ಆ್ಯಪ್ನಗರ

ಸಾಧನೆಯ ಶಿಖರವೇರಲು ಬಡತನ ಸ್ಫೂರ್ತಿ ಚಿಲುಮೆ

ಬಡತನವು ಸಾಧನೆಯ ಶಿಖರ ಏರಲು ವ್ಯಕ್ತಿಯೊಬ್ಬನನ್ನು ಅಣಿ ಮಾಡುವ ಸ್ಫೂರ್ತಿ ಚಿಲುಮೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಹೇಳಿದರು.

Vijaya Karnataka 18 Nov 2018, 5:00 am
ಶಂಕರಘಟ್ಟ: ಬಡತನವು ಸಾಧನೆಯ ಶಿಖರ ಏರಲು ವ್ಯಕ್ತಿಯೊಬ್ಬನನ್ನು ಅಣಿ ಮಾಡುವ ಸ್ಫೂರ್ತಿ ಚಿಲುಮೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಹೇಳಿದರು.
Vijaya Karnataka Web SMG-1711-2-15-17SMG DC


ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘ ಮತ್ತು ಬೆಂಗಳೂರಿನ ಡಾ. ರಾಜಕುಮಾರ್‌ ಸಿವಿಲ್‌ ಸರ್ವಿಸ್‌ ಅಕಾಡೆಮಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರಾರ‍ಯಗಾರದಲ್ಲಿ ಅವರು ತಮ್ಮ ಜೀವನಾನುಭವ ಹಂಚಿಕೊಳ್ಳುವ ಮೂಲಕ ಶಿಬಿರಾರ್ಥಿಗಳಿಗೆ ಪ್ರೇರಣೆಯಾದರು.

ಬಡತನವೊಂದು ಶಾಪ, ಕರ್ಮ ಎಂಬಂತಹ ನಕಾರಾತ್ಮಕ ಮನೋಭಾವ ಸಮಾಜದಲ್ಲಿ ನೆಲೆಸಿದೆ. ಆದರೆ, ಬಡತನವನ್ನು ಸಾಧನೆಯ ಮೆಟ್ಟಿಲಾಗಿಸಿಕೊಂಡವರು ಈ ನಾಡಿನಲ್ಲಿ ತಮ್ಮಂತೆ ಬಹಳಷ್ಟು ಮಂದಿ ಇದ್ದಾರೆ. ಬಡತನದ ಹಿನ್ನೆಲೆಯಲ್ಲಿ ಬೆಳೆದ ಮಕ್ಕಳಿಗೆ ಅನ್ನಾಹಾರದ ಕೊರತೆ, ಹೊಲ-ಮನೆ ಕೂಲಿ ಕೆಲಸ, ಹದಗೆಟ್ಟ ಆರ್ಥಿಕ ಪರಿಸ್ಥಿತಿ ಮತ್ತಿತರ ದೈನಂದಿನ ಸವಾಲುಗಳು ಹೆಜ್ಜೆಹೆಜ್ಜೆಗೂ ಕಾಡುತ್ತವೆ. ಇವುಗಳ ನಡುವೆಯೇ ಶಿಕ್ಷ ಣ ಪಡೆಯುವ ಮಕ್ಕಳು ಹೆಚ್ಚು ಚುರುಕಾಗಿ ಆಲೋಚಿಸುವ ಸಾಮರ್ಥ್ಯ‌ ಪಡೆದುಕೊಳ್ಳುತ್ತಾರೆ. ಬಡತನ ನೀಡಿದ ಈ ಸಾಮರ್ಥ್ಯ‌ವೇ ಮುಂದೆ ಸಾಧನೆಗೆ ವರವಾಗುತ್ತದೆ ಎಂದರು.

ಈ ಕಾರಣದಿಂದಾಗಿಯೆ ಭಾರತದಲ್ಲಿ ಅತ್ಯಂತ ಬಡರಾಜ್ಯವೆಂದು ಕರೆಯಲಾಗುವ ಬಿಹಾರದಿಂದ ಪ್ರತಿವರ್ಷ ಅತಿಹೆಚ್ಚು ಮಂದಿ ಐಎಎಸ್‌ ತೇರ್ಗಡೆ ಹೊಂದಿ ಉನ್ನತಾಧಿಕಾರಿಗಳಾಗಿ ಬರುತ್ತಿದ್ದಾರೆ. ಕರ್ನಾಟಕದ ಹಿಂದುಳಿದ ಬರಪೀಡಿತ ಜಿಲ್ಲೆ ಕೋಲಾರದವರು ಕೆಎಎಸ್‌ ಪಾಸು ಮಾಡುವಲ್ಲಿ ಬಹಳ ಮುಂದಿದ್ದಾರೆ ಎಂದರು.

ಕುಲಸಚಿವ ಡಾ. ಎಸ್‌.ಎಸ್‌.ಭೋಜ್ಯಾನಾಯ್ಕ್‌ ಮಾತನಾಡಿ, ನಗರದ ಖಾಸಗಿ ಶಿಕ್ಷ ಣವು ಅಂತಃಸತ್ವ ರಹಿತವಾಗಿದ್ದು, ಕಟ್ಟಡ, ಶಾಲಾವಾಹನ, ಪೋಷಾಕುಗಳ ಭೌತಿಕ ಭ್ರಮಾಲೋಕದೊಳಗೆ ಪಾಲಕರನ್ನು ಮುಳುಗಿಸಿದೆ. ನೈಜ ಪ್ರತಿಭೆ, ಶ್ರಮಸಂಸ್ಕೃತಿ, ಸಮಾಜದೆಡೆಗೆ ಬದ್ಧತೆಯುಳ್ಳ ಗ್ರಾಮೀಣ ಮಕ್ಕಳಿಗೆ ಉನ್ನತ ಶಿಕ್ಷ ಣ ನೀಡುವ ಗುರಿಯೊಂದಿಗೆ ವಿಶ್ವವಿದ್ಯಾಲಯವು ಕಾರ್ಯನಿರ್ವಹಿಸುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿರಂತರ ತರಬೇತಿ ನೀಡಲು ಕೊಠಡಿ, ಗ್ರಂಥಾಲಯ ಸೌಲಭ್ಯ ಒಳಗೊಂಡಂತೆ ಸಕಲ ವ್ಯವಸ್ಥೆಯುಳ್ಳ ಅಧ್ಯಯನ ಕೇಂದ್ರ ಸ್ಥಾಪಿಸಲು ಪ್ರಸ್ತಾವನೆಯೊಂದನ್ನು ಸರಕಾರಕ್ಕೆ ಸಲ್ಲಿಸಿದ್ದೇವೆ ಎಂದರು.

ಕುಲಪತಿ ಪ್ರೊ. ಜೋಗನ್‌ ಶಂಕರ್‌ ಅಧ್ಯಕತೆ ವಹಿಸಿದ್ದರು. ಇತಿಹಾಸ ವಿಭಾಗದ ಪ್ರೊ.ರಾಜಾರಾಮ ಹೆಗಡೆ, ಪ್ರೊ. ಸರ್ವಮಂಗಳಾ, ಡಾ. ಹಸೀನಾ ಮತ್ತು ಡಾ. ರಾಜಕುಮಾರ್‌ ಸಿವಿಲ್‌ ಸವೀರ್‍ಸ್‌ ಅಕಾಡೆಮಿ ಆಡಳಿತ ಮುಖ್ಯಸ್ಥ ಗಿರೀಶ್‌ ಹಾಜರಿದ್ದರು. ಇತಿಹಾಸ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘದ ಸದಸ್ಯರಾದ ದಾವಣಗೆರೆ ಎಸಿಬಿ ವಿಭಾಗದ ಡಿವೈಎಸ್‌ಪಿ ಎಚ್‌.ಎಸ್‌. ಪರಮೇಶ್ವರ್‌, ಸಿಬಿಐನ ಬೆಂಗಳೂರು ಎಸ್‌ಪಿ ರೂಪಮರಿಸ್ವಾಮಿ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮ ಆಯೋಜನೆಯಲ್ಲಿ ಪಾಲ್ಗೊಂಡಿದ್ದರು. ಕುವೆಂಪು ವಿವಿ ವ್ಯಾಪ್ತಿಯ 20ಕ್ಕೂ ಹೆಚ್ಚಿನ ಕಾಲೇಜುಗಳ 100ಕ್ಕೂ ಅಧಿಕ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ