ಆ್ಯಪ್ನಗರ

ಜ್ಞಾನ ಅರಿಯುವ ಶಕ್ತಿ ಎಲ್ಲರಲ್ಲೂ ಇರಬೇಕು: ಸ್ವಾಮೀಜಿ

ವ್ಯಕ್ತಿಯಲ್ಲಿ ಬಾಲ್ಯದಿಂದಲೇ ಜ್ಞಾನ ಸಹಜವಾಗಿ ಬೆಳೆದು ಬಂದಿರುತ್ತದೆ. ಅದನ್ನು ಅರಿತುಕೊಳ್ಳುವ ಶಕ್ತಿ ಇರಬೇಕು ಎಂದು ಶಿವಮೊಗ್ಗ ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.

Vijaya Karnataka 24 Aug 2019, 5:00 am
ಭದ್ರಾವತಿ: ವ್ಯಕ್ತಿಯಲ್ಲಿ ಬಾಲ್ಯದಿಂದಲೇ ಜ್ಞಾನ ಸಹಜವಾಗಿ ಬೆಳೆದು ಬಂದಿರುತ್ತದೆ. ಅದನ್ನು ಅರಿತುಕೊಳ್ಳುವ ಶಕ್ತಿ ಇರಬೇಕು ಎಂದು ಶಿವಮೊಗ್ಗ ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.
Vijaya Karnataka Web power of knowledge must be in everyone swamiji
ಜ್ಞಾನ ಅರಿಯುವ ಶಕ್ತಿ ಎಲ್ಲರಲ್ಲೂ ಇರಬೇಕು: ಸ್ವಾಮೀಜಿ


ಅವರು ಶುಕ್ರವಾರ ಹಳೇನಗರದ ಅಕ್ಕಮಹಾದೇವಿ ಬಳಗ, ಬಸವ ಕೇಂದ್ರ ಮತ್ತು ಶರಣ ಸಾಹಿತ್ಯ ಪರಿಷತ್‌ನ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ 206ನೇ ಶರಣ ಸಂಗಮ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತಾಡಿದರು.

ನಮ್ಮೊಳಗಿನ ಅರಿವನ್ನು ಕಡೆಗಣಿಸಿ ಬಾಹ್ಯದ ಅರಿವಿನ ಬಗ್ಗೆ ಆಸಕ್ತಿ ತೋರುತ್ತಿದ್ದೇವೆ. ಹಾಗಾಗಿ ನಾವು ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಭೂತಕಾಲದ ಅನುಭವ ವರ್ತಮಾನದ ವಿವೇಚನೆಗಳೆ ಅರಿವಾಗುತ್ತದೆ. ಇವುಗಳು ಪ್ರತಿಕ್ಷ ಣ ನಮ್ಮೊಳಗೆ ಸಂಭವಿಸುವ ಸಂಗತಿಗಳಾಗಿವೆ ಎಂದರು.

ಜೀವನದಲ್ಲಿ ಹೊರ ಪ್ರಪಂಚದ ಬೆಳಕನ್ನು ನೋಡಿ ಅನಂದಿಸುವ ನಾವು, ಅಂತರಂಗದಲ್ಲಿರುವ ಕತ್ತಲೆಯ ಕುರಿತು ಚಿಂತಿಸುತ್ತಿಲ್ಲ. ಬಡತನ, ಅಜ್ಞಾನ, ಸಂಶಯ, ಆಶಾಂತಿಗಳನ್ನು ಎದೆಯಲ್ಲಿ ತುಂಬಿಕೊಂಡಿದ್ದೇವೆ. ಇವುಗಳನ್ನು ಹೊಡೆದೋಡಿಸಿದಾಗ ಮಾತ್ರ ಹೊರಗಿನ ಬೆಳಕು ನಮ್ಮಲ್ಲಿ ಬೆಳಗುತ್ತದೆ. ಅಂತರಂಗ ಅಹ್ಲಾದಕರವಾದರೆ ಮುಖದಲ್ಲಿ ಮಂದಹಾಸ ಮೂಡಲು ಸಾಧ್ಯ. ಬಾಹ್ಯ ಅಲಂಕಾರಕ್ಕಿಂತ ಅಂತರಂಗದ ಶೃಂಗಾರದ ಬಗ್ಗೆ ಯೋಚಿಸಬೇಕು.

ಇಂದು ನಾವು ಕೇವಲ ಹಣ, ಅಂತಸ್ತು, ಆಭರಣಗಳೇ ಶ್ರೀಮಂತಿಕೆ ಎನ್ನುವಂತಹ ಭ್ರಮಾ ಲೋಕದಲ್ಲಿದ್ದೇವೆ. ನಿಸ್ವಾರ್ಥತೆ, ಶಾಂತಿ, ನೆಮ್ಮದಿ ಸಮೃದ್ಧಿಯಂತಹ ಸಂಗತಿಗಳೆ ಶ್ರೀಮಂತಿಕೆ ಎಂಬುದನ್ನು ಅರಿತಿಲ್ಲ. ಹೊರಗೆ ಬಡತನ ಇದ್ದರೂ ಅಂತರಂಗದಲ್ಲಿ ಶ್ರೀಮಂತರಾಗಿಬೇಕು ಎಂದರು.

ಜಗದೀಶ್‌ ಕವಿ ಅಧ್ಯಕ್ಷ ತೆ ವಹಿಸಿದ್ದರು. ಕುವೆಂಪು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್‌.ಸಿದ್ದೇಶ್‌, ಅರಿವೇಗುರು ಎಂಬ ವಿಷಯದ ಕುರಿತ ಉಪನ್ಯಾಸ ನೀಡಿದರು.

ಗೌರಮ್ಮ ಮತ್ತು ಸಂಗಡಿಗರು ವಚನ ಗೀತೆ ಹಾಡಿದರು. ಕೆ.ಬಸವರಾಜಪ್ಪ ಸ್ವಾಗತಿಸಿ, ಎನ್‌.ಎಸ್‌.ಮಹೇಶ್ವರಪ್ಪ ವಂದಿಸಿದರು. ಟಿ.ಜಿ.ಬವರಾಜಯ್ಯ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ