ಆ್ಯಪ್ನಗರ

ಶಿರಾಳಕೊಪ್ಪದಲ್ಲಿ ಪತ್ರಿಕಾ ದಿನಾಚರಣೆ

ಸಾಮಾಜಿಕ ಜಾಲತಾಣಗಳ ಶರವೇಗದಲ್ಲೂ ಸಹ ಪತ್ರಿಕೆಗಳು ಜನತೆಯ ವಿಶ್ವಾಸಗಳಿಸಿ ಪ್ರತಿನಿತ್ಯ ಲಕ್ಷಾಂತರ ಓದುಗರನ್ನು ತಲುಪುತ್ತಿವೆ ಎಂದು ಪತ್ರಕರ್ತ ಚಂದ್ರಹಾಸ ಹಿರೇಮಳಲಿ ಹೇಳಿದರು.

Vijaya Karnataka 24 Jul 2019, 5:00 am
ಶಿರಾಳಕೊಪ್ಪ : ಸಾಮಾಜಿಕ ಜಾಲತಾಣಗಳ ಶರವೇಗದಲ್ಲೂ ಸಹ ಪತ್ರಿಕೆಗಳು ಜನತೆಯ ವಿಶ್ವಾಸಗಳಿಸಿ ಪ್ರತಿನಿತ್ಯ ಲಕ್ಷಾಂತರ ಓದುಗರನ್ನು ತಲುಪುತ್ತಿವೆ ಎಂದು ಪತ್ರಕರ್ತ ಚಂದ್ರಹಾಸ ಹಿರೇಮಳಲಿ ಹೇಳಿದರು.
Vijaya Karnataka Web SMR-23SLKP01 PHOTO03


ಪಟ್ಟಣದ ಪಬ್ಲಿಕ್‌ ಸ್ಕೂಲ್‌ ಮತ್ತು ಶಿಕಾರಿಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಗುರುಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಸುದ್ದಿಗಳನ್ನು ಕರಪತ್ರದ ಮೂಲಕ ಮುದ್ರಿಸಿ ಹಂಚುತ್ತಿದ್ದರು. ಕ್ರಮೇಣ ಮುಂದುವರೆದು ಪತ್ರಿಕೆ ಜನತೆಯ ಬಳಿ ಮಾಧ್ಯಮವಾಗಿ ಕೆಲಸ ಮಾಡತೊಡಗಿತು. ಮಂಗಳೂರು ಸಮಾಚಾರ ಕನ್ನಡದ ಮೊದಲ ಪತ್ರಿಕೆ ಕರ್ನಾಟಕದಲ್ಲಿ ಬೆಳಕು ಚೆಲ್ಲಿತು. ಅಂದಿನ ಸ್ವಾತಂತ್ರ್ಯ ಚಳವಳಿಯ ವೇಳೆ ಪತ್ರಿಕೋಧ್ಯಮ ಮಹತ್ತರ ಸಂಪರ್ಕ ಸಾಧನವಾಯಿತು ಎಂದರು.

ಹಿರಿಯ ಪತ್ರಕರ್ತ ಬಿ.ವಿ. ಶೇಷಗಿರಿ, ಕಾಲೇಜಿನ ಪ್ರಾಂಶುಪಾಲ ಪಕ್ಕೀರಪ್ಪ , ಜಿಲ್ಲಾ ಕಾರ್ಯನಿರತ ಸಂಘದ ಕಾರ್ಯದರ್ಶಿ ಕೆ.ಎಸ್‌ ಹುಚ್ಚರಾಯಪ್ಪ , ತಾಲೂಕು ಸಂಘದ ಅಧ್ಯಕ್ಷ ರಾಘವೇಂದ್ರ ಮಾತನಾಡಿದರು. ನಿವೇದಿತಾ ರಾಜು ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ದೀಪಾ ಪ್ರಾರ್ಥಿಸಿ, ಉಪನ್ಯಾಸಕ ಬಸವರಾಜಪ್ಪ ಸ್ವಾಗತಿಸಿ, ನವೀನ್‌ ಕುಮಾರ್‌ ಎಂ ನಿರೂಪಿಸಿ, ರಘು ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ