ಆ್ಯಪ್ನಗರ

ಪ್ಲಾಸ್ಟಿಕ್‌ ಮುಕ್ತಕ್ಕೆ ಸ್ವಸಹಾಯ ಸಂಘ ಸಹಕಾರ ಅಗತ್ಯ

ಸ್ವಚ್ಛ ನಗರವನ್ನಾಗಿಸಲು ಪಣತೊಡಲಾಗಿದೆ. ಇದಕ್ಕೆ ಮಹಿಳಾ ಸ್ವಸಹಾಯ ಸಂಘಗಳ ಸಹಕಾರ ಅಗತ್ಯ ಎಂದು ಪೌರಾಯುಕ್ತ ಮನೋಹರ್‌ ಹೇಳಿದರು.

Vijaya Karnataka 31 Aug 2019, 5:00 am
ಭದ್ರಾವತಿ: ಸ್ವಚ್ಛ ನಗರವನ್ನಾಗಿಸಲು ಪಣತೊಡಲಾಗಿದೆ. ಇದಕ್ಕೆ ಮಹಿಳಾ ಸ್ವಸಹಾಯ ಸಂಘಗಳ ಸಹಕಾರ ಅಗತ್ಯ ಎಂದು ಪೌರಾಯುಕ್ತ ಮನೋಹರ್‌ ಹೇಳಿದರು.
Vijaya Karnataka Web plastic free self help organizations need cooperation
ಪ್ಲಾಸ್ಟಿಕ್‌ ಮುಕ್ತಕ್ಕೆ ಸ್ವಸಹಾಯ ಸಂಘ ಸಹಕಾರ ಅಗತ್ಯ


ಜನ್ನಾಪುರ ಬಂಟರ ಭವನದಲ್ಲಿನಗರಸಭೆ, ಡೇನಲ್ಮ್‌ ಯೋಜನೆ ಮತ್ತು ಹೊಸ ಸಿದ್ದಾಪುರ ಸಹ್ಯಾದ್ರಿ ಪ್ರದೇಶ ಮಟ್ಟದ ಒಕ್ಕೂಟ ಆಶ್ರಯದಲ್ಲಿನ್ಯೂಟೌನ್‌ ಭಾಗದ ಮಹಿಳಾ ಸ್ವಸಹಾಯ ಸಂಘಗಳಿಗೆ ಏರ್ಪಡಿಸಿದ್ದ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶವನ್ನು ಪ್ಲಾಸ್ಟಿಕ್‌ ಮುಕ್ತ ರಾಷ್ಟ್ರವಾಗಿಸಲು ಅಕ್ಟೋಬರ್‌ 2ರಿಂದ ಕೇಂದ್ರ ಸರಕಾರ ಯೋಜನೆ ರೂಪಿಸಿದೆ. ನಗರವನ್ನು ಪ್ಲಾಸ್ಟಿಕ್‌ ಮುಕ್ತ ನಗರವಾಗಿಸಲು ಎಲ್ಲರೂ ಮುಂದಾಗಬೇಕೆಂದರು. ನಗರಸಭೆ ಕಂದಾಯಾಧಿಕಾರಿ ರಾಜ್‌ಕುಮಾರ್‌ ಮಾತನಾಡಿ, ಮನೆಗಳಲ್ಲೇ ಹಸಿ ಹಾಗೂ ಒಣ ಕಸ ಬೇರ್ಪಡಿಸಿ ಬಾಗಿಲಿಗೆ ಬರುವ ನಗರಸಭೆ ಕಸದ ಗಾಡಿಗೆ ಹಾಕಬೇಕು. ಕಸದ ಗಾಡಿಗೆ ತ್ಯಾಜ್ಯ ನೀಡದಿರುವವರ ಬಗ್ಗೆ ಸ್ಥಳೀಯ ಮಹಿಳೆಯರು ನಗರಸಭೆ ಅಧಿಕಾರಿಗಳ ಗಮನಕ್ಕೆ ತರಬೇಕು. ಕಸವನ್ನು ಖಾಲಿ ಜಾಗದಲ್ಲಿಬಿಸಾಡದಂತೆ ಸಾರ್ವಜನಿಕರ ಮನವೊಲಿಸುವ ಪ್ರಯತ್ನ ಮೊದಲು ಮಹಿಳೆಯರಿಂದಲೇ ಆಗಬೇಕೆಂದರು. ನಲ್ಮ್‌ ಯೋಜನಾಧಿಕಾರಿ ಸುಹಾಸಿನಿ ನಗರಸಭೆ ಯೋಜನೆ ಕುರಿತು ಮಾಹಿತಿ ನೀಡಿದರು. ಜನ್ನಾಪುರ ಕಾರ್ಪೋರೇಷನ್‌ ಬ್ಯಾಂಕ್‌ ವ್ಯವಸ್ಥಾಪಕ ಪಳನಿರಾಜ್‌, ಒಕ್ಕೂಟದ ಮುಖಂಡರಾದ ಪ್ರತಿಮಾ, ರೂಪಾ ನಾಗರಾಜ್‌, ಶಕುಂತಲ, ಲಕ್ಷಿತ್ರ್ಮೕ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ