ಆ್ಯಪ್ನಗರ

ಸೈನಿಕರಿಂದಲೇ ಸಾಮಾನ್ಯರಿಗೆ ನೆಮ್ಮದಿ

ಮಾನವನ ಜನಾಂಗದ ವಿಕಾಸದ ಆರಂಭದಿಂದಲೂ ಹೋರಾಟ ಮತ್ತು ಸ್ವ ರಕ್ಷ ಣೆ ಕಂಡು ಬರುತ್ತದೆ. ಇತಿಹಾಸ, ಪುರಾಣ, ಮಹಾಕಾವ್ಯಗಳು ಯುದ್ಧದ ವರ್ಣನೆಯಿಂದಲೇ ರೋಮಾಂಚನಗೊಳಿಸುತ್ತವೆ. ಹೋರಾಟದಿಂದಲೇ ಬದುಕು ಎಂಬುದು ಸರ್ವವಿಧಿತ ಸತ್ಯ ಎಂದು ಜಿಲ್ಲಾಧಿಕಾರಿ ದಯಾನಂದ್‌ ತಿಳಿಸಿದರು.

Vijaya Karnataka 12 May 2019, 5:00 am
ಆನಂದಪುರಂ: ಮಾನವನ ಜನಾಂಗದ ವಿಕಾಸದ ಆರಂಭದಿಂದಲೂ ಹೋರಾಟ ಮತ್ತು ಸ್ವ ರಕ್ಷ ಣೆ ಕಂಡು ಬರುತ್ತದೆ. ಇತಿಹಾಸ, ಪುರಾಣ, ಮಹಾಕಾವ್ಯಗಳು ಯುದ್ಧದ ವರ್ಣನೆಯಿಂದಲೇ ರೋಮಾಂಚನಗೊಳಿಸುತ್ತವೆ. ಹೋರಾಟದಿಂದಲೇ ಬದುಕು ಎಂಬುದು ಸರ್ವವಿಧಿತ ಸತ್ಯ ಎಂದು ಜಿಲ್ಲಾಧಿಕಾರಿ ದಯಾನಂದ್‌ ತಿಳಿಸಿದರು.
Vijaya Karnataka Web SMR-8ANPP1


ಅವರು ಸೋಮವಾರ ಮುರುಘಾಮಠದ ಆವರಣದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಏರ್ಪಡಿಸಿದ್ದ ಸೈನಿಕ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸೈನಿಕರು ಸದಾ ದೇಶಸೇವೆ ಮತ್ತು ದೇಶ ರಕ್ಷ ಣೆಯಲ್ಲೇ ಬದುಕು ಸವೆಸುತ್ತಾರೆ. ಸೈನಿಕರು ಉತ್ತಮವಾಗಿ ಕಾರ್ಯ ನಿರ್ವಹಿಸಿದರೆ ದೇಶದೊಳಗಿರುವ ಸಾಮಾನ್ಯರು ನೆಮ್ಮದಿಯ ಬದುಕು ನಡೆಸಲು ಸಾಧ್ಯ. ಮಾಜಿ ಸೈನಿಕ ಕಿಶೋರ್‌ ಕುಮಾರ್‌ ಅವರು ಸೈನಿಕ ಹುದ್ದೆ ಸೇರುವ ಯುವಕರಿಗೆ ಗುಣಾತ್ಮಕ ತರಬೇತಿ ಹಮ್ಮಿಕೊಂಡಿರುವುದು ಜಿಲ್ಲೆಗೆ ಹೆಮ್ಮೆ ಸಂಗತಿ ಎಂದರು.

ವಿವಿಧ ಸಂಘಗಳ ನೆರವಿನೊಂದಿಗೆ ಈ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಮಲೆನಾಡು ಭಾಗದ ಯುವಕರು ಅಧಿಕ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವಂತೆ ಸಿದ್ಧಗೊಳಿಸುವುದು ಈ ತರಬೇತಿಯ ಉದ್ದೇಶ ಎಂದು ಸಂಘಟಕ ಕಿಶೋರ್‌ಕುಮಾರ್‌ ತಿಳಿಸಿದರು. ಈ ಸಂದರ್ಭ ಸಾಗರದ ಹಿರಿಯ ಸಾಹಿತಿ ನಾ.ಡಿಸೋಜ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಕಣ್ಣೂರು, ಶಿಕಾರಿಪುರದ ಸಾಧನಾ ಅಕಾಡೆಮಿ ಸಂಚಾಲಕ ಮಂಜುನಾಥ, 20 ಎನ್‌ಸಿಸಿ ಬೆಟಾಲಿಯನ್‌ ಮುಖ್ಯಸ್ಥ ಶಿವಮೊಗ್ಗದ ಎಸ್‌.ಶಶಿಧರ್‌, ಕುಮೋವ್‌ ರೆಜಿಮೆಂಟ್‌ ವೈದ್ಯಾಧಿಕಾರಿ ಕ್ಯಾಪ್ಟನ್‌ ಡಾ.ಕಿರಣ, ಶಿವಮೊಗ್ಗ ಜಿಲ್ಲಾ ಸೈನಿಕ್‌ ವೆಲ್‌ಫೇರ್‌ನ ಉಪ ನಿರ್ದೇಶಕ ಚಂದ್ರಪ್ಪ ಇತರರು ಇದ್ದರು.

--------
ಹೆತ್ತ ತಾಯಿ ಮತ್ತು ಜನ್ಮ ಭೂಮಿ ಅತಿ ಶ್ರೇಷ್ಠ. ಜನ್ಮ ಭೂಮಿಯನ್ನು ಅತ್ಯಂತ ಗೌರವದಿಂದ ಕಾಣುವ ಗುಣ ಸೈನಿಕರಲ್ಲಿ ಇರುತ್ತದೆ. ಶಿವಮೊಗ್ಗ ಜಿಲ್ಲೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವಂತಾಗಲಿ. ದೇಶಸೇವೆಯಲ್ಲಿ ತಾಯಿ ಸೇವೆ ಕಾಣುವುದೇ ಧನ್ಯತಾ ಭಾವ.
- ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ