಕ್ಕೆ ಬೇಕಾದ ರಾಜಕಾರಣವನ್ನು ಜನರು ಆಯ್ಕೆ ಮಾಡಿಕೊಳ್ಳಬೇಕಿದ್ದು, ಕೆಟ್ಟದನ್ನು ದೂರ ಮಾಡಬೇಕು ಎಂದರು.

ಶಿವಮೊಗ್ಗ ಉಪಚುನಾವಣೆ ಬದಲಾವಣೆ ರಾಜಕಾರಣ ಸಂದೇಶ ರವಾನೆಗೆ ಉತ್ತಮ ವೇದಿಕೆಯಾಗಿದೆ. ಹಣ ಹಾಕಿ ಹಣ ಮಾಡುವ ರಾಜಕಾರಣವನ್ನು ಜನರು ವಿರೋಧಿಸಬೇಕು ಎಂದರು.

ಜೆಡಿಯು ರಾಜ್ಯ ಮುಖಂಡ ತ್ರಿಶೂಲ್‌ಪಾಣಿ ಪಟೇಲ್‌, ಯುವ ವಿಭಾಗದ ರಾಜ್ಯಾಧ್ಯಕ್ಷ ಶಿವರಾಮ್‌, ಮುಖಂಡರಾದ ತೋಟದ್‌, ಎಸ್‌.ಎಸ್‌. ರೆಡ್ಡಿ, ಬೇಹಳ್ಳಿ ನಾಗರಾಜ್‌, ಶಿವರುದ್ರಸ್ವಾಮಿ, ಪ್ರಶಾಂತ್‌, ರವಿಕಿಶನ್‌ ಮತ್ತಿತರರು ಇದ್ದರು. ನಂತರ ಪಟ್ಟಣದ ವಿವಿಧೆಡೆ ಮತಯಾಚಿಸಿದರು.

-----------
ಸುಂಟರಗಾಳಿ, ಬಿರುಗಾಳಿ ರಾಜಕಾರಣದ ನಡುವೆ ತಂಗಾಳಿ ರಾಜಕಾರಣವನ್ನು ಬಯಸಿದ್ದೇನೆ, ದ್ವೇಷ, ಅಸೂಯೆ, ಆಕ್ರೋಶ ರಾಜಕಾರಣದಿಂದ ಒಳಿತು ಸಮಾಜ ಕಟ್ಟಲು ಸಾಧ್ಯವಿಲ್ಲ. ಯಾರನ್ನು ಟೀಕಿಸಲು ಹೋಗುವುದಿಲ್ಲ. ಉತ್ತಮ ವಿಚಾರಗಳನ್ನು ತಿಳಿಸಿ ಅವರನ್ನು ನಮ್ಮ ಕಡೆಗೆ ಬರುವಂತೆ ಮಾಡುವ ಪ್ರಯತ್ನ ಮಾಡಲಾಗುತ್ತದೆ.

-ಮಹಿಮಾ ಜೆ.ಪಟೇಲ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ