ಆ್ಯಪ್ನಗರ

ಶಿವಮೊಗ್ಗದಲ್ಲಿ ಮಧ್ಯರಾತ್ರಿ ಭೂಕಂಪದ ಅನುಭವ: ಬೆಚ್ಚಿ ಬೀದಿಗೆ ಬಂದ ಜನ!

ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಗುರವಾರ ರಾತ್ರಿ 10.35 ಕ್ಕೆ ಭಯಂಕರ ಸದ್ದು ಕೇಳಿಸಿದ್ದು, ಭೂಕಂಪದ ಅನುಭವವಾಗಿದೆ. ಜನ ಗಾಬರಿಗೊಂಡಿದ್ದು, ಮಧ್ಯರಾತ್ರಿಯಲ್ಲೇ ಮನೆಯ ಹೊರಗಡೆ ಬಂದು ನಿಂತಿದ್ದಾರೆ.

Vijaya Karnataka Web 21 Jan 2021, 11:27 pm
ಶಿವಮೊಗ್ಗ: ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಗುರವಾರ ರಾತ್ರಿ 10.35 ಕ್ಕೆ ಭಯಂಕರ ಸದ್ದು ಕೇಳಿಸಿದ್ದು, ಭೂಕಂಪದ ಅನುಭವವಾಗಿದೆ. ಜನ ಗಾಬರಿಗೊಂಡಿದ್ದು, ಮಧ್ಯರಾತ್ರಿಯಲ್ಲೇ ಮನೆಯ ಹೊರಗಡೆ ಬಂದು ನಿಂತಿದ್ದಾರೆ.
Vijaya Karnataka Web shivamogga earthquake


ಶಿವಮೊಗ್ಗದೊಂದಿಗೆ ಗಡಿ ಹಂಚಿಕೊಂಡಿರುವ ನೆರೆಯ ಜಿಲ್ಲೆಗಳಲ್ಲಿ ಕೂಡ ಭಾರೀ ಸದ್ದು ಕೇಳಿಬಂದಿದೆ. ಹಲವೆಡೆ ಕಿಟಕಿ ಗಾಜುಗಳು ಒಡೆದಿದ್ದು, ಮನೆಯೊಳಗೆ ಪಾತ್ರೆಗಳು ಉರುಳಿ ಬಿದ್ದಿವೆ. ಶಿವಮೊಗ್ಗದ ಸಿಮ್ಸ್ ಕಾಲೇಜಿನಲ್ಲಿ ಭೂಮಿ ನಡುಗಿ, ಸ್ಫೋಟದ ಶಬ್ದಕ್ಕೆ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ.

ಚಿಕ್ಕಮಗಳೂರಲ್ಲೂ ಕಂಪನ:
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ನರಸಿಂಹರಾಜಪುರ ತಾಲೂಕಿನಲ್ಲಿ ಕೂಡ ಸ್ಫೋಟದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಕೊಪ್ಪ, ಎನ್.ಆರ್. ಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ಭಾರೀ ಸದ್ದು ಕೇಳಿಬಂದಿದೆ. ಸದ್ದು ಕೇಳುತ್ತಲೇ ಬೆಚ್ಚಿಬಿದ್ದ ಜನ ಮನೆಯಿಂದ ಹೊರಬಂದಿದ್ದಾರೆ. ರಾತ್ರಿ 10:20 ರಿಂದ 10:25 ಗಂಟೆ ಮಧ್ಯೆ ಎರಡು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಮಿ ಒಳಗೆ ಸ್ಫೋಟಿಸಿದ ಸದ್ದು ಕೇಳಿ ಜನತೆ ಬೆಚ್ಚಿಬಿದ್ದಿದ್ದಾರೆ.

ರಾಜಸ್ಥಾನದಲ್ಲಿ ತಡರಾತ್ರಿ 4.2 ತೀವ್ರತೆಯ ಭೂಕಂಪ..! ದಿಲ್ಲಿಯಲ್ಲೂ ಕಂಪಿಸಿದ ಭೂಮಿ..!

2019ರ ಫೆಬ್ರವರಿಯಲ್ಲಿ ಕೂಡ ಶಿವಮೊಗ್ಗದಲ್ಲಿ ಭೂಕಂಪನದ ಅನುಭವವಾಗಿತ್ತು. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ವರಾಹಿ ಜಲ ವಿದ್ಯುತ್‌ ಯೋಜನಾ ಪ್ರದೇಶದ ಅಸುಪಾಸಿನ ಗ್ರಾಮಗಳಲ್ಲಿ ಲಘು ಭೂಕಂಪನವಾಗಿತ್ತು. ಆಗಲೂ ಕೂಡ ಜನರು ಹೆದರಿ ರಸ್ತೆಗೆ ಬಂದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ