ಆ್ಯಪ್ನಗರ

ಸಾಮೂಹಿಕ ಭೋಜನ: ಮುನ್ನೆಚ್ಚರ ವಹಿಸದಿದ್ದರೆ ಕ್ರಮ

ಸಾಮೂಹಿಕ ಭೋಜನ, ಅನ್ನ ಸಂತರ್ಪಣೆ ಮುಂತಾದ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿ ಜಾರಿಗೊಳಿಸಿದ್ದು, ಇವುಗಳನ್ನು ಕಡ್ಡಾಯ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ತಿಳಿಸಿದ್ದಾರೆ.

Vijaya Karnataka 29 Dec 2018, 5:00 am
ಶಿವಮೊಗ್ಗ: ಸಾಮೂಹಿಕ ಭೋಜನ, ಅನ್ನ ಸಂತರ್ಪಣೆ ಮುಂತಾದ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿ ಜಾರಿಗೊಳಿಸಿದ್ದು, ಇವುಗಳನ್ನು ಕಡ್ಡಾಯ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ತಿಳಿಸಿದ್ದಾರೆ.
Vijaya Karnataka Web precaution public dinner
ಸಾಮೂಹಿಕ ಭೋಜನ: ಮುನ್ನೆಚ್ಚರ ವಹಿಸದಿದ್ದರೆ ಕ್ರಮ


ಸಾಮೂಹಿಕ ಭೋಜನ, ಅನ್ನಸಂತರ್ಪಣೆ ನಡೆಸುವ ವಿವರವನ್ನು ಸ್ಥಳೀಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ಮುಂಚಿತವಾಗಿ ತಿಳಿಸಬೇಕು. ಅಡುಗೆ ಕೋಣೆಗೆ ಅಪರಿಚಿತ, ಅನಧಿಕೃತ ವ್ಯಕ್ತಿಗಳು ಪ್ರವೇಶಿಸದಂತೆ ಮುಂಜಾಗರೂಕತೆ ವಹಿಸಬೇಕು. ಕೋಣೆಯಲ್ಲಿ ಗಾಳಿ ಮತ್ತು ಬೆಳಕಿನ ವ್ಯವಸ್ಥೆ, ಬೆಂಕಿ ನಂದಿಸುವ ಯಂತ್ರದ ಜತೆಗೆ ಪ್ರಥಮ ಚಿಕಿತ್ಸಾ ವ್ಯವಸ್ಥೆ ಮಾಡಬೇಕು.

ಊಟದ ಕೋಣೆಯಲ್ಲಿ ಕುಡಿಯುವ ನೀರು, ಅಡುಗೆಗೆ ಬಳಸುವ ನೀರು ಶುದ್ಧವಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಅಡುಗೆ ಮಾಡುವವರ, ಸಹಾಯಕರ, ಊಟ ಬಡಿಸುವವರನ್ನು ನೇಮಕ ಮಾಡುವ ಮುನ್ನ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಬೇಕು. ಅಡುಗೆ ತಯಾರಿ ಸಂದರ್ಭ ಕೈಗವಸು, ತಲೆಗೆ ಟೊಪ್ಪಿ ಬಳಸಬೇಕು. ಪ್ರತಿ ಸಿಬ್ಬಂದಿಯನ್ನು 6ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಬೇಕು. ಪ್ರತಿ ಆರು ತಿಂಗಳಿಗೊಮ್ಮೆ ಜಂತು ಹುಳು ನಿವಾರಣಾ ಮಾತ್ರೆ ನೀಡಲು ಕ್ರಮ ಕೈಗೊಳ್ಳಬೇಕು. ಇವರು ಅಡುಗೆ ಕೋಣೆಯಲ್ಲಿ ಮದ್ಯಪಾನ, ಧೂಮಪಾನ ಮತ್ತು ತಂಬಾಕು ಸೇವನೆ ಮಾಡುವುದನ್ನು ನಿಷೇಧಿಸಬೇಕು.

ಪಾತ್ರೆ ತೊಳೆದ ನೀರು, ಕೈ ತೊಳೆದ ನೀರು ಸಮರ್ಪಕವಾಗಿ ಹರಿದು ಹೋಗುವಂತೆ ವ್ಯವಸ್ಥೆ ಇರಬೇಕು. ತರಕಾರಿ, ಆಹಾರ ಧಾನ್ಯಗಳನ್ನು ಇಡುವ ಕೊಠಡಿಯಲ್ಲಿ ಹಾವು, ಹಲ್ಲಿ, ಜಿರಳೆಗಳಿರದಂತೆ ಎಚ್ಚರಿಕೆ ವಹಿಸಬೇಕು. ಅಡುಗೆಗೆ ಅಲ್ಯೂಮಿನಿಯಂ ಪಾತ್ರೆ ಉಪಯೋಗಿಸುವಂತಿಲ್ಲ. ಪಾತ್ರೆ, ತಟ್ಟೆ, ಲೋಟಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕು. ಕಲಬೆರಕೆ ಆಹಾರ ಪದಾರ್ಥ ಕಂಡು ಬಂದಲ್ಲಿ ಅವುಗಳನ್ನು ಬಳಸದೆ, ಆಹಾರ ಸುರಕ್ಷ ತಾ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದ್ದಾರೆ .

(
ದೇವಸ್ಥಾನ, ಅಂಗನವಾಡಿ, ಶಾಲೆ, ವಸತಿಶಾಲೆ, ಹಾಸ್ಟೆಲ್‌, ಕಾಲೇಜು ಕ್ಯಾಂಟೀನ್‌, ಕಾರಾಗೃಹ, ಆಸ್ಪತ್ರೆ ಕ್ಯಾಂಟೀನ್‌ ಇತ್ಯಾದಿ ಕಡೆಗಳಲ್ಲಿ ಈ ಎಲ್ಲ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಮಾರ್ಗಸೂಚಿ ಪಾಲಿಸದೆ ಅವಘಡ ಸಂಭವಿಸಿದರೆ ಅಂತಹ ಸಂಸ್ಥೆ ಮುಖ್ಯಸ್ಥರನ್ನು ಹಾಗೂ ಸಮಾರಂಭ ಆಯೋಜಕರನ್ನು ಹೊಣೆಗಾರರಾಗಿ ಮಾಡಿ ಕಾನೂನು ಅನುಸಾರ ಕ್ರಮ ಕೈಗೊಳ್ಳಲಾಗುವುದು.

-ಕೆ.ಎ.ದಯಾನಂದ, ಜಿಲ್ಲಾಧಿಕಾರಿ.




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ