ಆ್ಯಪ್ನಗರ

ಅಂಚೆ ಕಚೇರಿ ಪಾರ್ಸಲ್‌ ಕಳವು

ಭದ್ರಾವತಿ ತಾಲೂಕಿನ ಅರಳೀಹಳ್ಳಿ ಗ್ರಾಮದ ಅಂಚೆ ಕಚೇರಿಯಲ್ಲಿನ ಎರಡು ಪಾರ್ಸಲ್‌ಗಳನ್ನು ಕಳವು ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ.

Vijaya Karnataka 5 Oct 2019, 5:00 am
ಶಿವಮೊಗ್ಗ: ಭದ್ರಾವತಿ ತಾಲೂಕಿನ ಅರಳೀಹಳ್ಳಿ ಗ್ರಾಮದ ಅಂಚೆ ಕಚೇರಿಯಲ್ಲಿನ ಎರಡು ಪಾರ್ಸಲ್‌ಗಳನ್ನು ಕಳವು ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ.
Vijaya Karnataka Web post office parcel stolen
ಅಂಚೆ ಕಚೇರಿ ಪಾರ್ಸಲ್‌ ಕಳವು


ಕಚೇರಿಯ ಬೀಗ ಮುರಿದು 1,700 ಹಾಗೂ 1,500 ರೂ. ಮೌಲ್ಯದ ಎರಡು ಪಾರ್ಸಲ್‌ಗಳನ್ನು ಹರಿದು ಅದರೊಳಗಿದ್ದ ವಸ್ತುಗಳನ್ನು ತೆಗೆದುಕೊಂಡು ಹೋಗಲಾಗಿದೆ. ಬ್ರಾಂಚ್‌ ಪೋಸ್ಟ್‌ ಮಾಸ್ಟರ್‌ ಜಿ.ರಾಜು ದೂರು ನೀಡಿದ್ದು, ಭದ್ರಾವತಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

===
ತಲೆಮರೆಸಿಕೊಂಡಿದ್ದವರ ಬಂಧನ
ಶಿವಮೊಗ್ಗ: ತಲೆ ಮರೆಸಿಕೊಂಡಿದ್ದ ಪೋಕ್ಸೊ ಕಾಯಿದೆಯ ಆರೋಪಿಗಳನ್ನು ಬಂಧಿಸಿ ಒಂದನೇ ಹೆಚ್ಚುವರಿ ಜಿಲ್ಲಾಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ತಮಿಳುನಾಡಿನ ವೆಲ್ಲೂರು ಜಿಲ್ಲೆಯ ನಲ್ಲೂರು ಗ್ರಾಮದ ನಿವಾಸಿ ಜಯಕುಮಾರ್‌ (20) ಹಾಗೂ ಅದೇ ಗ್ರಾಮದ ಜಯಲಕ್ಷ್ಮಿ (40) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. 2018ರ ಮೇ 25ರಂದು ನಡೆದ ಪ್ರಕರಣದಲ್ಲಿಭಾಗಿಯಾಗಿದ್ದ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಇವರ ಪತ್ತೆಗೆ ಭದ್ರಾವತಿ ಗ್ರಾಮಾಂತರ ಪೊಲೀಸ್‌ ಠಾಣೆಯ ಪಿಎಸ್‌ಐ ನೇತೃತ್ವದಲ್ಲಿತಂಡ ರಚಿಸಲಾಗಿತ್ತು. ಅವರು ಪ್ರಕರಣ ಭೇದಿಸುವಲ್ಲಿಸಫಲರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ