ಆ್ಯಪ್ನಗರ

ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಆದ್ಯತೆ

ಜಿಲ್ಲಾಪಂಚಾಯಿತಿಯ ತಮ್ಮ ಕಾರ‍್ಯಕ್ಷೇತ್ರದಲ್ಲಿಗ್ರಾಮೀಣ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾಪಂಚಾಯಿತಿ ಸದಸ್ಯ ರಾಜಶೇಖರ ಗಾಳಿಪುರ ಹೇಳಿದರು.

Vijaya Karnataka 22 Nov 2019, 5:00 am
ತಾಳಗುಪ್ಪ : ಜಿಲ್ಲಾಪಂಚಾಯಿತಿಯ ತಮ್ಮ ಕಾರ‍್ಯಕ್ಷೇತ್ರದಲ್ಲಿಗ್ರಾಮೀಣ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾಪಂಚಾಯಿತಿ ಸದಸ್ಯ ರಾಜಶೇಖರ ಗಾಳಿಪುರ ಹೇಳಿದರು.
Vijaya Karnataka Web priority for rural road development
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಆದ್ಯತೆ


ಅವರು ಬರದಳ್ಳಿಯಲ್ಲಿ3ಲಕ್ಷ ರೂ. ವೆಚ್ಚದ ಬರದಳ್ಳಿ -ಬಿಳಾಲಗುಡ್ಡೇ ರಸ್ತೆ ಹಾಗೂ 2ಲಕ್ಷ ರೂ. ವೆಚ್ಚದ ಗುಡ್ಡೇಕೇರಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಜನಸಂಖ್ಯಾಧಾರಿತ ಕ್ಷೇತ್ರ ವಿಂಗಡನೆಯಿಂದಾಗಿ ತಾಳಗುಪ್ಪ ಜಿಲ್ಲಾಪಂಚಾಯಿತಿ ಕ್ಷೇತ್ರವು ಒಂದು ವಿಧಾನ ಸಭಾ ಕ್ಷೇತ್ರಕ್ಕಿಂತ ವಿಶಾಲ ಹರಿವು ಹೊಂದಿದೆ. ತಾಲೂಕು ಕೇಂದ್ರದಿಂದ ಸುಮಾರು 100 ಕಿಮೀ ದೂರದವರೆಗೂ ವ್ಯಾಪಿಸಿದೆ. ಜಿಪಂ ಕ್ಷೇತ್ರ ವ್ಯಾಪ್ತಿಯ ಭಾರಂಗಿ ಹೋಬಳಿ ಅಭಿವೃದ್ಧಿ ವಂಚಿತ ಪ್ರದೇಶವಾಗಿದ್ದು, ಅಲ್ಲಿಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಾದ ಅಗತ್ಯವಿದೆ.

ಬಂಡಿಗಣಪತಿ,ತಡಗಳಲೆ ಚಂದ್ರಪ್ಪ,ಮರ್ಗಿ ನಾಗರಾಜ,ಅನಿಲ್‌ ಕತ್ಲೆ,ಹೂವಪ್ಪ,ಸುರೇಶ,ಜನಕರಾಜ,ಕೃಷ್ಣಪ್ಪ,ಪರಮೇಶ ಮತ್ತಿತರರು ಹಾಜರಿದ್ದರು.

========
ಕ್ಷೇತ್ರದಲ್ಲಿತಾರತಮ್ಯಕ್ಕೆ ಆಸ್ಪದವಾಗದಂತೆ ಕ್ಷೇತ್ರಾಭಿವೃದ್ಧಿಯ ಕೆಲಸ ಮಾಡಿದ್ದೇನೆ. ಇನ್ನೂ 60 ಲಕ್ಷ ರೂ.ಅನುದಾನ ದೊರೆತಿದೆ. ಇದರಿಂದ ರಸ್ತೆ ಅಭಿವೃದ್ಧಿ, ಕುಡಿಯುವ ನೀರು ಯೋಜನೆ, ಶಾಲೆ, ಹಾಸ್ಟೆಲ್‌ ಕಟ್ಟಡ ದುರಸ್ತಿ, ಕೆರೆದುರಸ್ತಿ ಮೊದಲಾದ ಕಾಮಗಾರಿ ನಿರ್ವಹಿಸಲಾಗುವುದು.
- ರಾಜಶೇಖರಗಾಳಿಪುರ, ಜಿ.ಪಂ.ಸದಸ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ