ಶಿವಮೊಗ್ಗ: ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ರಸವಾಗಿಸಲು ಪೈಪ್ಕಾಂಪೋಸ್ಟ್ ಸಹಕಾರಿ ಎಂದು ಚಾಂಪಿಯನ್ ಆಫ್ ಬೇಂಜ್ ಪ್ರಶಸ್ತಿ ಪುರಸ್ಕೃತ ಟಿ.ಎಸ್.ಮಹದೇವಸ್ವಾಮಿ ಹೇಳಿದರು.
ಶಿವಮೊಗ್ಗ ರೋಟರಿ ಪೂರ್ವ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಹಸಿ ತ್ಯಾಜ ಸಂಸ್ಕರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮನೆಯಲ್ಲೇ ಕಾಂಪೋಸ್ಟ್ ಮೂಲಕ ಕಸವನ್ನು ಗೊಬ್ಬರವಾಗಿಸಿ ಗಿಡಗಳಿಗೆ ಗೊಬ್ಬರವಾಗಿ ಉಪಯೋಗಿಸುವ ಮೂಲಕ ಆರೋಗ್ಯ ಪೂರ್ಣ ಪರಿಸರ ನಿರ್ಮಾಣ ಸಾಧ್ಯ ಎಂದರು.
ನಿತ್ಯ ಮನೆಗಳಲ್ಲಿ ತರಕಾರಿ, ಹಣ್ಣಿನ ಹಸಿ ತ್ಯಾಜ್ಯಗಳನ್ನು ಉಪಯೋಗಿಸಿ ಮನೆ ಅಂಗಳದಲ್ಲಿ ಇರುವ ಸ್ವಲ್ಪ ಜಾಗದಲ್ಲಿ 6 ಇಂಚು ದಪ್ಪ 6 ಅಡಿ ಎತ್ತರದ, ಸಿಮೆಂಟ್ ಅಥವಾ ಮಣ್ಣಿನ ಅಥವಾ ಪ್ಲಾಸ್ಟಿಕ್ ಪೈಪ್ 1 ಅಡಿ ಆಳದಲ್ಲಿ ನೆಟ್ಟಿ ಪೈಪ್ ಒಳಗೆ ಕಸ ಹಾಕುವ ಮೊದಲು 1 ಕೆ.ಜಿ. ಬೆಲ್ಲ ಮತ್ತು ಸಗಣಿ ನೀರನ್ನು ಹಾಕಿ, ನಂತರ ಮನೆಯಲ್ಲಿ ನಿತ್ಯ ಉತ್ಪತ್ತಿಯಾಗುವ ಬೇಡವಾದ ಜೈವಿಕ ಕಸ ಹಾಕಿ ಕಾಂಪೋಸ್ಟ್ ತಯಾರಿಸಿ ಗೊಬ್ಬರವಾಗಿ ಪರಿವರ್ತಿಸಬಹುದು. ಇದರಿಂದ ಮನೆ ಕಸ ವಿಲೇವಾರಿಯಾದಂತಾಗುತ್ತದೆ. ಗೊಬ್ಬರದಿಂದ ಒಂದಿಷ್ಟು ಹಣವೂ ಕೈಗೆ ಸಿಗುತ್ತದೆ ಎಂದರು.
ನಾಗರಿಕರು ಬಡಾವಣೆಯಲ್ಲಿ ದಿನ ನಿತ್ಯ ಕುಡಿಯುವ ನೀರನ್ನು, ಅಂಗಳ ಗುಡಿಸಲು ವಾಹನಗಳನ್ನು ತೊಳೆಯಲು ಯಥೇಚ್ಛವಾಗಿ ಉಪಯೋಗಿಸುತ್ತ, ಕ್ಷೀಣಿಸುತ್ತಿರುವ ಪ್ರಕೃತಿ ಸಂಪತ್ತನ್ನು ಮುಂದಿನ ಪೀಳಿಗೆಗಾಗಿ ಉಳಿಸುವ ಒಂದು ಯೋಚನೆಯಿಲ್ಲದೆ ಪೋಲು ಮಾಡುತ್ತಿರುವುದು ವಿಷಾದನೀಯ. 50,60 ಲಕ್ಷ ಖರ್ಚು ಮಾಡಿ ಮನೆ ಕಟ್ಟಿ ತಮ್ಮ ಮನೆಯ ನೀರಿನ ಸಂಪ್ಗೆ ಕೇವಲ 500 ರೂ.ಫುಟ್ ವಾಲ್ ಹಾಕಿಸದೆ, ನೀರನ್ನು ಪೋಲಾಗುವಂತೆ ಮಾಡುತ್ತಿದ್ದಾರೆ. ಪ್ರಕೃತಿ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸುವ ಕರ್ತವ್ಯ ಎಲ್ಲರದ್ದಾಗಬೇಕಿದೆ ಎಂದರು. ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಮಹೇಶ, ಪ್ರಮುಖರಾದ ವಿಜಯಕುಮಾರ್, ಸುಬ್ಬಯ್ಯ ಗೌಡ್ರು, ಗಣೇಶ ಮತ್ತಿತ್ತರರು ಇದ್ದರು. ಇದೇ ಸಂದರ್ಭದಲ್ಲಿ ಮಹದೇವಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಶಿವಮೊಗ್ಗ ರೋಟರಿ ಪೂರ್ವ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಹಸಿ ತ್ಯಾಜ ಸಂಸ್ಕರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮನೆಯಲ್ಲೇ ಕಾಂಪೋಸ್ಟ್ ಮೂಲಕ ಕಸವನ್ನು ಗೊಬ್ಬರವಾಗಿಸಿ ಗಿಡಗಳಿಗೆ ಗೊಬ್ಬರವಾಗಿ ಉಪಯೋಗಿಸುವ ಮೂಲಕ ಆರೋಗ್ಯ ಪೂರ್ಣ ಪರಿಸರ ನಿರ್ಮಾಣ ಸಾಧ್ಯ ಎಂದರು.
ನಿತ್ಯ ಮನೆಗಳಲ್ಲಿ ತರಕಾರಿ, ಹಣ್ಣಿನ ಹಸಿ ತ್ಯಾಜ್ಯಗಳನ್ನು ಉಪಯೋಗಿಸಿ ಮನೆ ಅಂಗಳದಲ್ಲಿ ಇರುವ ಸ್ವಲ್ಪ ಜಾಗದಲ್ಲಿ 6 ಇಂಚು ದಪ್ಪ 6 ಅಡಿ ಎತ್ತರದ, ಸಿಮೆಂಟ್ ಅಥವಾ ಮಣ್ಣಿನ ಅಥವಾ ಪ್ಲಾಸ್ಟಿಕ್ ಪೈಪ್ 1 ಅಡಿ ಆಳದಲ್ಲಿ ನೆಟ್ಟಿ ಪೈಪ್ ಒಳಗೆ ಕಸ ಹಾಕುವ ಮೊದಲು 1 ಕೆ.ಜಿ. ಬೆಲ್ಲ ಮತ್ತು ಸಗಣಿ ನೀರನ್ನು ಹಾಕಿ, ನಂತರ ಮನೆಯಲ್ಲಿ ನಿತ್ಯ ಉತ್ಪತ್ತಿಯಾಗುವ ಬೇಡವಾದ ಜೈವಿಕ ಕಸ ಹಾಕಿ ಕಾಂಪೋಸ್ಟ್ ತಯಾರಿಸಿ ಗೊಬ್ಬರವಾಗಿ ಪರಿವರ್ತಿಸಬಹುದು. ಇದರಿಂದ ಮನೆ ಕಸ ವಿಲೇವಾರಿಯಾದಂತಾಗುತ್ತದೆ. ಗೊಬ್ಬರದಿಂದ ಒಂದಿಷ್ಟು ಹಣವೂ ಕೈಗೆ ಸಿಗುತ್ತದೆ ಎಂದರು.
ನಾಗರಿಕರು ಬಡಾವಣೆಯಲ್ಲಿ ದಿನ ನಿತ್ಯ ಕುಡಿಯುವ ನೀರನ್ನು, ಅಂಗಳ ಗುಡಿಸಲು ವಾಹನಗಳನ್ನು ತೊಳೆಯಲು ಯಥೇಚ್ಛವಾಗಿ ಉಪಯೋಗಿಸುತ್ತ, ಕ್ಷೀಣಿಸುತ್ತಿರುವ ಪ್ರಕೃತಿ ಸಂಪತ್ತನ್ನು ಮುಂದಿನ ಪೀಳಿಗೆಗಾಗಿ ಉಳಿಸುವ ಒಂದು ಯೋಚನೆಯಿಲ್ಲದೆ ಪೋಲು ಮಾಡುತ್ತಿರುವುದು ವಿಷಾದನೀಯ. 50,60 ಲಕ್ಷ ಖರ್ಚು ಮಾಡಿ ಮನೆ ಕಟ್ಟಿ ತಮ್ಮ ಮನೆಯ ನೀರಿನ ಸಂಪ್ಗೆ ಕೇವಲ 500 ರೂ.ಫುಟ್ ವಾಲ್ ಹಾಕಿಸದೆ, ನೀರನ್ನು ಪೋಲಾಗುವಂತೆ ಮಾಡುತ್ತಿದ್ದಾರೆ. ಪ್ರಕೃತಿ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸುವ ಕರ್ತವ್ಯ ಎಲ್ಲರದ್ದಾಗಬೇಕಿದೆ ಎಂದರು. ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಮಹೇಶ, ಪ್ರಮುಖರಾದ ವಿಜಯಕುಮಾರ್, ಸುಬ್ಬಯ್ಯ ಗೌಡ್ರು, ಗಣೇಶ ಮತ್ತಿತ್ತರರು ಇದ್ದರು. ಇದೇ ಸಂದರ್ಭದಲ್ಲಿ ಮಹದೇವಸ್ವಾಮಿ ಅವರನ್ನು ಸನ್ಮಾನಿಸಲಾಯಿತು.