ಆ್ಯಪ್ನಗರ

ಗಂಗಾಮತಸ್ಥ ಸಮಾಜ ಶಿಕ್ಷಣಕ್ಕೆ ಆದ್ಯತೆ ನೀಡಲಿ

ಗಂಗಾಮತಸ್ಥರು ಸಮಾಜದ ಸಂಘಟನೆಯೊಂದಿಗೆ ಶಿಕ್ಷ ಣ, ಸಾಮಾಜಿಕ ಕಾರ‍್ಯಗಳಲ್ಲಿ ಒಗ್ಗಟಿನಿಂದ ಇರಬೇಕು. ಇದಕ್ಕೆ ಯುವ ಜನಾಂಗದ ಸಹಕಾರ ಅಗತ್ಯ ಎಂದು ಬೆಂಗಳೂರು ಸಹಕಾರ ಸಂಘಗಳ ಸಂಯುಕ್ತ ನಿಬಂಧಕರು ಹಾಗೂ ವಿಧಾನ ಪರಿಷತ್‌ ಪ್ರತಿ ಪಕ್ಷ ದ ನಾಯಕರ ಆಪ್ತ ಸಲಹೆಗಾರ ಕೆ.ಆರ್‌.ಧರ್ಮಪ್ಪ ಕಾಳೇಶ್ವರ ಹೇಳಿದರು.

Vijaya Karnataka 2 Mar 2019, 5:00 am
ರಿಪ್ಪನ್‌ಪೇಟೆ: ಗಂಗಾಮತಸ್ಥರು ಸಮಾಜದ ಸಂಘಟನೆಯೊಂದಿಗೆ ಶಿಕ್ಷ ಣ, ಸಾಮಾಜಿಕ ಕಾರ‍್ಯಗಳಲ್ಲಿ ಒಗ್ಗಟಿನಿಂದ ಇರಬೇಕು. ಇದಕ್ಕೆ ಯುವ ಜನಾಂಗದ ಸಹಕಾರ ಅಗತ್ಯ ಎಂದು ಬೆಂಗಳೂರು ಸಹಕಾರ ಸಂಘಗಳ ಸಂಯುಕ್ತ ನಿಬಂಧಕರು ಹಾಗೂ ವಿಧಾನ ಪರಿಷತ್‌ ಪ್ರತಿ ಪಕ್ಷ ದ ನಾಯಕರ ಆಪ್ತ ಸಲಹೆಗಾರ ಕೆ.ಆರ್‌.ಧರ್ಮಪ್ಪ ಕಾಳೇಶ್ವರ ಹೇಳಿದರು.
Vijaya Karnataka Web SMR-28RPT1


ಪಟ್ಟಣದಲ್ಲಿ ಹೊಸನಗರ ತಾಲೂಕು ಗಂಗಾಮತಸ್ಥರ ಸಭಾಭವನ ಲೋಕಾರ್ಪಣೆ ಮತ್ತು ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಒಳ್ಳೆ ಶಿಕ್ಷ ಣ ನೀಡಿದರೆ ಉನ್ನತ ಉದ್ಯೋಗ ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರುತ್ತಾರೆ. ಸರಕಾರದ ಸೌಲಭ್ಯ ಪಡೆದುಕೊಂಡು ಗ್ರಾಮಾಂತರ ಸಮಾಜದ ಬಡ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಪಡೆಯಬೇಕು. ಇದು ಸಮಾಜದ ಸಂಘಟನೆಗೆ ಸಹಕಾರಿ ಎಂದರು.

ಗಂಗಾಮತಸ್ಥರ ಸಮಾಜದ ಧರ್ಮಗುರು ನರಸೀಪುರ ನಿಜಶರಣ ಅಂಬಿಗರ ಚೌಡಯ್ಯನವರ ಗುರು ಪೀಠದ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ನೂತನ ಸಭಾಭವನ ಉದ್ಘಾಟಿಸಿ, ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ತಾಲೂಕು ಗಂಗಾಮತಸ್ಥ ಸಮಾಜದ ಅಧ್ಯಕ್ಷ ರುಕ್ತೇಶ್‌ ಚಂದಳ್ಳಿ ಅಧ್ಯಕ್ಷ ತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯ ಕಲಗೋಡು ರತ್ನಾಕರ್‌, ಜಿ.ಪಂ.ಮಾಜಿ ಸದಸ್ಯ ಬಂಡಿ ರಾಮಚಂದ್ರ, ತಾ.ಪಂ. ಅಧ್ಯಕ್ಷ ವಾಸಪ್ಪಗೌಡ,

ತಾ.ಪಂ.ಸದಸ್ಯ ಸರಸ್ವತಿಗಣಪತಿ, ಗಂಗಾಮತಸ್ಥ ಸಮಾಜದ ಪದಾಧಿಕಾರಿಗಳಾದ ಎಚ್‌.ಬಿ.ಚಿದಂಬರ್‌, ಕೆ.ವೈ.ಉಮೇಶ್‌ ಕಾಳೇಶ್ವರ, ಕೆ.ಗಣಪತಿ, ನಾಗೇಂದ್ರ ಹುಳಗದ್ದೆ, ನಾಗೇಶ್‌ ಚಂದಳ್ಳಿ, ಗ್ರಾ.ಪಂ.ಅಧ್ಯಕ್ಷೆ ಶಾರದಮ್ಮ, ಹೆದ್ದಾರಿಪುರ ಗ್ರಾ.ಪಂ.ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷ ಕೃಷ್ಣೋಜಿರಾವ್‌, ಗ್ರಾ.ಪಂ.ಸದಸ್ಯ ಆರ್‌.ರಾಘವೇಂದ್ರ,ರಾಜೇಶ್‌, ಬಿ.ಕೆ.ಗಣಪತಿ, ಅರುಣ್‌ಕುಮಾರ್‌, ಕವಿತಾ ಲಿಂಗರಾಜ್‌, ಮೈಸೂರಿನ ಡಾ.ಪೂರ್ಣಾನಂದ ಹಾಜರಿದ್ದರು. ಈ ಸಂದರ್ಭ ಹಾಲೇಶಪ್ಪ, ಸೀತಮ್ಮ, ಸವಿತಾ, ಟೀಕಾಚಾರಿ ಇನ್ನಿತರ ಹಿರಿಯರಿಗೆ ಮತ್ತು ಸ್ಥಳ ನೀಡಿದವರಿಗೆ ಸನ್ಮಾನಿಸಲಾಯಿತು. ಪಲ್ಲವಿ, ರಕ್ಷಿತಾ, ಕುಬೇರಪ್ಪ ಪ್ರಾರ್ಥಿಸಿದರು. ಕೆ.ವೈ.ಉಮೇಶ್‌ ಕಾಳೇಶ್ವರ ಸ್ವಾಗತಿಸಿ, ರುಕ್ತೇಶ್‌ ಚಂದಳ್ಳಿ ಪ್ರಾಸ್ತಾವಿಕ ಮಾತನಾಡಿದರು. ನಾಗರಾಜ್‌ ಗಾಜಿನಗೋಡು ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ