ಆ್ಯಪ್ನಗರ

ಮಳೆಗಾಗಿ ಬೇಗೂರು ಗ್ರಾಮಸ್ಥರಿಂದ ಪ್ರಾರ್ಥನೆ

ಸತತ ಐದು ವರ್ಷದಿಂದ ತಾಲೂಕಿನ ಬೇಗೂರು ಗ್ರಾಮದ ಕೆರೆ ತುಂಬಿಲ್ಲ. ಈ ಬಾರಿಯಾದರೂ ವರುಣ ದೇವ ಕೃಪೆದೋರಿ ಕೆರೆ ತುಂಬಿಸಲಿ ಎನ್ನುವ ಆಶಯದೊಂದಿಗೆ ಸೋಮವಾರ ಗ್ರಾಮಸ್ಥರು ಗ್ರಾಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

Vijaya Karnataka 5 Jun 2019, 5:00 am
ಶಿಕಾರಿಪುರ: ಸತತ ಐದು ವರ್ಷದಿಂದ ತಾಲೂಕಿನ ಬೇಗೂರು ಗ್ರಾಮದ ಕೆರೆ ತುಂಬಿಲ್ಲ. ಈ ಬಾರಿಯಾದರೂ ವರುಣ ದೇವ ಕೃಪೆದೋರಿ ಕೆರೆ ತುಂಬಿಸಲಿ ಎನ್ನುವ ಆಶಯದೊಂದಿಗೆ ಸೋಮವಾರ ಗ್ರಾಮಸ್ಥರು ಗ್ರಾಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
Vijaya Karnataka Web SMR-3SKP9


ಗ್ರಾಮದ ಹಿರೇಕೆರೆ, ದೇವಸ್ಥಾನ ಹೊಂಡ ಕಳೆದ ಐದು ವರ್ಷದಿಂದಲೂ ತುಂಬಿಲ್ಲ. ಈ ವರ್ಷವಾದರೂ ಕೆರೆ ತುಂಬಲಿ ಎಂದು ಪ್ರಾರ್ಥಿಸಿ ದೇವಸ್ಥಾನ ಸಮಿತಿಯಿಂದ ಗ್ರಾಮ ದೇವರಾದ ಶ್ರೀ ಮಳೆ ಮಲ್ಲೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರೆ, ಮಹಿಳೆಯರು ಕೆರೆಗೆ ಪೂಜೆ ಸಲ್ಲಿಸಿದರು. ಗ್ರಾಮದ ಎಲ್ಲರೂ ತಮ್ಮ ಮನೆಯಲ್ಲಿ ಪ್ರಸಾದ ತಯಾರಿಸಿ ತಲೆಮೇಲೆ ಹೊತ್ತುಕೊಂಡು ಮೆರವಣಿಗೆಯಲ್ಲಿ ಆಗಮಿಸಿ ಕೆರೆ ಅಂಗಳದಲ್ಲಿ ಊಟ ಮಾಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ರು, ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ