ಆ್ಯಪ್ನಗರ

ಜನ ಮತ್ತೂ ಸೇವೆ ಮಾಡು ಎಂದಿದ್ದಾರೆ...

ಇಲ್ಲಿನ 29ನೇ ವಾರ್ಡ್‌ನಲ್ಲಿ ಜಯಶಾಲಿಯಾದ ಎ. ಉಮೇಶ ವರಸೆ ವಿಭಿನ್ನವಾಗಿತ್ತು. ಚುನಾವಣೆ ದಿನ ಸಹ ಏಕಾಂಗಿಯಾಗಿ ಕಾಣಿಸಿಕೊಂಡಿದ್ದ ಉಮೇಶ ಸೋಮವಾರ ಸಹ ಫಲಿತಾಂಶ ಪ್ರಕಟವಾದ ನಂತರ ಕಾಂಗ್ರೆಸ್‌ ಪಕ್ಷ ದ ವಿಜೇತರ ಮೆರವಣಿಗೆಯಲ್ಲಿ ಭಾಗವಹಿಸಿದೇ, ಏಕಾಂಗಿಯಾಗಿ ದೂರ ನಿಂತಿದ್ದರು.

Vijaya Karnataka 4 Jun 2019, 5:00 am
ಸಾಗರ: ಇಲ್ಲಿನ 29ನೇ ವಾರ್ಡ್‌ನಲ್ಲಿ ಜಯಶಾಲಿಯಾದ ಎ. ಉಮೇಶ ವರಸೆ ವಿಭಿನ್ನವಾಗಿತ್ತು. ಚುನಾವಣೆ ದಿನ ಸಹ ಏಕಾಂಗಿಯಾಗಿ ಕಾಣಿಸಿಕೊಂಡಿದ್ದ ಉಮೇಶ ಸೋಮವಾರ ಸಹ ಫಲಿತಾಂಶ ಪ್ರಕಟವಾದ ನಂತರ ಕಾಂಗ್ರೆಸ್‌ ಪಕ್ಷ ದ ವಿಜೇತರ ಮೆರವಣಿಗೆಯಲ್ಲಿ ಭಾಗವಹಿಸಿದೇ, ಏಕಾಂಗಿಯಾಗಿ ದೂರ ನಿಂತಿದ್ದರು.
Vijaya Karnataka Web SMR-03sgr34

ಉಮೇಶ್‌ ಏಕಾಂಗಿಯಾಗಿ ಒಂದೆಡೆ ತಣ್ಣಗೆ ನಿಂತಿದ್ದರೆ, ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಕುಂಜಾಲಿ ಆವರೇ ಹೆಚ್ಚು ಹಿಂಬಾಲಕರಿಂದ ಸುತ್ತುವರಿದಿದ್ದರು. ಆದರೆ ಫಲಿತಾಂಶ ಬಂದಾಗ ಅಚ್ಚರಿ ಕಾದಿತ್ತು. ವಿಜೇತ ಉಮೇಶ್‌ 215 ಮತ ಪಡೆದಿದ್ದರೆ ಅವರ ನಿಕಟ ಪ್ರತಿಸ್ಪರ್ಧಿ ಕುಂಜಾಲಿ 157 ಮತಗಳನ್ನಷ್ಟೇ ಪಡೆದಿದ್ದರು.

ಕಾಂಗ್ರೆಸ್‌ ಮತ್ತು ಬಿಜೆಪಿ ಬಂಡಾಯ ಸೇರಿದಂತೆ ಒಟ್ಟು 7 ಜನರಿದ್ದ ಕಣದಲ್ಲಿ ಉಮೇಶ ವಿಜೇತರಾಗಿದ್ದಾರೆ. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಜನರಿಗೆ ಸೇವೆ ನೀಡಿದ್ದೆ. ಸೇವೆ ಬೇಕಾದರೆ ನನ್ನನ್ನ ಆಯ್ಕೆ ಮಾಡುತ್ತಾರೆ ಎಂಬ ನಂಬಿಕೆ ನನ್ನದು. ವಾರ್ಡ್‌ ವ್ಯಾಪ್ತಿ ಖುದ್ದು ನಿಂತು ಕೆಲಸ ಮಾಡಿಸಿದ್ದೇನೆ. ಚುನಾವಣೆಗೆ ಹೆಚ್ಚು ಹಣ ಖರ್ಚು ಮಾಡಲೂ ಹೋಗಿಲ್ಲ. ಕರ ಪತ್ರದ ಸಂಬಂಧ 2000 ರೂ. ವೆಚ್ಚವಾಗಿದೆ. ನನ್ನದೇ ರೀತಿಯಲ್ಲಿ ಬೆಂಬಲಿಗರ ಶ್ರಮ ಬಳಸಿಕೊಂಡಿದ್ದೇನೆ. ಗುಂಪು ಕಟ್ಟಿಕೊಂಡು ಓಡಾಡುವುದು ನನಗೆ ಇಷ್ಟವಿಲ್ಲ. ವಾರ್ಡ್‌ ಜನ ಮತ್ತೂ ಸೇವೆ ಮಾಡು ಎಂದು ಅವಕಾಶ ನೀಡಿದ್ದಾರೆ ಎಂದರು.

ಪಕ್ಷ ದ ಪ್ರಮುಖರಾದ ಐ.ಎನ್‌.ಸುರೇಶ್‌ ಬಾಬು, ಸುಂದರ್‌ಸಿಂಗ್‌ ಮೊದಲಾದವರ ಸೋಲು ಬೇಸರ ತಂದಿದೆ. ನಗರಸಭೆಯ ಸಾಮಾನ್ಯ ಸಭೆಗಳಲ್ಲಿ ಜನಪರವಾಗಿ ಮಾತನಾಡುವ ಹಿರಿಯರ ಕೊರತೆ ತುಂಬಲು ನಾನು ಪ್ರಯತ್ನಿಸುತ್ತೇನೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ