ಆ್ಯಪ್ನಗರ

ಸಾಂಸ್ಕೃತಿಕ ಕಾರ‍್ಯಕ್ರಮಗಳಿಂದ ಊರಿಗೆ ಹೆಗ್ಗಳಿಕೆ

ಒಂದು ಊರಿನಲ್ಲಿ ಆಗುವ ವೈವಿಧ್ಯಮಯ ಸಾಂಸ್ಕೃತಿಕ ಕಾರ‍್ಯಕ್ರಮಗಳು ಆ ಊರಿನ ಹೆಗ್ಗಳಿಕೆಗೆ ಕಾರಣವಾಗುತ್ತವೆ ಎಂದು ಶಿವಮೊಗ್ಗ ಜಿಲ್ಲಾ ಸಹಕಾರಿ ಬ್ಯಾಂಕ್‌ ನಿರ್ದೇಶಕ ಎಚ್‌.ಕೆ.ವೆಂಕಟೇಶ ಹೇಳಿದರು.

Vijaya Karnataka 27 May 2019, 5:00 am
ಸಾಗರ : ಒಂದು ಊರಿನಲ್ಲಿ ಆಗುವ ವೈವಿಧ್ಯಮಯ ಸಾಂಸ್ಕೃತಿಕ ಕಾರ‍್ಯಕ್ರಮಗಳು ಆ ಊರಿನ ಹೆಗ್ಗಳಿಕೆಗೆ ಕಾರಣವಾಗುತ್ತವೆ ಎಂದು ಶಿವಮೊಗ್ಗ ಜಿಲ್ಲಾ ಸಹಕಾರಿ ಬ್ಯಾಂಕ್‌ ನಿರ್ದೇಶಕ ಎಚ್‌.ಕೆ.ವೆಂಕಟೇಶ ಹೇಳಿದರು.
Vijaya Karnataka Web place shining with cultural programme
ಸಾಂಸ್ಕೃತಿಕ ಕಾರ‍್ಯಕ್ರಮಗಳಿಂದ ಊರಿಗೆ ಹೆಗ್ಗಳಿಕೆ


ತಾಲೂಕಿನ ಬೆಳೆಯೂರಿನಲ್ಲಿ ಶ್ರೀ ಮಹಾಗಣಪತಿ ಯಕ್ಷ ಗಾನ ಟ್ರಸ್ಟ್‌ ಮತ್ತು ಯಕ್ಷ ಗಾನ ಅಭಿಮಾನಿ ಬಳಗ ಸಾಗರ ಪ್ರಾಂತ್ಯ ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ 19ನೇ ವರ್ಷದ ಬಯಲಾಟ ಪ್ರದರ್ಶನ ಮತ್ತು ಕಲಾವಿದರ ಸನ್ಮಾನ ಕಾರ‍್ಯಕ್ರಮದ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು.

ಊರಿನವರ ಸಹಕಾರ, ದಾನಿಗಳ ಪ್ರೋತ್ಸಾಹ, ಪ್ರಸಿದ್ಧ ಕಲಾವಿದರಿಂದ ಕಲಾಪ್ರದರ್ಶನ ಇದ್ದಾಗ ಕಾರ‍್ಯಕ್ರಮ ಯಶಸ್ವಿಯಾಗುತ್ತದೆ. ಬೆಳೆಯೂರಿನಲ್ಲಿ ನಡೆಯುವ ಮೇ ತಿಂಗಳ ಪ್ರದರ್ಶನ ಯಕ್ಷ ಗಾನ ಆಸಕ್ತರಲ್ಲಿ ಸಾಕಷ್ಟು ಹೆಸರು ಮಾಡಿದೆ. ಈ ಹಿಂದೆ ಒಳ್ಳೆಯ ಪ್ರದರ್ಶನಗಳು ಆಗಿವೆ. ಹಾಗಾಗಿ ಪ್ರೇಕ್ಷ ಕರು ಸಹ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿನ ಪ್ರದರ್ಶನಕ್ಕೆ ಬರುತ್ತಾರೆ. ಯಕ್ಷ ಗಾನ ಮೇಳಗಳ ಪ್ರದರ್ಶನದ ತಿರುಗಾಟ ಮುಗಿದು, ಮಳೆಗಾಲಕ್ಕೆ ಮುನ್ನ ನಡೆಯುವ ಬೆಳೆಯೂರಿನ ಯಕ್ಷ ಗಾನ ಪ್ರದರ್ಶನ ದ ಸಂಘಟನೆ ಶ್ಲಾಘನೀಯ ಎಂದರು.

ಸನ್ಮಾನ ಸ್ವೀಕರಿಸಿದ ಬಟಗುತಿಟ್ಟಿನ ಪ್ರಸಿದ್ಧ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಬಡಗುತಿಟ್ಟಿನ ಪೋಷಕ ವೇಷಧಾರಿ ಮಹಾಬಲೇಶ್ವರ ಗೌಡ ಅವರನ್ನು ಸನ್ಮಾನಿಸಲಾಯಿತು. ಗಾಡಿಗೆರೆ ಶ್ರೀನಿವಾಸ ಭಟ್ಟ, ಸುಧೀರ ಭಟ್‌ ಮಡಿಕೇರಿ ಉಪಸ್ಥಿತರಿದ್ದರು. ಬೆಳೆಯೂರು ಮೇಳಕ್ಕೆ ಸಿಂಹಾಸನವನ್ನು ಸಿದ್ಧಪಡಿಸಿ, ಕೊಡುಗೆಯಾಗಿ ನೀಡಿದ ಮಾಸೂರಿನ ಗಣೇಶ ಅಚಾರಿಯವರನ್ನು ಗೌರವಿಸಲಾಯಿತು. ಲಕ್ಷ್ಮೀನಾರಾಯಣ ಸ್ವಾಗತಿಸಿದರು. ಬಿ.ಟಿ.ಅರುಣಾಚಲ ವಂದಿಸಿದರು. ವೆಂಕಟೇಶ್‌ ನಿರೂಪಿಸಿದರು. ಬೈಸೆ ಶ್ರೀಪಾದ, ಬೆಳೆಯೂರು ರಂಗನಾಥ, ಗೋಪಿನಾಥ, ರಾಘವೇಂದ್ರ ಮುಂತಾದವರು ಹಾಜರಿದ್ದರು. ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಪಾಂಚಜನ್ಯ, ಕಾರ್ತವೀರ‍್ಯ, ಜ್ವಾಲಾ ಪ್ರತಾಪ ಯಕ್ಷ ಗಾನ ಪ್ರದರ್ಶನ ನಡೆಯಿತು. ರಾಘವೇಂದ್ರ ಜನ್ಞಾಲೆ, ಪರಮೇಶ್ವರ ಭಂಡಾರಿ, ಚಂದ್ರಕಾಂತ, ರಾಮಕೃಷ್ಣ, ಸುನೀಲ್‌, ಗಣೇಶ, ಶಿವಾನಂದ ಕೋಟ ಹಿಮ್ಮೇಳದಲ್ಲಿದ್ದರು. ಬಳ್ಕೂರು ಕೃಷ್ಣಯಾಜಿ, ಶಶಿಕಾಂತ ಶೆಟ್ಟಿ, ವಿದ್ರ್ಯಾಧರ ಜಲವಳ್ಳಿ, ನೀಲಕೋಡು ಶಂಕರ, ಮಂಕಿ ಈಶ್ವರ್‌, ಪ್ರಸನ್ನ ಶೆಟ್ಟಿಗಾರ್‌, ಕಾರ್ತಿಕ ಚಿಟ್ಟಾಣಿ, ಷಣ್ಮುಖ, ಶ್ರೀಧರ, ಸುಧೀರ ಉಪ್ಪೂರು, ರವೀಂದ್ರ ಮುಂತಾದ ಕಲಾವಿದರು ಭಾಗವಹಿಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ