ಆ್ಯಪ್ನಗರ

‘ಸಾಹಿತ್ಯ ಅಧ್ಯಯನದಿಂದ ಪರಿಪೂರ್ಣ ವ್ಯಕ್ತಿತ್ವ’

ಸಾಹಿತ್ಯದ ರಚನೆ ಮತ್ತು ಅಧ್ಯಯನದಿಂದ ವ್ಯಕ್ತಿ ಪರಿಪೂರ್ಣನಾಗಲು ಸಾಧ್ಯ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ.ಧನಂಜಯ ಹೇಳಿದರು.

Vijaya Karnataka 29 Nov 2018, 5:00 am
ಭದ್ರಾವತಿ: ಸಾಹಿತ್ಯದ ರಚನೆ ಮತ್ತು ಅಧ್ಯಯನದಿಂದ ವ್ಯಕ್ತಿ ಪರಿಪೂರ್ಣನಾಗಲು ಸಾಧ್ಯ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ.ಧನಂಜಯ ಹೇಳಿದರು.
Vijaya Karnataka Web SMR-28BDVT1


ಅವರು ಬುಧವಾರ ಹೊಸಮನೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿದ್ದ ದಿ.ಕೆ.ಬಿ.ಡಿ.ಬೀರಯ್ಯ ಅವರ ನೆನಪಿನ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದತ್ತಿ ಉಪನ್ಯಾಸದಿಂದ ಸಾಹಿತ್ಯದ ಬೆಳವಣಿಗೆ ಹೆಚ್ಚು ಪ್ರಚಲಿತವಾಗಲಿದೆ. ಯುವ ಜನತೆ ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳುವ ಅಗತ್ಯವಿದೆ. ಜತೆಗೆ ಇಂದಿನ ವಿದ್ಯಾರ್ಥಿಗಳು ಪತ್ರಿಕೆ ಹಾಗೂ ಸಾಹಿತ್ಯ ಓದುವ ಆಸಕ್ತಿ ಬೆಳೆಸಿಕೊಳ್ಳಬೇಕು. ಸಾಹಿತ್ಯ ಮತ್ತು ಸಮಾಜವನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ರಾಜಕೀಯ ಆಶಯಗಳು ಸಾಹಿತ್ಯದ ಹಿನ್ನೆಲೆಯಿಂದ ಪ್ರಕಟವಾಗುವಂತಿರಬೇಕೆಂದರು.

ನ್ಯೂಟೌನ್‌ ಸರಕಾರಿ ಸರ್‌ಎಂವಿ ಕಾಲೇಜಿನ ಉಪನ್ಯಾಸಕಿ ಡಾ.ಶೈಲಜಾ ಹೊಸೆಳ್ಳರ 'ಸಾಹಿತ್ಯ ಮತ್ತು ಧರ್ಮ' ಕುರಿತು ಉಪನ್ಯಾಸ ನೀಡಿ, ಭಾಷೆ ಎಂಬುದು ಇರದಿದ್ದಲ್ಲಿ ವಾಣಿಜ್ಯ ವ್ಯವಹಾರ ಕಾಣಲು ಸಾಧ್ಯವಿರಲಿಲ್ಲ. ಧರ್ಮ ಸಾಹಿತ್ಯವನ್ನು ಒಂದು ಮಾಧ್ಯಮವಾಗಿ ಮಾಡಿಕೊಂಡು ತನ್ನ ನೆಲೆಗಟ್ಟನ್ನು ಭದ್ರಪಡಿಸಿಕೊಂಡಿದೆ. ಸಾಹಿತ್ಯದ ಮೂಲಕ ಧರ್ಮದ ಪ್ರಚಾರ ನಡೆಯುತ್ತಿದೆ. ಸಾಹಿತ್ಯ, ಕಲೆ ನಮ್ಮ ಮನಸ್ಸಿಗೆ ಖುಷಿ ನೀಡುವಷ್ಟು ಇತಿಹಾಸ ನೀಡಲಾರದು ಎಂದರು.

ತಾಲೂಕು ಅಧ್ಯಕ್ಷ ಬೇಲಿ ಮಲ್ಲೂರು ಎಂ.ನಾಗಪ್ಪ ಅಧ್ಯಕ್ಷ ತೆ ವಹಿಸಿದ್ದರು. ಗೌರವಾಧ್ಯಕ್ಷ ಅಪರಂಜಿ ಶಿವರಾಜ್‌ ಆಶಯ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಎಚ್‌.ಎನ್‌.ಮಹಾರುದ್ರ, ದತ್ತಿ ದಾನಿಗಳಾದ ಕೆ.ಬಿ.ಡಿ ಪ್ರಭಾಕರ್‌ ಬೀರಯ್ಯ, ಉಪನ್ಯಾಸಕ ಡಾ.ಬಿ.ಬಸವರಾಜಪ್ಪ, ಕತ್ತಲಗೆರೆ ತಿಮ್ಮಪ್ಪ ಇತರರು ಇದ್ದರು. ವಿದ್ಯಾರ್ಥಿ ದಿವ್ಯ ಪ್ರಾರ್ಥಿಸಿ, ಬಿ.ಅಲೀಮ ಸ್ವಾಗತಿಸಿದರು. ಉಪನ್ಯಾಸಕರಾದ ಶೃತಿ ಹಾಗೂ ರೂಪ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ