ಆ್ಯಪ್ನಗರ

ಅನುಮಾನಗಳಿಗೆ ಶಂಕರರ ಭಾಷ್ಯದಲ್ಲಿ ಸಮರ್ಥ ಉತ್ತರ

ಶಂಕರರ ಭಾಷ್ಯದಲ್ಲಿ ನಮ್ಮೆಲ್ಲ ಅನುಮಾನಗಳಿಗೆ ಸಮರ್ಥವಾದ ಉತ್ತರಗಳಿವೆ. ದೇವರು, ಧರ್ಮ ಎಂದರೇನು ಎಂಬ ಜಿಜ್ಞಾಸೆಗಳಿಗೆ ಪರಿಹಾರವಿದೆ ಎಂದು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಶ್ರೀಗಳು ಹೇಳಿದರು.

Vijaya Karnataka 25 May 2019, 5:00 am
ಶಿವಮೊಗ್ಗ : ಶಂಕರರ ಭಾಷ್ಯದಲ್ಲಿ ನಮ್ಮೆಲ್ಲ ಅನುಮಾನಗಳಿಗೆ ಸಮರ್ಥವಾದ ಉತ್ತರಗಳಿವೆ. ದೇವರು, ಧರ್ಮ ಎಂದರೇನು ಎಂಬ ಜಿಜ್ಞಾಸೆಗಳಿಗೆ ಪರಿಹಾರವಿದೆ ಎಂದು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಶ್ರೀಗಳು ಹೇಳಿದರು.
Vijaya Karnataka Web SMG-2405-2-15-24SMG3


ಶ್ರೀ ಶಂಕರ ಜಯಂತಿ ಸಭಾ ವತಿಯಿಂದ ನಗರದ ಬಿ.ಬಿ.ರಸ್ತೆಯ ಲಕ್ಷ್ಮಿನಾರಾಯಣ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿ ಶತಮಾನೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕೇವಲ ದೊಡ್ಡ ಯಾಗದ ಮೂಲಕ ಸಮಸ್ಯೆ ಬಗೆಹರಿಯುವುದಿಲ್ಲ. ನಿತ್ಯಾನುಷ್ಠಾನ ಯಾರು ಮಾಡುವುದಿಲ್ಲವೋ ಅವರು ಯಾಗವನ್ನು ಮಾಡಿ ಪ್ರಯೋಜನವಿಲ್ಲ. ಆಡಂಬರದಿಂದ ಅನುಷ್ಠಾನ ಸಾಧ್ಯವಿಲ್ಲ ಎಂದು ತಿಳಿಸಿದರು.

ಉತ್ಸವ ಜನರ ಉತ್ಸವವಾಗಲಿ: ವ್ಯಕ್ತಿಯ ಮನಸ್ಸು ಹೇಗಿರಬೇಕು ಎಂಬುವುದನ್ನು ಶಂಕರರು ನೂರಾರು ವರ್ಷಗಳ ಹಿಂದೆಯೇ ಬೋಧಿಸಿದ್ದಾರೆ. ಸಾಕ್ಷಾತ್ಕಾರಕ್ಕೆ ನಿರ್ಮಲವಾದ ಭಕ್ತಿ ಬೆಳೆಸಿಕೊಳ್ಳಬೇಕಿದೆ. ಶಂಕರರ ಉತ್ಸವಗಳು ಜನರ ಉತ್ಸವವಾಗಿ ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು.

ಜಯಂತಿಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೇ ಅವರ ತತ್ವಗಳನ್ನು ಅನುಷ್ಠಾನ ಮಾಡುವ ಮತ್ತು ಆತ್ಮಾವಲೋಕನಕ್ಕೆ ಪೂರಕವಾಗಬೇಕು. ಶಿವಮೊಗ್ಗದ ಶಂಕರ ಜಯಂತಿ ಸಭಾ ಹಲವು ವರ್ಷಗಳಿಂದ ಶಂಕರರ ವಿಚಾರಧಾರೆಯನ್ನು ಪ್ರಚೂರ ಪಡಿಸುತ್ತಾ ಬಂದಿದೆ. ಇದು ಸನಾತನ ಧರ್ಮದ ಕೆಲಸ ಮಾಡುವವರಿಗೆ ಮಾರ್ಗಸೂಚಿಯಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ