ಆ್ಯಪ್ನಗರ

ವಿವಾಹ ವಾರ್ಷಿಕೋತ್ಸವಕ್ಕೆ ಗಿಡ ನೆಟ್ಟರು

ಜನರು ಜಾಗೃತರಾಗಿ ಕಾಡಿನ ನಾಶ ತಡೆಯಬೇಕು. ಕಾಡು ಉಳಿಯದಿದ್ದರೆ ಅಪಾಯ ತಪ್ಪಿದ್ದಲ್ಲ. ನೆಡುವ ಪ್ರತಿಯೊಂದು ಸಸಿ ಮುಂದಿನ ಸ್ವಚ್ಛ, ಸುಂದರ ಪರಿಸರ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಕೆ.ಅಮರನಾರಾಯಣ ಅಭಿಪ್ರಾಯಪಟ್ಟರು.

Vijaya Karnataka 24 May 2019, 5:00 am
ತೀರ್ಥಹಳ್ಳಿ: ಜನರು ಜಾಗೃತರಾಗಿ ಕಾಡಿನ ನಾಶ ತಡೆಯಬೇಕು. ಕಾಡು ಉಳಿಯದಿದ್ದರೆ ಅಪಾಯ ತಪ್ಪಿದ್ದಲ್ಲ. ನೆಡುವ ಪ್ರತಿಯೊಂದು ಸಸಿ ಮುಂದಿನ ಸ್ವಚ್ಛ, ಸುಂದರ ಪರಿಸರ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಕೆ.ಅಮರನಾರಾಯಣ ಅಭಿಪ್ರಾಯಪಟ್ಟರು.
Vijaya Karnataka Web SMR-22TTH4


ಬುಧವಾರ ತಾಲೂಕಿನ ಗುಡ್ಡೇಕೇರಿಯಲ್ಲಿ ಅವರ ದಾಂಪತ್ಯ ಜೀವನದ 36ನೇ ವಾರ್ಷಿಕೋತ್ಸವ ನೆನಪಿಗಾಗಿ ಪರಿಸರ ಜಾಗೃತಿ ಕಾರ‍್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.

ಹಲವಾರು ಕಾರಣಗಳಿಂದ ಮಲೆನಾಡಿನ ಸುಂದರ ಪರಿಸರದಲ್ಲಿ ಸಸ್ಯ ಪ್ರಭೇದಗಳು ವಿರಳವಾಗುತ್ತಿವೆ. ಹೂವಿನ ಸಸಿಗಳು ಕ್ಷೀಣಿಸುತ್ತಿರುವುದರಿಂದ ಜೇನಿನ ಸಂತತಿ ಕಡಿಮೆ ಆಗುತ್ತಿದೆ. ಪರಾಗ ಸ್ಪರ್ಶದ ಕೊರತೆಯಿಂದ ಸಸ್ಯ ಸಂಪತ್ತು ವೃದ್ಧಿಸುತ್ತಿಲ್ಲ. ಇಂತಹ ಸಂದರ್ಭ ಜನ್ಮದಿನ, ವಿವಾಹ ವಾರ್ಷಿಕೋತ್ಸವ ಸಮಾರಂಭಗಳನ್ನು ಸಸಿ ನೆಡಲು ನೆಪವಾಗಿ ಬಳಸಿಕೊಳ್ಳುವುದು ಉಪಯುಕ್ತ. ಕೋಟಿ ನಾಟಿ ಕಾರ‍್ಯಕ್ರಮದಡಿ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ವನ ನಿರ್ಮಾಣಕ್ಕೆ ಚಿಂತಿಸಲಾಗಿದೆ ಎಂದರು.

ಚಿಂತಕ ಕಡಿದಾಳ್‌ ದಯಾನಂದ್‌, ಎಪಿಎಂಸಿ ಅಧ್ಯಕ್ಷ ಹಸಿರುಮನೆ ಮಹಾಬಲೇಶ್‌, ಹೊನ್ನೇತಾಳು ಗ್ರಾ.ಪಂ.ಸದಸ್ಯ ಕುಂದಾದ್ರಿ ರಾಘವೇಂದ್ರ, ಆಗುಂಬೆ ಉಪ ವಲಯ ಅರಣ್ಯಾಧಿಕಾರಿ ರಾಜೇಂದ್ರ, ವನಪಾಲಕ ಅಣ್ಣಯ್ಯ, ವಕೀಲ ಸತ್ಯಪಾಲ ಹೆಗ್ಡೆ, ಉರುಗ ತಜ್ಞ ಗೌರಿಶಂಕರ್‌, ಹಿಂಗಾರು ಹೋಂ ಸ್ಟೇ ಮಾಲೀಕರಾದ ಜಯರಾಮ ಹೆಗ್ಡೆ, ಶಶಾಂಕ್‌ ಹೆಗ್ಡೆ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ