ಆ್ಯಪ್ನಗರ

ರಾಘವೇಶ್ವರ ಶ್ರೀಗಳನ್ನು ನೋಡಿದ ತಕ್ಷಣ ಶಂಕರಾಚಾರ್ಯರನ್ನು ನೋಡಿದಂತಾಯಿತು: ಮೋದಿ ಪತ್ನಿ ಜಶೋಧ ಬೆನ್

ಪ್ರಧಾನಿ ನರೇಂದ್ರ ಮೋದಿ ಪತ್ನಿ ಜಶೋಧಾ ಬೆನ್ ಭೇಟಿ ನೀಡಿದರು. ಗೋವರ್ಧನ ಗಿರಿಧಾರಿ ಗೋಪಾಲಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಮಠದ ಭಕ್ತರನ್ನು ಉದ್ದೇಶಿಸಿ, ಗುಜರಾತಿ ಭಾಷೆಯಲ್ಲಿ ಮಾತನಾಡಿದರು. ದೇವಸ್ಥಾನಕ್ಕೆ ರಜತ ಛತ್ರ ಸಮರ್ಪಣೆ ಮಾಡಿ ಹರಕೆ ಸಲ್ಲಿಸಿದರು.

Vijaya Karnataka Web 4 Mar 2020, 9:15 pm
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ರಾಮಚಂದ್ರಾಪುರ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಪತ್ನಿ ಜಶೋಧಾ ಬೆನ್ ಮೋದಿ ಬುಧವಾರ ಭೇಟಿ ನೀಡಿದರು.
Vijaya Karnataka Web ಜಶೋಧ ಬೆನ್‌, ರಾಘವೇಶ್ವರ ಶ್ರೀ
ಜಶೋಧ ಬೆನ್‌, ರಾಘವೇಶ್ವರ ಶ್ರೀ


ಗೋವರ್ಧನ ಗಿರಿಧಾರಿ ಗೋಪಾಲಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅವರನ್ನು ಮಠದ ಭಕ್ತಾದಿಗಳು ಆರತಿ ಬೆಳಗಿ ಸ್ವಾಗತಿಸಿದರು.

ಮಠದ ಭಕ್ತರನ್ನು ಉದ್ದೇಶಿಸಿ, ಗುಜರಾತಿ ಭಾಷೆಯಲ್ಲಿ ಮಾತನಾಡಿದರು. ದೇವಸ್ಥಾನಕ್ಕೆ ರಜತ ಛತ್ರ ಸಮರ್ಪಣೆ ಮಾಡಿ ಹರಕೆ ಸಲ್ಲಿಸಿದರು.

ರಾಘವೇಶ್ವರ ಶ್ರೀಗಳನ್ನು ನೋಡಿ ಶಂಕರಾಚಾರ್ಯರನ್ನೆ ನೋಡಿದಂತಾಯಿತು ಎಂದು ಜಶೋಧ ಬೆನ್‌ ತಿಳಿಸಿದರು.

ಭೇಟಿ ಬಚಾವೋ, ಭೇಟಿ ಪಡಾವೋ ಘೋಷಣೆ ಎಲ್ಲೆಡೆ ಆಚರಣೆಗೆ ಬರಬೇಕು ಎಂದು ಜಶೋಧ ಬೆನ್‌ ಸಲಹೆ ನೀಡಿದರು.

ನಂತರ ಶ್ರೀಗಳಿಂದ ಫಲ ಮಂತ್ರಾಕ್ಷತೆ ಪಡೆದರು. ಇವರ ಜತೆ ನರೇಂದ್ರ ಮೋದಿ ಅವರ ಸಹೋದರ ಅಶೋಕ ಮೋದಿ ಹಾಗೂ ಇತರ ಸಂಬಂಧಿಗಳು ಉಪಸ್ಥಿತರಿದ್ದರು.

ಜಶೋಧ ಬೆನ್‌ ಅವರು ಚಿತ್ರದುರ್ಗದ ನೀಲಕಂಠೇಶ್ವರ ದೇಗುಲ ಮತ್ತು ಶೃಂಗೇರಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ