ಆ್ಯಪ್ನಗರ

ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಅಗತ್ಯ

ಪೌಷ್ಟಿಕ ಆಹಾರ ಕೊರತೆಯಿಂದಾಗಿ ಹೆರಿಗೆ ಸಮಯದಲ್ಲಿಶಿಶು ಮರಣ ಸಂಭವಿಸಲಿದೆ. ಗರ್ಭಾವಸ್ಥೆಯಲ್ಲಿಮಹಿಳೆಯರು ಸೂಕ್ಷತ್ರ್ಮವಾಗುವುದರಿಂದ ಮನಸ್ಸಿನ ಮೇಲೆ ಪರಿಣಾಮ ಆಗದಂತೆ ನೋಡಿಕೊಳ್ಳಬೇಕೆಂದು ಆರೋಗ್ಯ ಮಹಿಳಾ ಸಹಾಯಕಿ ಪುಷ್ಪಾ ಹೇಳಿದರು.

Vijaya Karnataka 22 Nov 2019, 5:00 am
ಸೊರಬ: ಪೌಷ್ಟಿಕ ಆಹಾರ ಕೊರತೆಯಿಂದಾಗಿ ಹೆರಿಗೆ ಸಮಯದಲ್ಲಿಶಿಶು ಮರಣ ಸಂಭವಿಸಲಿದೆ. ಗರ್ಭಾವಸ್ಥೆಯಲ್ಲಿಮಹಿಳೆಯರು ಸೂಕ್ಷತ್ರ್ಮವಾಗುವುದರಿಂದ ಮನಸ್ಸಿನ ಮೇಲೆ ಪರಿಣಾಮ ಆಗದಂತೆ ನೋಡಿಕೊಳ್ಳಬೇಕೆಂದು ಆರೋಗ್ಯ ಮಹಿಳಾ ಸಹಾಯಕಿ ಪುಷ್ಪಾ ಹೇಳಿದರು.
Vijaya Karnataka Web 095520SRBP3_46
ಸೊರಬ ತಾಲೂಕಿನ ಜಂಗಿನಕೊಪ್ಪ ಗ್ರಾಮದಲ್ಲಿಏರ್ಪಡಿಸಿದ್ದ ಪೋಷಣಾ ಅಭಿಯಾನದಲ್ಲಿಗರ್ಭಿಣಿಯರಿಗೆ ಸೀಮಂತ ನಡೆಯಿತು


ತಾಲೂಕಿನ ಜಂಗಿನಕೊಪ್ಪ ಗ್ರಾಮದಲ್ಲಿಶಿಶು ಅಭಿವೃದ್ಧಿ ಇಲಾಖೆ ಬುಧವಾರ ಏರ್ಪಡಿಸಿದ್ದ ಪೋಷಣಾ ಅಭಿಯಾನದಲ್ಲಿಗರ್ಭಿಣಿಯರಿಗೆ ಹಮ್ಮಿಕೊಂಡಿದ್ದ ಸೀಮಂತ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಆರೋಗ್ಯಪೂರ್ಣ ಮಗುವಿನ ಹುಟ್ಟಿಗೆ ಗರ್ಭಿಣಿಯರಿಗೆ ಪೌಷ್ಟಿಕ ಆಹಾರದ ಅವಶ್ಯವಿದೆ. ಆರೋಗ್ಯಪೂರ್ಣ ಮಗುವಿನ ಜನನಕ್ಕೆ ಗರ್ಭಿಣಿಯರಿಗೆ ಅಪೌಷ್ಟಿಕತೆ ಎದುರಾಗದಂತೆ ನೋಡಿಕೊಳ್ಳಬೇಕೆಂದರು.

ಕನಿಷ್ಠ ಎರಡು ವರ್ಷದವರೆಗೆ ಮಗುವಿಗೆæ ಎದೆಹಾಲು ಉಣಿಸುವುದನ್ನು ರೂಢಿ ಮಾಡಿಕೊಂಡರೆ ಮಗುವಿಗೆ ಬುದ್ಧಿಶಕ್ತಿ, ದೈಹಿಕ ಬೆಳವಣಿಗೆ ಹೆಚ್ಚಾಗುತ್ತದೆ ಎಂದರು.

ಗ್ರಾಮ ಸಮಿತಿ ಮಾಜಿ ಅಧ್ಯಕ್ಷ ಗದ್ದೆಮನೆ ಬಸವರಾಜಪ್ಪ ಮಾತನಾಡಿ, ಸರಕಾರದ ಸೌಲಭ್ಯ ಅಂಗನವಾಡಿ ಮೂಲಕ ಪ್ರತಿ ಗ್ರಾಮಕ್ಕೂ ತಲುಪುತ್ತಿರುವುದು ಶ್ಲಾಘನೀಯ. ಸಾರ್ವಜನಿಕ ಆಸ್ಪತ್ರೆಯಲ್ಲಿವೈದ್ಯರ ಕೊರತೆ ನಡುವೆ ಗ್ರಾಮಗಳಲ್ಲಿಕಿರಿಯ ಅರೋಗ್ಯ ಸಹಾಯಕಿಯರು ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ಸೇವೆ ನೀಡುತ್ತಿರುವುದು ಮುಖ್ಯವಾಗಿದೆ ಎಂದರು. ಆಶಾ ಕಾರ್ಯಕರ್ತೆ ರೇಖಾ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆ ಸವಿತಾ ಪ್ರಾರ್ಥಿಸಿ, ರೇಖಾ ವಂದಿಸಿದರು. ಅಂಗನವಾಡಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಶಶಿಕಲಾ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣಮೂರ್ತಿ, ಗದ್ದೆಮನೆ ನಾಗಮ್ಮ, ಶಾಂತಾ, ಕಾರ್ಯಕರ್ತೆಯರಾದ ಜಯಶ್ರೀ, ರೋಹಿಣಿ, ಶಿಲ್ಪಾ ಚಿತ್ರಟ್ಟೆಹಳ್ಳಿ, ನೀಲಮ್ಮ, ನಿಂಗಮ್ಮ, ವಿಜಯಾ, ಕವಿತಾ, ಪದ್ಮಾ ಇತರರಿದ್ದರು.

---------
6ತಿಂಗಳವರೆಗೆ ಮಗುವಿಗೆ ತಾಯಿ ಎದೆ ಹಾಲು ಹೊರತುಪಡಿಸಿ ಯಾವುದೇ ಆಹಾರ ನೀಡಬಾರದು. ನಂತರ ಪೂರಕ ಆಹಾರ ನೀಡಬೇಕು. ಏಕದಳ ಧಾನ್ಯವನ್ನು ಹಿಟ್ಟು ಮಾಡಿಸಿ ಬಿಸಿನೀರಿನಲ್ಲಿಬೆರೆಸಿ ತಿನ್ನಿಸಬೇಕು. ಇದರಿಂದ ಮಗು ಶೀತ, ನೆಗಡಿ ಹಾಗೂ ಜ್ವರದಿಂದ ಬಳಲುವುದನ್ನು ತಪ್ಪಿಸಬಹುದು.
-ಪುಷ್ಪಾ, ಆರೋಗ್ಯ ಮಹಿಳಾ ಸಹಾಯಕಿ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ