ಆ್ಯಪ್ನಗರ

‘ಯೋಗಾಭ್ಯಾಸದಿಂದ ವ್ಯಕ್ತಿತ್ವ ವಿಕಸನ’

ನಿತ್ಯ ಯೋಗಾಭ್ಯಾಸ ಮಾಡುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಜತೆಗೆ ಉತ್ತಮ ಅಭಿರುಚಿ ಮೂಡುತ್ತದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಜೋಗನ್‌ ಶಂಕರ್‌ ಹೇಳಿದರು.

Vijaya Karnataka 6 Sep 2018, 5:00 am
ಶಿವಮೊಗ್ಗ : ನಿತ್ಯ ಯೋಗಾಭ್ಯಾಸ ಮಾಡುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಜತೆಗೆ ಉತ್ತಮ ಅಭಿರುಚಿ ಮೂಡುತ್ತದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಜೋಗನ್‌ ಶಂಕರ್‌ ಹೇಳಿದರು.
Vijaya Karnataka Web SMR-5smg5


ಶಿವಗಂಗಾ ಯೋಗ ಕೇಂದ್ರ ವತಿಯಿಂದ ಬುಧವಾರ ಏರ್ಪಡಿಸಿದ್ದ ಶಿವಗಂಗಾ ಯೋಗ ಮಹಾವಿದ್ಯಾಲಯದ ಉದ್ಘಾಟನಾ ಸಮಾರಂಭ ಹಾಗೂ ಪಿಜಿ ಡಿಪ್ಲೋಮಾ ಯೋಗ ಶಿಕ್ಷ ಣ ಪ್ರಾರಂಭೋತ್ಸವ ಉದ್ಘಾಟಿಸಿ ಅವರು ಮಾತನಾಡಿ, ಯೋಗಾಭ್ಯಾಸ ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಬೇಕು. ಆಗ ಮಾತ್ರ ವ್ಯಕ್ತಿತ್ವ ಉನ್ನತಿಯೆಡೆಗೆ ಸಾಗುತ್ತದೆ ಎಂದರು.

ಯೋಗಾಭ್ಯಾಸದಿಂದ ಮನುಷ್ಯನಿಗೆ ದೈಹಿಕ, ಮಾನಸಿಕ ಆರೋಗ್ಯ ಹಾಗೂ ಏಕಾಗ್ರತೆ ದೊರಕುತ್ತದೆ. ವಿಶ್ವ ಬಾಂಧವ್ಯವನ್ನು ಬೆಳೆಸಿ ಮಾನವ ಕುಲವನ್ನು ಬೆಸೆಯುವ ಕಾರ್ಯವನ್ನು ಯೋಗ ಮಾಡಿದೆ. ಸಾಂಸ್ಕೃತಿಕ ಮೌಲ್ಯ, ವೈಜ್ಞಾನಿಕ ಜ್ಞಾನ, ಮನುಕುಲದ ಅಭಿವೃದ್ಧಿಗೆ ಶಿಸ್ತು ನೀಡಿದೆ. ಜೂ.21ರಂದು ವಿಶ್ವ ಯೋಗ ದಿನ ಆಚರಿಸಲಾಗುತ್ತಿದೆ. ಇದು ನಮ್ಮ ದೇಶಕ್ಕೆ ದೊರಕಿದ ಗೌರವ ಎಂದರು.

ಶಿವಗಂಗಾ ಯೋಗ ಕೇಂದ್ರದಿಂದ ಒಂದು ಉತ್ತಮ ಕೊಡುಗೆ ಸಮಾಜಕ್ಕೆ ಲಭ್ಯವಾಗುತ್ತಿದೆ. ಕುವೆಂಪು ವಿವಿಯಿಂದ ಎಲ್ಲ ಸಹಾಯ ನೀಡಲು ಸಿದ್ಧರಿದ್ದೇವೆ ಎಂದರು.

ಶಾಸಕ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ಯೋಗ ಕೇಂದ್ರಗಳಿಂದ ಇಡೀ ಜಗತ್ತಿಗೆ ಅನೇಕ ಉಪಯೋಗ ದೊರಕುತ್ತಿದೆ. ಇಂತಹ ಸಂದರ್ಭ ಯೋಗ ಶಿಕ್ಷ ಕರನ್ನು ತಯಾರು ಮಾಡುವ ಕೇಂದ್ರದಿಂದ ಸಮಾಜಕ್ಕೆ ಇನ್ನಷ್ಟು ಪ್ರಯೋಜನ, ಕೊಡುಗೆ ದೊರಕಬೇಕು ಎಂದರು

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಬೆಕ್ಕಿನಕಲ್ಮಠ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಯೋಗದಲ್ಲಿ ಧರ್ಮ ಬೆರೆಸಬಾರದು. ಮನುಷ್ಯ ಮನುಷ್ಯನಾಗಿ ಬಾಳಲು ಯೋಗ ಬೇಕು. ಮುಂದಿನ ದಿನಗಳಲ್ಲಿ ವಿಶ್ವದೆಲ್ಲೆಡೆ ಯೋಗ ಗುರುಗಳಿಗೆ ಬೇಡಿಕೆ ಹೆಚ್ಚಲಿದ್ದು, ಇಲ್ಲಿ ಪಡೆದ ಶಿಕ್ಷ ಣ ಸಾರ್ಥಕವಾಗಲಿದೆ ಎಂದರು.

ಈ ಸಂದರ್ಭ ವಿಧಾನ ಪರಿಷತ್‌ ಸದಸ್ಯ ಎಸ್‌.ರುದ್ರೇಗೌಡ, ಕುವೆಂಪು ವಿವಿಯ ಪ್ರೊ.ರಾಜಾನಾಯ್ಕ್‌, ಪ್ರೊ.ಎಚ್‌.ಹಿರೇಮಣಿ ನಾಯ್ಕ್‌, ಪ್ರೊ.ಬಿರಾದರ್‌, ಸಿ.ವಿ.ರುದ್ರಾರಾದ್ಯ, ಡಾ.ಎನ್‌.ಎಲ್‌.ನಾಯ್ಕ್‌, ಎಸ್‌.ವೈ.ಅರುಣಾದೇವಿ, ಜ್ಯೋತಿಪ್ರಕಾಶ್‌ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ